AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivamogga: ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ; ಮಾರ್ಚ್​​ 4ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಹರ್ಷ ಹತ್ಯೆ ಬಳಿಕ ಗಲಭೆ ಹಿನ್ನೆಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ಇದೀಗ ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ನೀಡಿದ್ದಾರೆ.

Shivamogga: ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ; ಮಾರ್ಚ್​​ 4ರವರೆಗೆ ನಿಷೇಧಾಜ್ಞೆ ಮುಂದುವರಿಕೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 27, 2022 | 10:30 PM

Share

ಶಿವಮೊಗ್ಗ: ನಗರದಲ್ಲಿ ನಾಳೆಯಿಂದ (ಫೆಬ್ರವರಿ 28) ಶಾಲಾ- ಕಾಲೇಜು ಪುನಾರಂಭ ಆಗಲಿದೆ. ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಗಲಭೆ ಹಿನ್ನೆಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ಇದೀಗ ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ನೀಡಿದ್ದಾರೆ. ಅದರಂತೆ ನಾಳೆಯಿಂದ ಶಾಲಾ ಕಾಲೇಜು ಮತ್ತೆ ಎಂದಿನಂತೆ ಮುಂದುವರಿಯಲಿದೆ.

ಅಲ್ಲದೆ, ಶಿವಮೊಗ್ಗ ನಗರದಲ್ಲಿ ಮತ್ತೆ ನಿಷೇಧಾಜ್ಞೆ ಮುಂದುವರಿಕೆ ಮಾಡಿ ಆದೇಶ ನೀಡಲಾಗಿದೆ. ಮಾರ್ಚ್​​ 4ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಬೆಳಗ್ಗೆ 6 ರಿಂದ ಸಂಜೆ 7ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ತುರ್ತು ಸೇವೆಗಷ್ಟೇ ಅನುಮತಿ ನೀಡಿ ಆದೇಶ ನೀಡಲಾಗಿದೆ.

ಈ ಮಧ್ಯೆ, ಇಂದು (ಫೆಬ್ರವರಿ 27) ಮೃತ ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ನಟ ಪ್ರಥಮ್ ಭೇಟಿ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಪ್ರಥಮ್ ಸಾಂತ್ವನ ಹೇಳಿದ್ದಾರೆ. ಹರ್ಷನ ಕೊಲೆ ಪ್ರಕರಣದ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಈ ರೀತಿಯ ಘಟನೆ ಯಾವತ್ತೂ ಎಲ್ಲೂ ನಡೆಯಬಾರದು. ಈ ರೀತಿಯ ಘಟನೆ ನಡೆದಾಗ ಸಮಾಜ ನೊಂದ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬಬೇಕು. ಘಟನೆ ನನಗೆ ತಡವಾಗಿ ತಿಳಿಯಿತು. ಈ ಹಿಂದೆಯೇ ಭೇಟಿ ಕೊಡಲು ಉದ್ದೇಶಿಸಿದೆ. ಆದರೆ ರಾಜಕೀಯ ಅಥವಾ ಚಿತ್ರರಂಗದ ಹಿನ್ನೆಲೆ ಕಾರಣಕ್ಕೆ ಆಗ ಬರಲಿಲ್ಲ ಎಂದು ಹೇಳಿದ್ದಾರೆ.

ಇದೀಗ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಹರ್ಷನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಶಿವಮೊಗ್ಗಕ್ಕೆ ಭೇಟಿ ನೀಡುವ ಕುರಿತು ಚಿತ್ರ ನಟ ಧ್ರುವ ಸರ್ಜಾ ಅವರಿಗೆ ವಿಷಯ ತಿಳಿಸಿದೆ. ಅವರು ನೊಂದ ಕುಟುಂಬಕ್ಕೆ ನನ್ನಿಂದ ಏನಾದ್ರೂ ಸಹಾಯ ಆಗಬೇಕೆ ಎಂದು ಕೇಳಿದ್ದಲ್ಲದೇ 5 ಲಕ್ಷ ರೂಪಾಯಿಗಳ ನೆರವು ನೀಡಿದ್ದಾರೆ. ನಾನೂ ಕೂಡ ನನ್ನ ಕೈಲಾದ ನೆರವು ನೀಡಿದ್ದೇನೆ. ಅದೇ ರೀತಿ 2014ರ ಘಟನೆಯಲ್ಲಿ ಮೃತಪಟ್ಟ ಶಿವಮೊಗ್ಗದ ವಿಶ್ವನಾಥ ಶೆಟ್ಟಿ ಮನೆಗೂ ಭೇಟಿ ನೀಡಿ ಅವರಿಗೆ ನೆರವು ನೀಡಲು ಉದ್ದೇಶಿಸಿದ್ದೇನೆ. ಇಂತಹ ಘಟನೆಗಳು ಹರ್ಷನ ಸಾವಿನೊಂದಿಗೆ ಮುಕ್ತಾಯವಾಗಬೇಕು. ಇನ್ನೆಲ್ಲೋ ಘಟನೆ ಮರುಕಳಿಸಬಾರದು. ಘಟನೆಯಿಂದ ನೊಂದಿರುವ ಕುಟುಂಬಕ್ಕೆ ನೆರೆ ಹೊರೆಯವರು, ಸಮಾಜದ ವಿವಿಧ ವರ್ಗದ ಜನರು ನೆರವು ನೀಡಲು ಮಾನಸಿಕ ಸ್ಥೈರ್ಯ ತುಂಬಲು ಮುಂದೆ ಬರಬೇಕು ಎಂದು ಹೇಳಿದ್ದಾರೆ.

ಇತ್ತ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಠೋರ ಮುಸ್ಲಿಮರು ಕಾನೂನು ಪಾಲಿಸಲು ತಯಾರಿರಲಿ. ಮುಸ್ಲಿಮರು ಶರಿಯತ್ ಕಾನೂನು ಪಾಲಿಸಲು ತಯಾರಿರಲಿ. ಹರ್ಷ ಹತ್ಯೆಗೈದವರಿಗೆ ಶರಿಯತ್​ ಪ್ರಕಾರ ಶಿಕ್ಷೆ ನೀಡ್ತೀರಾ? ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುತ್ತೀರಾ? ಕೊಲೆಗಡುಕರಿಗೆ ಶರಿಯತ್ ಕಾನೂನಿನಂತೆ ಶಿಕ್ಷೆ ನೀಡ್ತೀರಾ? ಕಠಿಣ ಶಿಕ್ಷೆ ಬೇಡ, ಹಿಜಾಬ್ ಬೇಕು ಅಂದ್ರೆ ಅದು ಆಗಲ್ಲ ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ ಎದುರು ದುಃಖ ತೋಡಿಕೊಂಡ ಮೃತ ಹರ್ಷನ ತಾಯಿ

ಇದನ್ನೂ ಓದಿ: ಶಿವಮೊಗ್ಗ ಎಸ್​ಪಿ ಟ್ರಾನ್ಸ್​ಫರ್ ಇಲ್ಲ, ಕಾನೂನು ಸುವ್ಯವಸ್ತೆಗೆ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

Published On - 5:27 pm, Sun, 27 February 22