AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dubai Millenium Duty Free Lottery | ದುಬೈ ಲಾಟರಿಯಲ್ಲಿ ರೂ 24 ಕೋಟಿ ಗೆದ್ದ ಶಿವಮೊಗ್ಗದ ಶಿವಮೂರ್ತಿ

ಕೆಲವರಿಗೆ ಲಕ್​ ಹೇಗೆ ಬರುತ್ತೆ ಎಂಬುದು ಗೊತ್ತಾಗೋದಿಲ್ಲ. ಹೀಗೆ ಲಕ್​ ಬರುವುದಕ್ಕೆ ಲಾಟರಿ ಹೊಡೆಯುವುದು ಎಂದು ಹೇಳುತ್ತಾರೆ. ಶಿವಮೊಗ್ಗ ಮೂಲದ ಶಿವಮೂರ್ತಿ ಅವರು ದುಬೈ ಮಿಲೇನಿಯಮ್​ ಡ್ಯೂಟಿ ಫ್ರೀ ಲಾಟರಿ ಗೆದ್ದು 24 ಕೋಟಿಯ ಒಡೆಯ ಆಗಿದ್ದಾರೆ.

Dubai Millenium Duty Free Lottery | ದುಬೈ ಲಾಟರಿಯಲ್ಲಿ ರೂ 24 ಕೋಟಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಪ್ರಾತಿನಿಧಿಕ ಚಿತ್ರ
ಡಾ. ಭಾಸ್ಕರ ಹೆಗಡೆ
| Edited By: |

Updated on: Mar 05, 2021 | 7:16 PM

Share

ಕೆಲವರಿಗೆ ಲಕ್​ ಯಾವಾಗ ಬರುತ್ತೆ ಎನ್ನೋದು ಗೊತ್ತಾಗೋಲ್ಲ. ಇದು ಮತ್ತೊಮ್ಮೆ ಖಚಿತವಾಗಿದೆ. ದುಬೈನಲ್ಲಿರುವ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅಲ್ಲಿ ನಡೆಸುವ ಲಾಟರಿ ಟಿಕೆಟ್ ಖರೀದಿಸಿ ಈ ಬಾರಿಯ ಡ್ರಾನಲ್ಲಿ ಬಂಪರ್​ ಬಹುಮಾನ ಗೆದ್ದು ರೂ 24 ಕೋಟಿ ತಮ್ಮದಾಗಿಸಿಕೊಂಡಿದ್ದಾರೆ. UAE ನಲ್ಲಿ ವಾಸವಾಗಿರುವ ಶಿವಮೂರ್ತಿ ಫೆಬ್ರುವರಿ 17 ರಂದು 12 ಮಿಲಿಯನ್​ ದಿರ್ಹಮ್ (ರೂ. 24 ಕೋಟಿ) ಮೊತ್ತದ ಡ್ರಾ ಮೌಲ್ಯವಿರುವ ಟಿಕೆಟ್​ ಖರೀದಿಸಿದ್ದರು. ನಿನ್ನೆ ಡ್ರಾ ಎತ್ತಿದಾಗ ಶಿವಮೂರ್ತಿ ಅವರಿಗೆ ಆಶ್ಚರ್ಯ ಕಾದಿತ್ತು. ಅದಕ್ಕೂ ಮಿಗಿಲಾಗಿ ಇಡೀ ಲಾಟರಿಯ ಡ್ರಾವನ್ನು ಲೈವ್​ನಲ್ಲಿ ತೋರಿಸಲಾಗುತ್ತಿತ್ತು. ಶಿವಮೂರ್ತಿ ಅದನ್ನು ಟಿವಿಯಲ್ಲಿ ನೋಡುತ್ತಿದ್ದರು. ಲಾಟರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರಿಚರ್ಡ್ ಫೋನ್​ ಮಾಡಿ ವಿಷಯ ತಿಳಿಸಿದಾಗ ಶಿವಮೂರ್ತಿಗೆ ಆಕಾಶದಲ್ಲಿ ತೇಲುವಷ್ಟು ಖುಷಿ. ನಾನು ಲೈವ್ ನೋಡುತ್ತಿದ್ದೇನೆ. ನನಗೆ ನಂಬೋಕೆ ಆಗುತ್ತಿಲ್ಲ ಎಂದು ಹೇಳಿದರು.

ಶಿವಮೂರ್ತಿ ಕನಸು ಏನು? ಶಿವಮೂರ್ತಿ ನಮ್ಮ ನಿಮ್ಮಂತೆ ಕನಸು ಇಟ್ಟುಕೊಂಡವರು. ನನ್ನ ಹುಟ್ಟಿದೂರಿನಲ್ಲಿ ದೊಡ್ಡದೊಂದು ಮನೆ ಕಟ್ಟಿಸಬೇಕು ಎಂಬ ಆಸೆ ಇದೆ. ಅದನ್ನು ಸಾಕಾರಗೊಳಿಸುವ ಕ್ಷಣ ಈಗ ಬಂದಿದೆ ಎಂದು ಅವರು ಹೇಳಿದರು. ನನಗೆ ಇಬ್ಬರು ಮಕ್ಕಳು. ಅವರ ಶಿಕ್ಷಣ ಮತ್ತು ಭವಿಷ್ಯಕ್ಕೋಸ್ಕರ ಇನ್ನೊಂದಿಷ್ಟು ಹಣ ಇಡುತ್ತೇನೆ, ಎಂದು ಅವರು ಲೈವ್ ಕಾರ್ಯಕ್ರಮದಲ್ಲಿ ಹೇಳಿದರು.

ಶಿವಮೂರ್ತಿ 2005ರಲ್ಲಿ ದುಬೈಗೆ ಬಂದು ಮೆಕಾನಿಕಲ್​ ಎಂಜಿನಿಯರ್ ಆಗಿ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಅವರು ತಮ್ಮ ಗೆಳೆಯರ ಜೊತೆ ಸೇರಿ ಲಾಟರಿ ಟಿಕೆಟ್​ ಖರೀದಿಸುತ್ತಿದ್ದರು. ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ನಾನೊಬ್ಬನೇ ಟಿಕೆಟ್​ ಖರೀದಿಸುತ್ತಿದ್ದೇನೆ. ಕಾಯಂ ಆಗಿ ಟಿಕೆಟ್​ ಖರೀದಿಸುವವರಿಗೆ ಅಂತ ಈ ಬಾರಿ ವಿಶೇಷ ಕೊಡುಗೆ ನೀಡುವುದಾಗಿ ಹೇಳಿದ್ದರು. ಹಾಗಾಗಿ ನಾನು ಎರಡು ಟಿಕೆಟ್​ ಖರೀದಿಸಿದ್ದೆ ಎಂದು ಶಿವಮೂರ್ತಿ ಗಲ್ಫ ನ್ಯೂಸ್​ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಮಧ್ಯೆ ದುಬೈ ಲಾಟರಿ ನಡೆಸುವ ಕಂಪೆನಿ ಹೊಸ ಯೋಜನೆಯೊಂದನ್ನು ಹಾಕಿ ಕೊಂಡಿದೆ. ಆ ಪ್ರಕಾರ, ದುಬೈ ಲಾಟರಿ ಯೋಜನೆಯ ಲೈವ್​ ಕಾರ್ಯಕ್ರಮವನ್ನು ಇನ್ನೂ ವೈವಿಧ್ಯಮಯ ಮಾಡುವ ಯೋಜನೆ ಇದೆ ಎಂದು ಲೈವ್​ನಲ್ಲಿ ಹೇಳಿದರು. ಲಕ್ಷಾಂತರ ಜನ ನಮ್ಮ ಕಾರ್ಯಕ್ರಮ ನೋಡುತ್ತಾರೆ. ಬೇರೆ ಬೇರೆ ಜನ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ಕಾರ್ಯಕ್ರಮದಲ್ಲಿ ಈಗ ಪಾಲ್ಗೊಂಡ ಜನರಿಗೆ ಪ್ರೋತ್ಸಾಹಿಸಲು ಇನ್ನೂ ಹೆಚ್ಚಿನ ತತ್​ಕ್ಷಣದ (on the spot) ಲಾಟರಿ ಯೋಜನೆಯನ್ನು ಕೈಗೊಳ್ಳುತ್ತೇವೆ. ಮುಂದಿನ ತಿಂಗಳು 5ನೇ ತಾರೀಕಿನ ದಿನ ನಡೆಯುವ ಮುಂದಿನ ಲಾಟರಿಯಲ್ಲಿ 10 ದೀರಮ್​, 5 ದೀರಮ್​ ಮತ್ತು ರೇಂಜ್​ ರೋವರ್​ ಡ್ರೀಮ್​ ಕಾರ್​ ಹಂಚುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: 

ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು 12 ಕೋಟಿ ಬಂಪರ್ ಬಹುಮಾನ! ಡಬಲ್ ಧಮಾಕಾ! ಯಾಕೆ ಗೊತ್ತಾ?

ಮಂಡ್ಯದ ಯುವಕನನ್ನು ಕೋಟ್ಯಾಧಿಪತಿ ಮಾಡಿದ ಕೇರಳದ ಲಾಟರಿ 

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?