AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ

ಮುಂಬೈ ಮೂಲದ ಶ್ರೀರಾಮ ಸಂಸ್ಥೆಯು ಕೊಡಮಾಡುವ 2020ರ ಸಾಲಿನ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿಗೆ ಸಾಹಿತಿಗಳಾದ ಕೆ.ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ ಮತ್ತು ಎಸ್​.ಎ. ವೇಂಗದಾ ಸೌಪ್ರಯಾ ನಯಾಗರ್ ಭಾಜನರಾಗಿದ್ದಾರೆ.

Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ,  ಮಧುಮಿತಾ
ಸಾಹಿತಿ ಕೆ. ನಲ್ಲತಂಬಿ, ಕೃಶಂಗಿನಿ ಮತ್ತು ಮಧುಮಿತಾ
shruti hegde
| Edited By: |

Updated on:Dec 22, 2020 | 11:41 AM

Share

ಮುಂಬೈ ಮೂಲದ ಶ್ರೀರಾಮ ಸಂಸ್ಥೆಯು ಕೊಡಮಾಡುವ 2020ರ ಸಾಲಿನ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿಗೆ ಸಾಹಿತಿಗಳಾದ ಕೆ.ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ ಮತ್ತು ಎಸ್​.ಎ. ವೇಂಗದಾ ಸೌಪ್ರಯಾ ನಯಾಗರ್ ಭಾಜನರಾಗಿದ್ದಾರೆ.

ಅನುವಾದ ಸಾಹಿತ್ಯಕ್ಕೆಂದೇ ಮೀಸಲಾಗಿರುವ ಈ ಪ್ರಶಸ್ತಿ, ಆರು ವರ್ಷಗಳಿಂದ ಪ್ರಾದೇಶಿಕ-ತಮಿಳು, ತಮಿಳು-ಪ್ರಾದೇಶಿಕ, ತಮಿಳು-ಸಂಸ್ಕೃತ, ಸಂಸ್ಕೃತ-ತಮಿಳು,  ವಿದೇಶಿ-ತಮಿಳು, ತಮಿಳು-ವಿದೇಶಿ ಭಾಷೆಗಳ ಅನುವಾದಕರನ್ನು ಗುರುತಿಸಿ ಪುರಸ್ಕರಿಸುತ್ತ ಬಂದಿದೆ. ಕೃಶಾಂಗಿನಿಯವರು ಹಿಂದಿಯಿಂದ ತಮಿಳಿಗೆ, ಮಧುಮಿತಾ ಅವರು ಸಂಸ್ಕೃತದಿಂದ ತಮಿಳಿಗೆ, ವೇಂಗದಾ ಅವರು ಫ್ರೆಂಚ್​ನಿಂದ ತಮಿಳಿಗೆ ಕೃತಿಗಳನ್ನು ಅನುವಾದಿಸಿದ್ದಾರೆ.

‘ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕ. ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ನಿವೃತ್ತಿಯಾದ ಮೇಲೆ ಏನು ಮಾಡುವುದೆಂದು ತೋರದೆ ಸುಮ್ಮನೆ ಲಂಕೇಶರ ‘ನೀಲು ಕಾವ್ಯ’ಗಳನ್ನು ತಮಿಳಿಗೆ ಅನುವಾದಿಸಲಾರಂಭಿಸಿದೆ. ಹೆಂಡತಿ ಮಲ್ಲಿಕಾಳ ಒತ್ತಾಯ,  ಒಂದಿಷ್ಟು ಪರಿಶ್ರಮದ ನಂತರ ಪತ್ರಿಕೆಗಳಿಗೆ ಕಳಿಸಿದೆ, ಪ್ರಕಟವಾದವು. ನಂತರ ಫೇಸ್​ಬುಕ್​ ಕವಿತೆಗಳನ್ನು ಕನ್ನಡಕ್ಕೂ, ತಮಿಳಿಗೂ ಅನುವಾದಿಸಲಾರಂಭಿಸಿದೆ. ಕೊರೋನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಪ್ರಶಸ್ತಿ ನನ್ನ ಅನುವಾದ ಯಾನಕ್ಕೆ  ಚೈತನ್ಯ ಸ್ಫುರಿಸಿದೆ.  ಈ ಗೌರವ ನನಗೆ ಮಾತ್ರವಲ್ಲ, ಅನುವಾದ ಕ್ಷೇತ್ರಕ್ಕೂ ಸಲ್ಲುವಂಥದ್ದು. ಹೆಚ್ಚೆಚ್ಚು ಅನುವಾದಗಳು ಹೊರಬರಲಿ, ಪರಸ್ಪರ ಭಾಷಿಕರು ಓದುವಂತಾಗಲಿ.’ ಎಂದು  2020ರ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿ ಪುರಸ್ಕೃತ  ಕೆ. ನಲ್ಲತಂಬಿ tv9 ಡಿಜಿಟಲ್ ನೊಂದಿಗೆ ಅಭಿಪ್ರಾಯ ಹಂಚಿಕೊಂಡರು. 

ನಲ್ಲತಂಬಿಯವರನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಪೆರುಮಾಳ್ ಮುರುಗನ್ ಅವರ ‘ಅರ್ಧನಾರೀಶ್ವರ’. ನಂತರ ವಿವೇಕ ಶಾನಭಾಗರ ‘ಘಾಚರ್ ಘೋಚರ್’, ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’, ವಸುಧೇಂದ್ರರ ‘ಮೋಹನಸ್ವಾಮಿ’, ಎಸ್. ದಿವಾಕರ್ ಅವರ ‘ಇತಿಹಾಸ’, ಜಯಂತ ಕಾಯ್ಕಿಣಿಯವರ ‘ತೂಫಾನ್ ಮೇಲ್’, ರೇಣುಕಾ ನಿಡಗುಂದಿಯವರ ‘ಅಮೃತ ನೆನಪುಗಳು’ ಬಿ.ವಿ.ಭಾರತಿಯವರ ‘ಸಾಸುವೆ ತಂದವಳು’  ಕೃತಿಗಳನ್ನು ತಮಿಳಿಗೆ ಅನುವಾದಿಸಿದರು. ಸುಂದರ ರಾಮಾಸ್ವಾಮಿಯವರ  ‘ಒರು ಪುಳಿಯ ಮರತ್ತಿನ್ ಕದೈ’, ನೇಮಿಚಂದ್ರರ ‘ಯಾದ್ವಶೇಮ್’, ಜಿ.ಎನ್.ನಾಗರಾಜರ ‘ನಿಜ ರಾಮಯಣದ ಅನ್ವೇಷಣೆ’, ಪೆರುಮಾಳ್ ಮುರುಗನ್ ‘ಹೂ ಕೊಂಡ’, ತಮಿಳು ಹತ್ತು ಕಥೆಗಳು ಕನ್ನಡಕ್ಕೂ ಅನುವಾದಗೊಂಡವು.

ಬೆಳಗೆರೆ ಬೆಳಗಿಸಿದ ಅನುವಾದ ಲೋಕ; ರಾಜ್ಯೋತ್ಸವದ ವೇಳೆ ಕನ್ನಡದ ಕಟ್ಟಾಳುವನ್ನ ಕಳೆದುಕೊಂಡ ಸಾರಸ್ವತ ಲೋಕ

Published On - 1:07 pm, Mon, 21 December 20

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!