AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ

ಮುಂಬೈ ಮೂಲದ ಶ್ರೀರಾಮ ಸಂಸ್ಥೆಯು ಕೊಡಮಾಡುವ 2020ರ ಸಾಲಿನ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿಗೆ ಸಾಹಿತಿಗಳಾದ ಕೆ.ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ ಮತ್ತು ಎಸ್​.ಎ. ವೇಂಗದಾ ಸೌಪ್ರಯಾ ನಯಾಗರ್ ಭಾಜನರಾಗಿದ್ದಾರೆ.

Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ,  ಮಧುಮಿತಾ
ಸಾಹಿತಿ ಕೆ. ನಲ್ಲತಂಬಿ, ಕೃಶಂಗಿನಿ ಮತ್ತು ಮಧುಮಿತಾ
shruti hegde
| Edited By: |

Updated on:Dec 22, 2020 | 11:41 AM

Share

ಮುಂಬೈ ಮೂಲದ ಶ್ರೀರಾಮ ಸಂಸ್ಥೆಯು ಕೊಡಮಾಡುವ 2020ರ ಸಾಲಿನ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿಗೆ ಸಾಹಿತಿಗಳಾದ ಕೆ.ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ ಮತ್ತು ಎಸ್​.ಎ. ವೇಂಗದಾ ಸೌಪ್ರಯಾ ನಯಾಗರ್ ಭಾಜನರಾಗಿದ್ದಾರೆ.

ಅನುವಾದ ಸಾಹಿತ್ಯಕ್ಕೆಂದೇ ಮೀಸಲಾಗಿರುವ ಈ ಪ್ರಶಸ್ತಿ, ಆರು ವರ್ಷಗಳಿಂದ ಪ್ರಾದೇಶಿಕ-ತಮಿಳು, ತಮಿಳು-ಪ್ರಾದೇಶಿಕ, ತಮಿಳು-ಸಂಸ್ಕೃತ, ಸಂಸ್ಕೃತ-ತಮಿಳು,  ವಿದೇಶಿ-ತಮಿಳು, ತಮಿಳು-ವಿದೇಶಿ ಭಾಷೆಗಳ ಅನುವಾದಕರನ್ನು ಗುರುತಿಸಿ ಪುರಸ್ಕರಿಸುತ್ತ ಬಂದಿದೆ. ಕೃಶಾಂಗಿನಿಯವರು ಹಿಂದಿಯಿಂದ ತಮಿಳಿಗೆ, ಮಧುಮಿತಾ ಅವರು ಸಂಸ್ಕೃತದಿಂದ ತಮಿಳಿಗೆ, ವೇಂಗದಾ ಅವರು ಫ್ರೆಂಚ್​ನಿಂದ ತಮಿಳಿಗೆ ಕೃತಿಗಳನ್ನು ಅನುವಾದಿಸಿದ್ದಾರೆ.

‘ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕ. ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ನಿವೃತ್ತಿಯಾದ ಮೇಲೆ ಏನು ಮಾಡುವುದೆಂದು ತೋರದೆ ಸುಮ್ಮನೆ ಲಂಕೇಶರ ‘ನೀಲು ಕಾವ್ಯ’ಗಳನ್ನು ತಮಿಳಿಗೆ ಅನುವಾದಿಸಲಾರಂಭಿಸಿದೆ. ಹೆಂಡತಿ ಮಲ್ಲಿಕಾಳ ಒತ್ತಾಯ,  ಒಂದಿಷ್ಟು ಪರಿಶ್ರಮದ ನಂತರ ಪತ್ರಿಕೆಗಳಿಗೆ ಕಳಿಸಿದೆ, ಪ್ರಕಟವಾದವು. ನಂತರ ಫೇಸ್​ಬುಕ್​ ಕವಿತೆಗಳನ್ನು ಕನ್ನಡಕ್ಕೂ, ತಮಿಳಿಗೂ ಅನುವಾದಿಸಲಾರಂಭಿಸಿದೆ. ಕೊರೋನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಪ್ರಶಸ್ತಿ ನನ್ನ ಅನುವಾದ ಯಾನಕ್ಕೆ  ಚೈತನ್ಯ ಸ್ಫುರಿಸಿದೆ.  ಈ ಗೌರವ ನನಗೆ ಮಾತ್ರವಲ್ಲ, ಅನುವಾದ ಕ್ಷೇತ್ರಕ್ಕೂ ಸಲ್ಲುವಂಥದ್ದು. ಹೆಚ್ಚೆಚ್ಚು ಅನುವಾದಗಳು ಹೊರಬರಲಿ, ಪರಸ್ಪರ ಭಾಷಿಕರು ಓದುವಂತಾಗಲಿ.’ ಎಂದು  2020ರ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿ ಪುರಸ್ಕೃತ  ಕೆ. ನಲ್ಲತಂಬಿ tv9 ಡಿಜಿಟಲ್ ನೊಂದಿಗೆ ಅಭಿಪ್ರಾಯ ಹಂಚಿಕೊಂಡರು. 

ನಲ್ಲತಂಬಿಯವರನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಪೆರುಮಾಳ್ ಮುರುಗನ್ ಅವರ ‘ಅರ್ಧನಾರೀಶ್ವರ’. ನಂತರ ವಿವೇಕ ಶಾನಭಾಗರ ‘ಘಾಚರ್ ಘೋಚರ್’, ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’, ವಸುಧೇಂದ್ರರ ‘ಮೋಹನಸ್ವಾಮಿ’, ಎಸ್. ದಿವಾಕರ್ ಅವರ ‘ಇತಿಹಾಸ’, ಜಯಂತ ಕಾಯ್ಕಿಣಿಯವರ ‘ತೂಫಾನ್ ಮೇಲ್’, ರೇಣುಕಾ ನಿಡಗುಂದಿಯವರ ‘ಅಮೃತ ನೆನಪುಗಳು’ ಬಿ.ವಿ.ಭಾರತಿಯವರ ‘ಸಾಸುವೆ ತಂದವಳು’  ಕೃತಿಗಳನ್ನು ತಮಿಳಿಗೆ ಅನುವಾದಿಸಿದರು. ಸುಂದರ ರಾಮಾಸ್ವಾಮಿಯವರ  ‘ಒರು ಪುಳಿಯ ಮರತ್ತಿನ್ ಕದೈ’, ನೇಮಿಚಂದ್ರರ ‘ಯಾದ್ವಶೇಮ್’, ಜಿ.ಎನ್.ನಾಗರಾಜರ ‘ನಿಜ ರಾಮಯಣದ ಅನ್ವೇಷಣೆ’, ಪೆರುಮಾಳ್ ಮುರುಗನ್ ‘ಹೂ ಕೊಂಡ’, ತಮಿಳು ಹತ್ತು ಕಥೆಗಳು ಕನ್ನಡಕ್ಕೂ ಅನುವಾದಗೊಂಡವು.

ಬೆಳಗೆರೆ ಬೆಳಗಿಸಿದ ಅನುವಾದ ಲೋಕ; ರಾಜ್ಯೋತ್ಸವದ ವೇಳೆ ಕನ್ನಡದ ಕಟ್ಟಾಳುವನ್ನ ಕಳೆದುಕೊಂಡ ಸಾರಸ್ವತ ಲೋಕ

Published On - 1:07 pm, Mon, 21 December 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ