AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮುಂದೆ ಬೆಂಕಿ ಕೊಂಡ ಹಾಕಿ ಮಾರಮ್ಮನಿಗೆ ಪೂಜೆ: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ವಿಶೇಷ ಪೂಜೆ

ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಈ ವಿಶಿಷ್ಟ ಆಚರಣೆ ನಡೆದಿದೆ. ಮನೆ ಮುಂದೆಯ ಕೊಂಡಕ್ಕೆ ಬೇವಿನ ಸೊಪ್ಪು ಹಾಕಿ ಮಾರಿ ಪೂಜೆ ನೆರವೇರುತ್ತಿದೆ. ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ ಗ್ರಾಮಸ್ಥರದ್ದಾಗಿದೆ.

ಮನೆ ಮುಂದೆ ಬೆಂಕಿ ಕೊಂಡ ಹಾಕಿ ಮಾರಮ್ಮನಿಗೆ ಪೂಜೆ:  ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ವಿಶೇಷ ಪೂಜೆ
ಮನೆ ಮುಂದೆ ಬೆಂಕಿ ಕೊಂಡ ಹಾಕಿ ಮಾರಮ್ಮನಿಗೆ ಪೂಜೆ: ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರಿನಲ್ಲಿ ವಿಶೇಷ ಪೂಜೆ
ಸಾಧು ಶ್ರೀನಾಥ್​
|

Updated on: May 14, 2021 | 11:01 AM

Share

ಮೈಸೂರು: ಮಾಜಿ ಮುರ್ಖಯಮಂತ್ರಿ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಕೊರೊನಾ ಮಾರಿಯನ್ನು ಓಡಿಸಲು ವಿಶೇಷ ಪೂಜೆ ನಡೆಯುತ್ತಿದೆ. ಮುಂದಿನ ಹುಣ್ಣಿಮೆಯವರೆಗೂ ಒಂದು ತಿಂಗಳ ಸುದೀರ್ಘ ಕಾಲ ಈ ವಿಶೇಷ ಕೊರೊನಾ ಪೂಜೆ ನಡೆಯಲಿದೆ. ಮನೆ ಮುಂದೆ ಬೆಂಕಿ ಕೊಂಡ ಹಾಕಿ ಮಾರಮ್ಮನಿಗೆ ಪೂಜೆ ನೆರವೇರಿಸಲಾಗುತ್ತಿದೆ. ಮಕ್ಕಳು ಮಹಿಳೆಯರು ವೃದ್ದರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಜೀರ್ಣೋದ್ಧಾರ ಮಾಡಿದ ಶ್ರೀರಾಮ ಮಂದಿರವನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರು ಸರಳ ಪೂಜೆ ಮೂಲಕ ಕಳೆದ ತಿಂಗಳು ಉದ್ಘಾಟಿಸಿದ್ದರು ಎಂಬುದು ಗಮನಾರ್ಹ.

ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ

special puja to eradicate coronavirus by villagers in former cm siddaramaiah native village siddaramanahundi (4)

ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ ಗ್ರಾಮಸ್ಥರದ್ದಾಗಿದೆ

ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಈ ವಿಶಿಷ್ಟ ಆಚರಣೆ ನಡೆದಿದೆ. ಮನೆ ಮುಂದೆಯ ಕೊಂಡಕ್ಕೆ ಬೇವಿನ ಸೊಪ್ಪು ಹಾಕಿ ಮಾರಿ ಪೂಜೆ ನೆರವೇರುತ್ತಿದೆ. ಬೇವಿನ ಸೊಪ್ಪಿನ ಕಹಿಗೆ ವೈರಸ್ ತೊಲಗುತ್ತೆ ಅನ್ನೊ ನಂಬಿಕೆ ಗ್ರಾಮಸ್ಥರದ್ದಾಗಿದೆ.

special puja to eradicate coronavirus by villagers in former cm siddaramaiah native village siddaramanahundi (1)

ಕೊರೊನಾ ತೊಲಗಿ, ಗ್ರಾಮಕ್ಕೆ ಒಳಿತಾಗಲಿ ಅಂತಾ ಸೂರ್ಯ ಮುಳುಗಿದ ತಕ್ಷಣ ಮನೆ ಮುಂದೆ ಅಗ್ನಿ ಕೊಂಡಕ್ಕೆ ಪೂಜೆ ನಡೆಯುತ್ತದೆ.

ಸೂರ್ಯ ಮುಳುಗಿದ ತಕ್ಷಣ ಮನೆ ಮುಂದೆ ಅಗ್ನಿ ಕೊಂಡಕ್ಕೆ ಪೂಜೆ ನಡೆಯುತ್ತದೆ. ಕೊರೊನಾ ತೊಲಗಿ, ಗ್ರಾಮಕ್ಕೆ ಒಳಿತಾಗಲಿ ಅಂತಾ ಪೂಜಾ ಕೈಂಕರ್ಯದ ಹಿಂದಿನ ಉದ್ದೇಶವಾಗಿದೆ. ಮನೆ ಮುಂದೆ ಪೂಜೆ ಮುಗಿದ ಬಳಿಕ, ಗ್ರಾಮದ ಮಾರಮ್ಮನಿಗೆ ಹರಕೆ ಹೊತ್ತಿಕೊಳ್ಳುತ್ತಿದ್ದಾರೆ.

(special puja to eradicate coronavirus by villagers in former cm siddaramaiah native village siddaramanahundi)

Photos | ಸಿದ್ದರಾಮನಹುಂಡಿಯಲ್ಲಿ ಈ ಬಾರಿ ರಾಮನವಮಿ ಬಲುಜೋರು! ಮಾಜಿ CM ಸಿದ್ದರಾಮಯ್ಯ ಹೇಳಿದಂತೆ ಅಲ್ಲಿ ನಿರ್ಮಾಣವಾಗ್ತಿದೆ ರಾಮ ಮಂದಿರ..