ನಾಳೆಯ ಹವಾಮಾನ: ಬೀದರ್​​ನಲ್ಲಿ ನಿಲ್ಲದ ಚಳಿ ಅಬ್ಬರ; ಹೇಗಿರಲಿದೆ ಬೆಂಗಳೂರು ವಾತಾವರಣ?

Karnataka Weather Tomorrow: ರಾಜ್ಯದಲ್ಲಿ ನಾಳೆ ಒಣಹವೆ ಮುಂದುವರಿಯಲಿದ್ದು, ಹಲವೆಡೆ ಚಳಿ ಹೆಚ್ಚಾಗಲಿದೆ. ಬೀದರ್‌ನಲ್ಲಿ ಚಳಿ ಅಬ್ಬರ ಮುಂದುವರಿದು, ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣದ ಜೊತೆ ಚಳಿಯ ಅನುಭವವಾಗಲಿದೆ. ಒಳನಾಡು ಜಿಲ್ಲೆಗಳಲ್ಲಿ ಮಂಜು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮಳೆಯ ಸೂಚನೆ ಇಲ್ಲ. ರಾಜ್ಯದ ಪ್ರಮುಖ ನಗರಗಳ ಕನಿಷ್ಠ ಉಷ್ಣಾಂಶ ಎಷ್ಟು ಎನ್ನುವ ಮಾಹಿತಿಯೂ ಇಲ್ಲಿದೆ.

ನಾಳೆಯ ಹವಾಮಾನ: ಬೀದರ್​​ನಲ್ಲಿ ನಿಲ್ಲದ ಚಳಿ ಅಬ್ಬರ; ಹೇಗಿರಲಿದೆ ಬೆಂಗಳೂರು ವಾತಾವರಣ?
ಚಳಿ

Updated on: Dec 17, 2025 | 6:34 PM

ಬೆಂಗಳೂರು, ಡಿಸೆಂಬರ್​​ 17: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಾಳೆ ಒಣಹವೆ ಕಂಡುಬರಲಿದೆ. ಮುಂಜಾನೆ ವೇಳೆಗೆ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ ಕಂಡುಬರಲಿದ್ದು, ಹಲವು ಜಿಲ್ಲೆಗಳಲ್ಲಿ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಚಳಿ ಹೆಚ್ಚಾಗುವ ನಿರೀಕ್ಷೆಯಿದ್ದು, ಮಳೆಯ ಬಗ್ಗೆ ಯಾವುದೇ ಸೂಚನೆ ಇಲ್ಲ.

ಕರ್ನಾಟಕದ ಉತ್ತರ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಬೆಳಗಿನ ಹೊತ್ತಿನಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಹಗಲಿನ ವೇಳೆ ಸಾಮಾನ್ಯ ಉಷ್ಣಾಂಶ ಇರಲಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಮಳೆಯ ಸಾಧ್ಯತೆ ಇಲ್ಲದಿದ್ದರೂ ಕೊಂಚ ಮಟ್ಟಿನ ತಂಪಿನ ವಾತಾವರಣ ಕಂಡುಬರಲಿದೆ. ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾಗಶಃ ಮೋಡ ಇರಲಿದ್ದು, ತಂಪು ವಾತಾವರಣದ ಅನುಭವವಾಗಲಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ದಾಖಲಾಯ್ತು 7 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕನಿಷ್ಠ ಉಷ್ಣಾಂಶ ಮಾಹಿತಿ

ಬೆಂಗಳೂರು ನಗರದಲ್ಲಿ 15°C, ಬೆಂಗಳೂರು ಗ್ರಾಮಾಂತರ 14°C, ಮೈಸೂರು 14°C, ಮಂಡ್ಯ 15°C, ರಾಮನಗರ 14°C, ತುಮಕೂರು 13°C, ಕೋಲಾರ 13°C, ಚಿಕ್ಕಬಳ್ಳಾಪುರ 12°C, ಚಾಮರಾಜನಗರ 14°C, ಬೆಳಗಾವಿ 13°C, ಧಾರವಾಡ 14°C, ಹಾವೇರಿ 14°C, ಗದಗ 15°C, ಬಾಗಲಕೋಟೆ 15°C, ವಿಜಯಪುರ 16°C, ಬೀದರ್ 12°C, ಕಲಬುರಗಿ 16°C, ಯಾದಗಿರಿ 15°C, ಕೊಪ್ಪಳ 16°C, ಬಳ್ಳಾರಿ 17°C, ರಾಯಚೂರು 17°C, ದಕ್ಷಿಣ ಕನ್ನಡ 22°C, ಉಡುಪಿ 22°C, ಉತ್ತರ ಕನ್ನಡ 21°C, ಶಿವಮೊಗ್ಗ 16°C, ಚಿಕ್ಕಮಗಳೂರು 15°C ಮತ್ತು ಕೊಡಗಿನಲ್ಲಿ 14°C ಕನಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.