AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಡಿಸಿ, ಕಮೀಷನರ್​ ಮರುನಿಯುಕ್ತ ವಿಚಾರ: ನನ್ನ ಪ್ರಕಾರ ಬಿಬಿಎಂಪಿ ಆಯುಕ್ತರು ಕೂಡ ಶಾಮೀಲಾಗಿದ್ದಾರೆ: ಸಿದ್ದರಾಮಯ್ಯ

ಸರ್ಕಾರ ಮರುನಿಯುಕ್ತ ಮಾಡುವ ಅಗತ್ಯ ಇರಲಿಲ್ಲಾ. ನನ್ನ ಪ್ರಕಾರ ಕಮೀಷನರ್ ಆಫ್ ಬೆಂಗಳೂರು ಕಾರ್ಪೋರೇಷನ್ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು ಡಿಸಿ, ಕಮೀಷನರ್​ ಮರುನಿಯುಕ್ತ ವಿಚಾರ: ನನ್ನ ಪ್ರಕಾರ ಬಿಬಿಎಂಪಿ ಆಯುಕ್ತರು ಕೂಡ ಶಾಮೀಲಾಗಿದ್ದಾರೆ: ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ಧರಾಮಯ್ಯ (ಸಂಗ್ರಹ ಚಿತ್ರ)
TV9 Web
| Edited By: |

Updated on:Dec 24, 2022 | 6:32 PM

Share

ತುಮಕೂರು: ಸರ್ಕಾರ ಮರುನಿಯುಕ್ತ ಮಾಡುವ ಅಗತ್ಯ ಇರಲಿಲ್ಲಾ. ನನ್ನ ಪ್ರಕಾರ ಕಮೀಷನರ್ ಆಫ್ ಬೆಂಗಳೂರು ಕಾರ್ಪೋರೇಷನ್ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.  ಬೆಂಗಳೂರು ನಗರ ಜಿಲ್ಲಾಧಿಕಾರಿ, ಕಮಿಷನರ್​ ನಿರುಪಯುಕ್ತ (Bengaluru DC, Commissioner re-appointment) ವಿಚಾರವಾಗಿ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ, ಅವರದ್ದು ಜವಾಬ್ದಾರಿ ಇಲ್ವಾ? ಬರೀ ಅಧಿಕಾರಿಗಳದ್ದಷ್ಟೇನಾ ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ. ಅವರು ಶಾಮೀಲಾಗಿದ್ದಾರೆ, ಸಸ್ಪೆಂಡ್ ಮಾಡಿ ಅಂತಾ ಎಲೆಕ್ಷನ್ ಕಮೀಷನ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅವರನ್ನ ರಿವೋಕ್ ಮಾಡೋದು ಒಳ್ಳೇದಲ್ಲಾ‌‌ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಕರ್ನಾಟಕದಲ್ಲಿ ಈಗಾಗಲೇ 50% ರಿಸರ್ವೇಷನ್ ಇದೆ

ಮೀಸಲಾತಿಗಾಗಿ ಹೋರಾಟ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಹಿಂದುಳಿದ ವರ್ಗಗಳ ಆಯೋಗ ಇದೆ. ಅವರು ಯಾರು ಯಾರಿಗೆ ಶಿಫಾರಸ್ಸು ಮಾಡುತ್ತಾರೋ ಎಲ್ಲರಿಗೂ ಕೊಡಲಿ. ಎಸ್ಸಿಗೆ 15 ರಿಂದ 17, ಎಸ್ಟಿಗೆ 3 ರಿಂದ 7 ಒಟ್ಟು 6% ಹೆಚ್ಚಿಸಿದೆ. ಕರ್ನಾಟಕದಲ್ಲಿ ಈಗಾಗಲೇ 50% ರಿಸರ್ವೇಷನ್ ಇದೆ. 56% ಮಾಡಬೇಕಾದ್ರೆ ಸೀಲಿಂಗ್ ಇದೆ. ಅದು ಮಾಡಬೇಕಾದ್ರೆ ಕಾನ್ ಸ್ಟಿಟ್ಯೂಶನ್ ಅಮೆಂಡ್ಮೆಂಟ್ ಆಗಬೇಕು. ಅದು ಆಗಬೇಕಾದ್ರೆ 9th ಶೆಡ್ಯೂಲ್​ನಲ್ಲಿ ಸೇರಿಸಬೇಕು, ಅದು ಮಾಡಿದ್ದಾರಾ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ವರ್ಧೆ ವಿಷಯ ತಿಳಿದು ಅಭಿಮಾನಿಗಳಿಗೆ ದಿಲ್​ಖುಷ್

ಡಬಲ್ ಇಂಜಿನ್ ಸರ್ಕಾರ ಅಲ್ವಾ?

ಡಬಲ್ ಇಂಜಿನ್ ಸರ್ಕಾರ ಅಲ್ವಾ? ಮೊದಲು ಅದನ್ನ ಮಾಡಬೇಕು ಅಲ್ವಾ? ಕಣ್ಣೊರಿಸೋ ತಂತ್ರ ಇದು. ಚುನಾವಣೆಗೋಸ್ಕರ ಮಾಡಿರೋ ಗಿಮಿಕ್. ನಾವು ಸರ್ವ ಪಕ್ಷ ಸಭೆಯಲ್ಲಿ ಹೆಚ್ಚು ಮಾಡಿ ಅಂತಾ ಹೇಳಿದ್ದೀವಿ. ನಾಗಮೋಹನ್ ದಾಸ್ ಕಮೀಷನ್ ಮಾಡಿದವರೇ ನಾವು. ಪ್ರಿಯಾಂಕ್​ ಖರ್ಗೆ ಸಚಿವರಾಗಿದ್ದಾಗ 257 ದಿನ ಪರಿಶಿಷ್ಟ ವರ್ಗದ ಸ್ವಾಮೀಜಿ ಧರಣಿ ಕುಳಿತಿದ್ದರು. ಬಳಿಕ ನಾವು ಒತ್ತಡ ಹಾಕಿದ್ಮೇಲೆ, ವಿಧಿ ಇಲ್ಲದೇ ಮಾಡಿದರು ಎಂದು ಹೇಳಿದರು.

ಬಿಜೆಪಿ ಅವರು ಮೀಸಲಾತಿ ವಿರೋಧಿಗಳು

ಬಿಜೆಪಿ ಅವರು ಮೀಸಲಾತಿ ವಿರೋಧಿಗಳು. ಇವರಿಗೆ ಎಲ್ಲಿ ಬದ್ದತೆ ಇದೆ. ಪಂಚಮಸಾಲಿಗೆ 29ರಂದು ಸಿಎಂ ಮೀಸಲಾತಿ ಘೋಷಣೆ ವಿಚಾರವಾಗಿ ಅವರು ಮಾತನಾಡಿ, ನನಗೆ ಗೊತ್ತಿಲ್ಲಾ, ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಬರಬೇಕಲ್ವಾ. ವರದಿ ಬಂದ ಮೇಲೆ ನೋಡೋಣ ಮಾತಾಡ್ತೀನಿ. ಅವಧಿ ಪೂರ್ಣ ಚುನಾವಣೆ ಬರುತ್ತೆ ಅಂತಾ ನನಗೆ ಅನಿಸೋದಿಲ್ಲಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: Congress Bus Yatra:ಕರ್ನಾಟಕ ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ಮೀಸಲಾತಿ ಹೋರಾಟ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ

ಪಂಚಮಸಾಲಿ ಲಿಂಗಾಯಿತರಿಂದ ಮೀಸಲಾತಿ ಹೋರಾಟ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಅಂಗವಿಕಲರಿಗೆ, ನಡೆಯೋಕೆ ಆಗದೇ ಇರೋರಿಗೆ ಊರುಗೋಲು ಕೊಡಬೇಕು. ಪೈಲ್ವಾನ್​ಗಳಿಗೆ ಊರುಗೋಲು ಕೊಡೋಕೆ ಹೊರಟ್ಟಿದ್ದಾರೆ. ಅದು ಅವರಿಗೆ ಅವಶ್ಯಕತೆ ಇಲ್ಲಾ. ನಡೆಯೋಕೆ ಆಗುತ್ತೆ ಅವರಿಗೆ. ಅವರು ಆ ಊರುಗೋಲಿನಿಂದ ಎಲ್ಲರಿಗೂ ಹೋಡಿಯೋಕೆ ಶುರುಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:31 pm, Sat, 24 December 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು