AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ನಾನು ರಾಜಕಾರಣ ಮಾತನಾಡಲ್ಲ; ಮಾಧುಸ್ವಾಮಿ ಮಗನ ಮದುವೆಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

ದೇವೇಗೌಡರ ಹಸ್ತಲಾಘವ ಮಾಡಿದ ಸಿಎಂ, ಅವರು ನಮ್ಮ ಹಿರಿಯರು. ಅವರ ಮಾರ್ಗದರ್ಶನ ಯಾವಾಗಲೂ ಇದ್ದೇ ಇರುತ್ತೆ. ರಾಜಕೀಯ ಏನೂ ಮಾತನಾಡಿಲ್ಲ. ಯಾವಾಗ ಬೆಂಗಳೂರಿಗೆ ಬರ್ತಿಯ ಅಂತ ಕೇಳಿದ್ರು.

ಇಲ್ಲಿ ನಾನು ರಾಜಕಾರಣ ಮಾತನಾಡಲ್ಲ; ಮಾಧುಸ್ವಾಮಿ ಮಗನ ಮದುವೆಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ
ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡ.
TV9 Web
| Edited By: |

Updated on: Apr 21, 2022 | 3:46 PM

Share

ತುಮಕೂರು: ಮಾಧುಸ್ವಾಮಿ ನಮ್ಮ ನಡುವೆ ಯಾವುದೇ ಹೋರಾಟ ಇಲ್ಲ. ಅವರ ಫ್ಯಾಮಿಲಿ ಮದುವೆಗೆ ಬಂದಿದ್ದೇನೆ, ಆಶಿರ್ವಾದ ಮಾಡಿದ್ದೇನೆ. ಇಲ್ಲಿ ನಾನು ರಾಜಕಾರಣ ಮಾತನಾಡಲ್ಲ ಎಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಮಾಧುಸ್ವಾಮಿಯವರ ಮಗನ ಮದುವೆ (Marriage) ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಪ್ರಧಾನಿ ದೇವೆಗೌಡರು ಮದುವೆ ಸಮಾರಂಭದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ವದು ವರರನ್ನ ಆಶಿರ್ವಾದ ಮಾಡಿ ಬರುವಾಗ ದೇವೇಗೌಡರನ್ನ ಸಿಎಂ ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮದುವೆ ಚೆನ್ನಾಗಿತ್ತು, ಮಾಧುಸ್ವಾಮಿಯವರ ಆತಿಥ್ಯ ಚೆನ್ನಾಗಿತ್ತು. ಮದುವೆಯಲ್ಲೂ ಕೂಡ ಯತಾ ಪ್ರಕಾರವಾಗಿ ಹೆಂಗಿರ್ಬೇಕೋ ಹಾಗೇ ಇದ್ರು. ನಗಮುಖದಿ ಹಾರೈಸಿ ಊಟ ಮಾಡಿ ಅಂದ್ರು.

ದೇವೇಗೌಡರ ಹಸ್ತಲಾಘವ ಮಾಡಿದ ಸಿಎಂ, ಅವರು ನಮ್ಮ ಹಿರಿಯರು. ಅವರ ಮಾರ್ಗದರ್ಶನ ಯಾವಾಗಲೂ ಇದ್ದೇ ಇರುತ್ತೆ. ರಾಜಕೀಯ ಏನೂ ಮಾತನಾಡಿಲ್ಲ. ಯಾವಾಗ ಬೆಂಗಳೂರಿಗೆ ಬರ್ತಿಯ ಅಂತ ಕೇಳಿದ್ರು. ಬಂದ ತಕ್ಷಣ ಫೋನ್ ಮಾಡಿ ಅಂತ ಹೇಳಿದ್ರು. ಕುಮಾರಸ್ವಾಮಿಯವರು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿರುವ ವಿಚಾರವಾಗಿ ಮಾತನಾಡಿದ್ದು, ಯಾವ ಸಾಫ್ಟೂ ಕಾರ್ನರೂ ಇಲ್ಲ. ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಹೇಳಿದರು. ಸಿಎಂಗೆ ಸಚಿವರಾದ ಅರಗ ಜ್ಞಾನೇಂದ್ರ, ಬಿಸಿ ಪಾಟೀಲ್, ಅಶ್ವಥ್ ನಾರಾಯಣ,ಬೈರತಿ ಬಸವರಾಜ್, ಬಿಸಿ ನಾಗೇಶ್ ಸೇರಿದಂತೆ ಹಲವರು ಸಾಥ್ ನೀಡಿದರು.

ಇದನ್ನೂ ಓದಿ:

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ವಿಚಾರ; ಶಾಸಕ ಎಮ್. ವೈ. ಪಾಟೀಲ್ ಗನ್​​ಮ್ಯಾನ್​ ಅಯ್ಯಣ್ಣ ದೇಸಾಯಿ ಸಿಐಡಿ ವಶಕ್ಕೆ

ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಜೊತೆಗೆ ಪೆಟ್ರೋಲ್ ಧಾರೆ! ಮಾಲೂರಿನಲ್ಲಿ ಉಚಿತ ಪೆಟ್ರೋಲಿಗೆ ಮುಗಿಬಿದ್ದ ಬೈಕ್ ಸವಾರರು!

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ