AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆ ಪಡೆಯದಿದ್ದರೆ ಪರಿಹಾರವಿಲ್ಲ: ಸಚಿವ ಜೆಸಿ ಮಾಧುಸ್ವಾಮಿ

ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯ ಇದೆ. ಅದ್ಯಾವುದು ಬಳಕೆ ಆಗುತಿಲ್ಲ. ಹಾಗಾಗಿ ಸರ್ಕಾರಿ ಸೌಲಭ್ಯ ಪಡೆಯಬೇಕಾದರೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಕಡ್ಡಾಯ ಎಂದು ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆ ಪಡೆಯದಿದ್ದರೆ ಪರಿಹಾರವಿಲ್ಲ: ಸಚಿವ ಜೆಸಿ ಮಾಧುಸ್ವಾಮಿ
ಕಾನೂನು ಸಚಿವ ಜೆಸಿ ಮಾಧುಸ್ವಾಮಿ
TV9 Web
| Edited By: |

Updated on:Jan 20, 2022 | 7:56 PM

Share

ತುಮಕೂರು: ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗದೇ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ (Coronavirus)​ ಚಿಕಿತ್ಸೆ ಪಡೆದವರಿಗೆ ಕೊರೊನಾ ಸಂಬಂಧಿತ ಯಾವುದೇ ಪರಿಹಾರ ನೀಡುವುದು ಕಷ್ಟ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೈದ್ಯಕೀಯ ವೆಚ್ಚವಾಗಲಿ, ಕೊವಿಡ್ ಸಾವಿನ ಪರಿಹಾರ ಆಗಲಿ ಈ ಬಾರಿ ಸಿಗುವುದಿಲ್ಲ. ಆ ಮೂಲಕ ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಸೋಂಕಿತರಿಗೆ ಸರ್ಕಾರ ಶಾಕ್​ ನೀಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ(Government hospital) ಸಾಕಷ್ಟು ಸೌಲಭ್ಯ ಇದೆ. ಹೀಗಾಗಿ ಸೋಂಕಿತರು ಸರ್ಕಾರಿ ಆಸ್ಪತ್ರೆಗೆ ನೇರವಾಗಿ ದಾಖಲಾಗಿ ಎಂದು ತುಮಕೂರಿನಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (JC Madhuswamy) ಹೇಳಿಕೆ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯ ಇದೆ. ಅದ್ಯಾವುದು ಬಳಕೆ ಆಗುತಿಲ್ಲ. ಹಾಗಾಗಿ ಸರ್ಕಾರಿ ಸೌಲಭ್ಯ ಪಡೆಯಬೇಕಾದರೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಕಡ್ಡಾಯ ಎಂದು ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ: ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ

ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ. ಮೃತರ ಕುಟುಂಬಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ನೀಡಿ. ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿ. ಅದೇಷ್ಟೊ ಜನ ತಂದೆ ತಾಯಿ ಕುಟುಂಬದ ಆಧಾರ ಸ್ಥಂಬವನ್ನೆ ಕಳೆದುಕೊಂಡಿದ್ದಾರೆ. ಆ ಮೂಲಕ ನೊಂದವರು ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್​.ಎನ್​. ಸುಬ್ಬಾರೆಡ್ಡಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಮನವಿ ಮಾಡಿದ್ದಾರೆ.

ಚಾಮರಾಜನಗರ: ಚೆಕ್​ಪೋಸ್ಟ್​ನಲ್ಲಿ ಮೂವರ ನಕಲಿ ಕೊವಿಡ್ ರಿಪೋರ್ಟ್ ಪತ್ತೆ ಮೂವರ ನಕಲಿ ಕೊವಿಡ್​ ರಿಪೋರ್ಟ್​ ಪತ್ತೆಯಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಬಳಿಯ ಮೂಲೆ ಹೊಳೆ ಚೆಕ್​​ಪೋಸ್ಟ್​ನಲ್ಲಿ ನಡೆದಿದೆ. ಒಂದೇ ಎಸ್​ಆರ್​​ಎಫ್​​ ಐಡಿ ಬಳಸಿ ಮೂರು ನಕಲಿ ವರದಿ ಪ್ರಿಂಟ್​ ಮಾಡಿಸಿಕೊಂಡಿದ್ದಾರೆ. ಒಂದೇ ಕೊವಿಡ್​ ನೆಗೆಟಿವಿ ವರದಿಯನ್ನು ಬಳಸಿ ಕೇರಳದಿಂದ ನಾಲ್ವರು ಆಗಮಿಸಿದ್ದಾರೆ. ಸದ್ಯ ಕೇರಳ ಮೂಲದ ವಿಜಯ್, ಜಯಪ್ರಕಾಶ್, ಸಂತೋಷ್, ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 1860ರ ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

Covid 19 Karnataka Update: ಕರ್ನಾಟಕದಲ್ಲಿ 47 ಸಾವಿರ ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 29 ಜನರು ಸಾವು

ದೇಶದಲ್ಲಿ ಜ.23ರ ಹೊತ್ತಿಗೆ ಕೊವಿಡ್​ 19 ಅಲೆ ಉತ್ತುಂಗಕ್ಕೆ; ಆದರೂ ಒಂದು ಸಮಾಧಾನಕರ ಸಂಗತಿ ಹೇಳಿದ ವಿಜ್ಞಾನಿಗಳು

Published On - 7:51 pm, Thu, 20 January 22