AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಟಿವಿ9 ಗೆ ಸಾರ್ಥಕತೆ-ಧನ್ಯತೆಯನ್ನ ಪಡೆದ ದಿನ! ಏನದು.. ಇಲ್ಲಿದೆ ನೋಡಿ

ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಮೆರೆಯುತ್ತಿದ್ದ ಅಟ್ಟಹಾಸ, ಏರುತ್ತಿದ್ದ ಸೋಂಕಿನ ಪ್ರಮಾಣ ಭೀತಿ ಹುಟ್ಟಿಸಿತ್ತು. ಇದೇ ರೀತಿ ಆದ್ರೆ ಕರುನಾಡು ಕೊರೊನಾ ಕೂಪಕ್ಕೆ ಬೀಳುತ್ತೆ ಅನ್ನೋ ಆತಂಕ ಹುಟ್ಟಿತ್ತು. ಹೀಗಾಗಿಯೇ ಟಿವಿ 9 ಮೊದಲ ದಿನದಿಂದ್ಲೇ ಈ ಬಗ್ಗೆ ಮಾಹಿತಿ ಕಲೆ ಹಾಕೋಕೆ ಶುರು ಮಾಡ್ತು. ಪರಿಸ್ಥಿತಿ ಕೈ ಮೀರಿ ಹೋದ್ರೆ, ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡೋಕೆ ಸಾಧ್ಯವೇ..? ಸೋಂಕಿತರ ನಂಬರ್ ಜಾಸ್ತಿ ಆದ್ರೆ ಮುಂದೇನು ಅನ್ನೋ ವಿಚಾರವಾಗಿ ಪ್ರತಿ ದಿನ ಟಿವಿ 9 ಎಡಿಟೋರಿಯಲ್ […]

ಇದು ಟಿವಿ9 ಗೆ ಸಾರ್ಥಕತೆ-ಧನ್ಯತೆಯನ್ನ ಪಡೆದ ದಿನ! ಏನದು.. ಇಲ್ಲಿದೆ ನೋಡಿ
Follow us
ಸಾಧು ಶ್ರೀನಾಥ್​
|

Updated on:Jun 22, 2020 | 10:58 AM

ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಮೆರೆಯುತ್ತಿದ್ದ ಅಟ್ಟಹಾಸ, ಏರುತ್ತಿದ್ದ ಸೋಂಕಿನ ಪ್ರಮಾಣ ಭೀತಿ ಹುಟ್ಟಿಸಿತ್ತು. ಇದೇ ರೀತಿ ಆದ್ರೆ ಕರುನಾಡು ಕೊರೊನಾ ಕೂಪಕ್ಕೆ ಬೀಳುತ್ತೆ ಅನ್ನೋ ಆತಂಕ ಹುಟ್ಟಿತ್ತು. ಹೀಗಾಗಿಯೇ ಟಿವಿ 9 ಮೊದಲ ದಿನದಿಂದ್ಲೇ ಈ ಬಗ್ಗೆ ಮಾಹಿತಿ ಕಲೆ ಹಾಕೋಕೆ ಶುರು ಮಾಡ್ತು.

ಪರಿಸ್ಥಿತಿ ಕೈ ಮೀರಿ ಹೋದ್ರೆ, ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡೋಕೆ ಸಾಧ್ಯವೇ..? ಸೋಂಕಿತರ ನಂಬರ್ ಜಾಸ್ತಿ ಆದ್ರೆ ಮುಂದೇನು ಅನ್ನೋ ವಿಚಾರವಾಗಿ ಪ್ರತಿ ದಿನ ಟಿವಿ 9 ಎಡಿಟೋರಿಯಲ್ ಮೀಟಿಂಗ್​ನಲ್ಲಿ ಚರ್ಚೆ ಮಾಡೋಕೆ ಶುರು ಮಾಡಿದ್ವಿ. ಇತ್ತ ಟಿವಿ9 ಗೂ ಸೋಂಕಿತರು, ಸೋಂಕಿತರ ಕುಟುಂಬದವರ ಕಡೆಯಿಂದ ಕಾಲ್​ಗಳು ಬರೋಕೆ ಶುರುವಾದ್ವು. ಬೆಡ್ ಇಲ್ಲ, ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ, ವೆಂಟಿಲೇಟರ್ ಇಲ್ಲ ಅಂತಾ ರೋಗಿಗಳು ದೂರು, ನೋವು ಹೇಳೋಕೆ ಶುರುಮಾಡಿದ್ರು.

ಆವಾಗಲೇ, ಟಿವಿ 9 ಎಡಿಟೋರಿಯಲ್ ಮೀಟಿಂಗ್​ನಲ್ಲಿ ಒಂದು ತೀರ್ಮಾನ ತೆಗೆದುಕೊಳ್ಳಲಾಯ್ತು. ಅದೇನಂದ್ರೆ ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಟ್ರೀಟ್ಮೆಂಟ್ ಸಿಗುವಂತಾಗಬೇಕು ಅನ್ನೋದಾಗಿತ್ತು. ಕೇವಲ ಟ್ರೀಟ್ಮೆಂಟ್ ಅಷ್ಟೇ ಅಲ್ಲ ಆ ಟ್ರೀಟ್ಮೆಂಟ್​ಗೆ ದರವೂ ನಿಗದಿ ಆಗಬೇಕು ಅನ್ನೋ ಚರ್ಚೆ ಮಾಡಿದ್ವಿ. ಯಾಕಂದ್ರೆ ಖಾಸಗಿಯವ್ರಿಗೆ ಕೊಟ್ರೆ ಸುಲಿಗೆ ಮಾಡೋ ಚಾನ್ಸ್ ಇರುತ್ತೆ, ಹೀಗಾಗಿ ಸರ್ಕಾರವೇ ದರ ನಿಗದಿ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಟ್ರೀಟ್ಮೆಂಟ್ ಸಿಗುವಂತೆ ಮಾಡ್ಬೇಕು ಅನ್ನೋ ದೃಢ ನಿರ್ಧಾರಕ್ಕೆ ಬಂದ್ವಿ.

ಅಂದೇ ಖಾಸಗಿ ಆಸ್ಪತ್ರೆಗಳ ಒಕ್ಕೂಟಗಳು ಹಾಗೂ ಸರ್ಕಾರವನ್ನ ಒಂದೇ ವೇದಿಕೆಗೆ ಕರೆದು ಚರ್ಚೆ ನಡೆಸಿದ್ವಿ. ಈ ವೇಳೆ ಖಾಸಗಿ ಆಸ್ಪತ್ರೆಗಳು ದರ ಸಮರಕ್ಕಿಳಿದ್ವು. ಕೊನೆಗೂ ಟಿವಿ 9 ಮಾಡಿದ ಆಗ್ರಹಕ್ಕೆ ಮಣಿದ ಸರ್ಕಾರ, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಒಪ್ಪಿ ದರವನ್ನೂ ಫಿಕ್ಸ್ ಮಾಡ್ತು. ಇದೇ ಟಿವಿ 9ನ ಮೊದಲ ಹಂತದ ಗೆಲುವಾಗಿತ್ತು..

ಫ್ರೀ ಟ್ರೀಟ್ಮೆಂಟ್​ಗೆ ಸರ್ಕಾರಕ್ಕೆ ಆಗ್ರಹಿಸಿದ್ದ ಟಿವಿ 9 ನಿಜ, ಟಿವಿ 9 ಅಷ್ಟಕ್ಕೆ ಸುಮ್ಮನಾಗಲಿಲ್ಲ. ಯಾಕಂದ್ರೆ, ಸರ್ಕಾರ ಫಿಕ್ಸ್ ಮಾಡಿದ ರೇಟ್​ಅನ್ನ ಬಡವರು ಭರಿಸೋಕೆ ಸಾಧ್ಯವಾ? ಸಾಮಾನ್ಯ ಜನರಿಗೆ ಚಿಕಿತ್ಸೆ ವೆಚ್ಚ ನೀಡೋಕೇ ಆಗುತ್ತಾ? ಈ ಪ್ರಶ್ನೆಗಳು ನಮ್ಮನ್ನ ಕಾಡೋಕೆ ಶುರು ಮಾಡಿದ್ವು.

ಟಿವಿ 9 ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಮೈಲಿಗಲ್ಲು ಆಗಲೇ, ಟಿವಿ 9 ಎಡಿಟೋರಿಯಲ್ ಟಿಂ 2ನೇ ಮೀಟಿಂಗ್ ಸೇರಿತು. ಎಲ್ಲರಿಗೂ ಫ್ರೀ ಟ್ರೀಟ್ಮೆಂಟ್ ಸಿಗಲೇಬೇಕು ಅಂತಾ ರಾಜ್ಯದ ಜನರ ಪರವಾಗಿ ಮತ್ತೆ ಧ್ವನಿ ಎತ್ತಿತ್ತು. ಸರ್ಕಾರಕ್ಕೆ, ಮುಖ್ಯಮಂತ್ರಿ ಬಿಎಸ್​ವೈಗೆ, ಆರೋಗ್ಯ ಸಚಿವ ರಾಮುಲುಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಸುಧಾಕರ್​ಗೆ ಆಗ್ರಹ ಮಾಡ್ತು. ಟಿವಿ9 ಆಗ್ರಹದ ಫಲವೇ ಇಂದು ರಾಜ್ಯದ ಬರೋಬ್ಬರಿ 4 ಕೋಟಿ 20 ಲಕ್ಷ ಜನರಿಗೆ ನೇರವಾಗಿ ಫ್ರೀ ಟ್ರೀಟ್ಮೆಂಟ್ ಫಲ ಸಿಗುವಂತಾಗಿದೆ. ಇದು ಟಿವಿ9 ಇತಿಹಾಸದಲ್ಲಿ, ಟಿವಿ 9 ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಮೈಲಿಗಲ್ಲು, ಐತಿಹಾಸಿಕ ದಿನವಂದ್ರೂ ತಪ್ಪಲ್ಲ.

https://www.facebook.com/Tv9Kannada/videos/267665680973880/

ತಾರ್ಕಿಕ ಅಂತ್ಯ.. ಟಿವಿ 9 ಎಡಿಟೋರಿಯಲ್ ಟಿಂ ಸಾರ್ಥಕತೆ ಇವತ್ತಿನ ಐತಿಹಾಸಿಕ ಬದಲಾವಣೆ ಇದ್ಯಯಲ್ಲ, ಇದು ಸುಮ್ನೆ ಆಗಿದ್ದಲ್ಲ.. ಯಾಕಂದ್ರೆ ಒಂದು ಮಾಧ್ಯಮದ ಆಗ್ರಹವನ್ನ ಸರ್ಕಾರ ಕವಿಗೊಟ್ಟು ಕೇಳುತ್ತೆ.. ಸಮ್ಮತಿಸುತ್ತೆ.. ಟಿವಿ9 ಆಗ್ರಹವನ್ನ ಜಾರಿಗೆ ತರುತ್ತೆ ಅಂದ್ರೆ, ಅದರ ಹಿಂದೆ ಸಾಕಷ್ಟು ಶ್ರಮವಿತ್ತು.

ಅಂದಹಾಗೆ, ಕರ್ನಾಟಕದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಕೊವಿಡ್ ಆಸ್ಪತ್ರೆಗಳ ಎಷ್ಟು, ಎಷ್ಟು ವೈದ್ಯರಿದ್ದಾರೆ. ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಇದ್ಯಾ ಪ್ರತಿದಿನ ದಾಖಲಾಗೋ ಕೇಸ್​ಗಳೆಷ್ಟು..? ಹೀಗೆ ಟಿವಿ 9 ಟೀಂ ತನಿಖೆ ಮಾಡೋಕೆ ಶುರು ಮಾಡ್ತು. ಆಗಲೇ ಭಯಾನಕ ಸಂಗತಿಗಳು, ಬೆಚ್ಚಿ ಬೀಳಿಸೋ ಮಾಹಿತಿಗಳು ಹೊರ ಬಿದ್ವು. ಆಗಲೇ ಇದಕ್ಕೊಂದು ತಾರ್ಕಿಕ ಅಂತ್ಯ ಕೊಡಲೇಬೇಕು ಅಂತಾ ಡಿಸೈಡ್ ನಾವು ಮಾಡಿದ್ವಿ.

ಟಿವಿ 9ನ ಇನ್​ಪುಟ್ ಹಾಗೂ ಮೆಟ್ರೋ ಟೀಂ ಸುದ್ದಿ ಆಳ ಅಗಲ ಹೆಕ್ಕಿ ತೆಗೀತು. ಇನ್​ಪುಟ್ ಹಾಗೂ ಮೆಟ್ರೋ ಟೀಂ ಕೊಟ್ಟ ಸುದ್ದಿಯನ್ನ ಪರಿಣಾಮಕಾರಿಯಾಗಿ ಮುಟ್ಟಿಸೋ ಕೆಲಸ ಮಾಡಿದ್ದು ಔಟ್​ಪುಟ್ ಟೀಂ. ಶಿಫ್ಟ್ ಅನ್ನದೇ, ಹಗಲು ರಾತ್ರಿ ಅನ್ನದೇ, ನಮಗೂ ಕೊರೊನಾ ಅಟ್ಯಾಕ್ ಮಾಡುತ್ತೆ ಅನ್ನೋ ಭಯವನ್ನ ಬಿಟ್ಟು. ರಾಜ್ಯದ ಜನರಿಗೆ ನ್ಯಾಯ ಸಿಗಲೇ ಬೇಕು ಅಂತಾ ಕೆಲಸ ಮಾಡಿದ್ವಿ. ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಹಾಕಿ, ಸರ್ಕಾರವನ್ನ ಬಡಿದೆಬ್ಬಿಸುವಂಥ ಪದಗಳನ್ನ ಬಳಸಿ, ಪ್ರತಿ ಹೆಜ್ಜೆ ಹೆಜ್ಜಗೂ ಅಲರ್ಟ್ ಮಾಡಿದ್ವಿ.

ಔಟ್​ಪುಟ್​ ಟೀಂಗೆ ಅದ್ಭುತವಾಗಿ ಸಾಥ್ ನೀಡಿದ್ದು ಟಿವಿ 9 ನ ಪ್ರೊಡಕ್ಷನ್ ಟೀಂ. ಅತ್ಯುತ್ತಮವಾದ ಗ್ರಾಫಿಕ್ಸ್​, ಕರಾರುವಕ್ಕಾದ ವಿಡಿಯೋ ಎಡಿಟಿಂಗ್ ಮೂಲಕ ಸುದ್ದಿಯನ್ನ ಹೇಗೆ ತಲುಪಿಸಬೇಕು ಅನ್ನೋದನ್ನ ಮಾದರಿಯಾಗಿ ನಿರ್ಮಿಸಿದ್ವಿ. ಇದಕ್ಕೆ ಸರಿಯಾಗಿ ನಮ್ಮ ಆ್ಯಂಕರ್​ಗಳು ಕೂಡಾ ಸುದ್ದಿಯನ್ನ ಪರಿಣಾಮಕಾರಿಯಾಗಿ, ಪ್ರಖರವಾಗಿ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿದ್ರು. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಅತಿ ದೊಡ್ಡ ಬದಲಾವಣೆ ಒಟ್ಟಾರೆಯಾಗಿ ಬಿಡುವಿಲ್ಲದೇ, ನಿಸ್ವಾರ್ಥ ಶ್ರಮದ ಫಲವಾಗಿ ಇಂದು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಅತಿ ದೊಡ್ಡ ಬದಲಾವಣೆಯಾಗಿದೆ. ಇಂದು ಟಿವಿ 9ಗೆ ಸಾರ್ಥಕತೆಯ, ಧನ್ಯತೆಯನ್ನ ಪಡೆದ ದಿನವಾಗಿದೆ. ಇದು ಇಲ್ಲಿಗೆ ನಿಲ್ಲೋದಿಲ್ಲ. ಕರುನಾಡಿಗೆ ಯಾವಾಗ ಸಂಕಷ್ಟ ಬಂದರೂ ಹಿಂದೆ ಮುಂದೆ ನೋಡದೇ ಮೊದಲು ನಿಲ್ಲುವ ಛಾತಿ ಹೊಂದಿರೋ, ನಿಮ್ಮೆಲ್ಲರ ನಂಬಿಕೆ ವಿಶ್ವಾಸ ಗಳಿಸಿರೋ ಟಿವಿ 9 ಸದಾ ಉತ್ತಮ ಸಮಾಜಕ್ಕಾಗಿಯೇ ಶ್ರಮಿಸುತ್ತದೆ. ಶ್ರಮಿಸುತ್ತಲೇ ಇರುತ್ತದೆ.

Published On - 10:20 pm, Sun, 21 June 20

Daily Devotional: ಜಪ ಮಾಡುವುದರ ಹಿಂದಿನ ರಹಸ್ಯ ಹಾಗೂ ಉಪಯೋಗ ತಿಳಿಯಿರಿ
Daily Devotional: ಜಪ ಮಾಡುವುದರ ಹಿಂದಿನ ರಹಸ್ಯ ಹಾಗೂ ಉಪಯೋಗ ತಿಳಿಯಿರಿ
ಈ ರಾಶಿಯವರ ಆದಾಯದಲ್ಲಿ ಏರಿಕೆ, ವಾಹನ ಖರೀದಿಸುವವರು ಎಚ್ಚರ!
ಈ ರಾಶಿಯವರ ಆದಾಯದಲ್ಲಿ ಏರಿಕೆ, ವಾಹನ ಖರೀದಿಸುವವರು ಎಚ್ಚರ!
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??