AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲಿಬಾಲ್ ಪಂದ್ಯಾವಳಿ: ಟಿವಿ9 ತಂಡಗಳಿಗೆ ಚಾಂಪಿಯನ್ ಹಾಗೂ ರನ್ನರ್ ಅಪ್​ ಪ್ರಶಸ್ತಿ

ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ 2024ನೇ ವರ್ಷದ ವಾಲಿಬಾಲ್ ಪಂದ್ಯಾವಳಿಯಲ್ಲಿ ಟಿವಿ9 ಕನ್ನಡದ ಎರಡು ತಂಡಗಳು ಅದ್ಭುತ ಪ್ರದರ್ಶನ ನೀಡಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿವೆ. 20 ತಂಡಗಳು ಪಾಲ್ಗೊಂಡ ಈ ಪಂದ್ಯಾವಳಿಯಲ್ಲಿ ಟಿವಿ9 ತಂಡಗಳು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ರೋಮಾಂಚಕ ಹಣಾಹಣಿಯಲ್ಲಿ ಗೆದ್ದು ಬಹುಮಾನ ಪಡೆದುಕೊಂಡಿವೆ.

ವಾಲಿಬಾಲ್ ಪಂದ್ಯಾವಳಿ: ಟಿವಿ9 ತಂಡಗಳಿಗೆ ಚಾಂಪಿಯನ್ ಹಾಗೂ ರನ್ನರ್ ಅಪ್​ ಪ್ರಶಸ್ತಿ
ವಾಲಿಬಾಲ್ ಪಂದ್ಯಾವಳಿ: ಟಿವಿ9 ತಂಡಗಳಿಗೆ ಚಾಂಪಿಯನ್ ಹಾಗೂ ರನ್ನರ್ ಅಪ್​ ಪ್ರಶಸ್ತಿ
TV9 Web
| Edited By: |

Updated on: Nov 08, 2024 | 10:35 PM

Share

ಬೆಂಗಳೂರು, ನವೆಂಬರ್​ 08: ಪ್ರೆಸ್​ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ 2024ನೇ ಸಾಲಿನ ವಾಲಿಬಾಲ್ ಪಂದ್ಯಾವಳಿಯಲ್ಲಿ (Volleyball Tournament) ಟಿವಿ9 ಸಂಸ್ಥೆಯ ಎರಡು ತಂಡಗಳು ಕ್ರಮವಾಗಿ ಪ್ರಥಮ ಹಾಗೂ ದ್ವೀತಿಯ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ.

ಎರಡು ದಿನಗಳ ಕಾಲ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ವಾಲಿಬಾಲ್ ಪಂದ್ಯಾವಳಿಯಲ್ಲಿ ಮುದ್ರಣ ಹಾಗೂ ವಿದ್ಯೂನ್ಮಾನ ಬಹುತೇಕ ಎಲ್ಲಾ ಮಾಧ್ಯಮ ಸಂಸ್ಥೆಗಳಿಂದ ಒಟ್ಟು 20 ತಂಡಗಳು ಭಾಗವಹಿಸಿದ್ದವು.

ನಮ್ಮ ಟಿವಿ9 ಸಂಸ್ಥೆಯಿಂದ ಭಾಗವಹಿಸಿದ್ದ ಮೂರು ತಂಡಗಳಲ್ಲಿ ಟಿವಿ9 ‘ಸಿ ತಂಡ’ ಹಾಗೂ ಟಿವಿ9 ‘ಬಿ ತಂಡ’ ಈ ಎರಡೂ ತಂಡಗಳು ಅಂತಿಮ ಘಟ್ಟಕ್ಕೆ ಬಂದು, ಅತ್ಯುತ್ತಮವಾಗಿ ಆಟವಾಡಿ, ಕ್ರಮವಾಗಿ ಪ್ರಥಮ ಹಾಗೂ ದ್ವೀತಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.

ಸೆಮಿಫೈನಲ್ ಹಾಗೂ ಫೈನಲ್​ನಲ್ಲಿ ರೋಚಕ ಹಣಾಹಣಿ

ಮೊದಲ ಸೆಮಿಫೈನಲ್​ನಲ್ಲಿ ಟಿವಿ9 ‘ಸಿ ತಂಡ’ ಬೆಂಗಳೂರು ಕ್ರೈಂ ವರದಿಗಾರರ ವಿರುದ್ದ ರೋಚಕವಾಗಿ ಗೆದ್ದು ಫೈನಲ್​ಗೆ ಎಂಟ್ರಿ ಕೊಟ್ಟರೆ ನಂತರ ಎರಡನೇ ಸೆಮಿಫೈನಲ್​ನಲ್ಲಿ ಟಿವಿ9 ‘ಬಿ ತಂಡ’ ಕನ್ನಡ ಪ್ರಭ ತಂಡವನ್ನು ಮಣಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿತು.

ಇನ್ನೂ ಫೈನಲ್​ನಲ್ಲಿ ಟಿವಿ9 ‘ಬಿ ತಂಡ’ ಹಾಗೂ ಟಿವಿ9 ‘ಸಿ ತಂಡ’ಗಳ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ ಟಿವಿ9 ‘ಬಿ ತಂಡ’ ಮೊದಲು ಸೆಟ್ನಲ್ಲಿ ಗೆದ್ದರೆ ಎರಡನೇ ಸೆಟ್ನಲ್ಲಿ ಟಿವಿ9 ‘ಸಿ ತಂಡ’ ಟಿವಿ9 ‘ಬಿ ತಂಡ’ವನ್ನು ಕಟ್ಟಿ ಹಾಕಿತು. ನಂತರ ಕೂತುಹಲ ಘಟ್ಟದಲ್ಲಿ ಮೂರು ಪಾಯಿಂಟ್​ಗಳಲ್ಲಿ ಮುನ್ನಡೆ ಸಾಧಿಸಿದ ಟಿವಿ9 ‘ಸಿ ತಂಡ’ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು.

ಟಿವಿ9 ‘ಬಿ ತಂಡ’ ರನ್ನರ್ ಅಪ್​ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಗೆದ್ದ ಎರಡೂ ತಂಡಗಳಿಗೆ ಪ್ರೆಸ್​ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಹಾಗೂ ಹಿರಿಯ ಪತ್ರಕರ್ತ ರಾಜು ಕಂಬಾರ ಅವರು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಪ್ರೆಸ್​ ಕ್ಲಬ್​ ಆಫ್ ಬೆಂಗಳೂರು ಆಯೋಜಿಸಿದ್ದ ಈ ಮಹತ್ವದ ವಾಲಿಬಾಲ್ ಟೂರ್ನಿಯಲ್ಲಿ ಗೆದ್ದ ಎರಡೂ ತಂಡಗಳಿಗೆ ಟಿವಿ9 ಕನ್ನಡ ಮ್ಯಾನೇಜಿಂಗ್ ಎಡಿಟರ್ ರಾಹುಲ್ ಚೌಧರಿ ಶುಭ ಹಾರೈಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ