AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಂಬಂಧ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡ್ರಾ ನಿವೃತ್ತ DySP?

ನಿವೃತ್ತ DySP ಹನುಮಂತಪ್ಪ ಬ್ಲಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಈಗ ಅವರ ಸಾವಿಗೆ ಕಾರಣವಾಗಿದ್ದು ಅಕ್ರಮ ಸಂಬಂಧ ಎಂಬ ಹೊಸ ವಿಚಾರ ಬಯಲಾಗಿದೆ.

ಅಕ್ರಮ ಸಂಬಂಧ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡ್ರಾ ನಿವೃತ್ತ DySP?
ನಿವೃತ್ತ DySP ಹನುಮಂತಪ್ಪ
ಆಯೇಷಾ ಬಾನು
|

Updated on:Dec 28, 2020 | 1:42 PM

Share

ಮಂಡ್ಯ: ಬೆಂಗಳೂರಿನ ವಿಜಯನಗರದ ಎಂ.ಸಿ.ಲೇಔಟ್​ನಲ್ಲಿ ನಿವೃತ್ತ DySP ಹನುಮಂತಪ್ಪ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಆತ್ಮಹತ್ಯೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೆ ಅಕ್ರಮ ಸಂಬಂಧವೇ ಕಾರಣವಾಯ್ತಾ? ಎಂಬ ಅನುಮಾನ ಮೂಡಿದೆ.

ನಿವೃತ್ತ DySP ಹನುಮಂತಪ್ಪ ಬ್ಲಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಈಗ ಅವರ ಸಾವಿಗೆ ಕಾರಣವಾಗಿದ್ದು ಅಕ್ರಮ ಸಂಬಂಧ ಎಂಬ ಹೊಸ ವಿಚಾರ ಬಯಲಾಗಿದೆ.

ಈ ಹಿಂದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಇದೇ ವಿಚಾರವಾಗಿ ಬೆಳಕವಾಡಿ ಠಾಣೆ ಪೊಲೀಸರು, ಹನುಮಂತಪ್ಪಗೆ ನೋಟಿಸ್ ನೀಡಿದ್ದರು. ನೋಟಿಸ್ ಬಳಿಕ ಪೊಲೀಸರ ಕೈಗೆ ಸಿಗದೆ ಹನುಮಂತಪ್ಪ ಓಡಾಡಿಕೊಂಡಿದ್ದರು.  ಈ ಮಧ್ಯೆ.. ಇದೇ ವಿಚಾರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮಾನಸಿಕ ಖಿನ್ನತೆ: ಬೆಂಗಳೂರಿನಲ್ಲಿ ನಿವೃತ್ತ DySP ನೇಣಿಗೆ ಶರಣು

Published On - 1:34 pm, Mon, 28 December 20