AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೀಲ್ ಸ್ವಾಮಿ ವಿರುದ್ದ ದಾಖಲಾಯ್ತು ಮತ್ತೆರಡು FIR.. ನೌಕರಿ ಹೆಸರಲ್ಲಿ ನುಂಗಿರುವ ಮೊತ್ತವೆಷ್ಟು ಗೊತ್ತಾ?

ವೈದ್ಯ ನರಸಿಂಹ ಸ್ವಾಮಿ ಮಗನಿಗೆ ಸರ್ಕಾರಿ AEE ಕೆಲಸ ಕೋಡಿಸ್ತೀನಿ ಎಂದು 75 ಲಕ್ಷ ಪಡೆದು ವಂಚನೆ ಎಸಗಿರುವುದಾಗಿ ಯುವರಾಜ್​ ವಿರುದ್ದ ದೂರ ನೀಡಲಾಗಿದೆ.

ಡೀಲ್ ಸ್ವಾಮಿ ವಿರುದ್ದ ದಾಖಲಾಯ್ತು ಮತ್ತೆರಡು FIR.. ನೌಕರಿ ಹೆಸರಲ್ಲಿ ನುಂಗಿರುವ ಮೊತ್ತವೆಷ್ಟು ಗೊತ್ತಾ?
ವಂಚಕ ಯುವರಾಜ್ ಅಲಿಯಾಸ್​ ಸ್ವಾಮಿ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on:Jan 15, 2021 | 1:32 PM

ಬೆಂಗಳೂರು: ಸರಣಿ‌ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಯುವರಾಜ್ ಅಲಿಯಾಸ್​ ಸ್ವಾಮಿಯ ವಂಚನೆ ಪ್ರಕರಣಗಳು ಒಂದೊಂದಾಗಿ ಹುತ್ತದಿಂದ ಹೊರಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಯುವರಾಜ್ ವಿರುದ್ದ ಹೊಸದಾಗಿ ಎರಡು FIR ಗಳು ದಾಖಲಾಗಿವೆ.

Deal Swamy Yuvraj Fraud case 75 ಲಕ್ಷ ಹಣ ಪಡೆದು ವಂಚನೆ.. ವಂಚಕ ಸ್ವಾಮಿ ಅರೆಸ್ಟ್ ಆದ ಬೆನ್ನಲ್ಲೇ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಒಂದೇ ದಿನ ವಂಚಕ ಸ್ವಾಮಿ ವಿರುದ್ದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎರಡು FIR ದಾಖಲಾಗಿವೆ. ಡಾಕ್ಟರ್ ನರಸಿಂಹ ಸ್ವಾಮಿ ಎಂಬುವರಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಸ್ವಾಮಿ ವಿರುದ್ದ ದೂರು ದಾಖಲಾಗಿದೆ. ವೈದ್ಯ ನರಸಿಂಹ ಸ್ವಾಮಿ ಮಗನಿಗೆ ಸರ್ಕಾರಿ AEE ಕೆಲಸ ಕೋಡಿಸ್ತೀನಿ ಎಂದು 75 ಲಕ್ಷ ಪಡೆದು ವಂಚನೆ ಎಸಗಿರುವುದಾಗಿ ಯುವರಾಜ್​ ವಿರುದ್ದ ದೂರ ನೀಡಲಾಗಿದೆ.

ಎಷ್ಟೇ ದಿನ ಕಳೆದರೂ ಕೆಲಸ ಕೊಡಿಸ್ಲಿಲ್ಲ.. ಹಣ ವಾಪಸು ಕೊಡಿ ಎಂದು ಕೇಳಿದ್ದಕ್ಕೆ ರೌಡಿಗಳಿಂದ ಬೆದರಿಕೆ ಹಾಕಿಸಿದ್ದರಂತೆ. ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ವೈದ್ಯ ನರಸಿಂಹ ಸ್ವಾಮಿಗೆ ಬೆದರಿಕೆ ಹಾಕಿದ್ದರಂತೆ. ಹೀಗಾಗಿ ಕೆಲವು ದಿನಗಳವರೆಗೆ ವೈದ್ಯ ನರಸಿಂಹಸ್ವಾಮಿ ಸುಮ್ಮನಾಗಿದ್ದು, ಯುವರಾಜ್ ಸಿಸಿಬಿ ಬಲೆಗೆ ಬಿದ್ದ ಬಳಿಕ ಜಾನ್ಞಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಳಿಯನಿಗೆ ಸರ್ಕಾರಿ ಹುದ್ದೆ ಕೊಡಿಸುವುದಾಗಿ ಮಾವನಿಗೆ ವಂಚನೆ.. KMF ನಲ್ಲಿ ಮಾರ್ಕೇಟಿಂಗ್ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಗೋವಿಂದ್ ಎಂಬುವರಿದ ಹಣ ಪಡೆದು ವಂಚಿಸಿರುವುದಾಗಿ ದೂರು ದಾಖಲು. ಗೋವಿಂದ್ ಎಂಬುವವರ ಅಳಿಯ ವೇಣುಗೋಪಾಲ್​ಗೆ KMF ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆ ಕೊಡಿಸುದಾಗಿ 30 ಲಕ್ಷ ಹಣ ಪಡೆದಿದ್ದನಂತೆ. ತಿಂಗಳಿಗೆ 80 ಸಾವಿರ ಸಂಬಳ ನೀಡುವ ಹುದ್ದೆಯಾಗಿದೆ ಎಂದು ಹೇಳಿ ಸ್ವಾಮಿ ಡ್ರೈವರ್ ಅಕೌಂಟ್​ಗೆ 20 ಲಕ್ಷ ಹಾಗೂ ಯುವರಾಜ್ ಅಕೌಂಟ್​ಗೆ 10 ಲಕ್ಷ ಹಣ ಡೆಪಾಸಿಟ್ ಮಾಡಿಸಿಕೊಂಡಿದ್ದನಂತೆ.

ಇಲ್ಲಿಯವರೆಗೂ ಯಾವುದೇ ಹುದ್ದೆ ಮತ್ತು ಹಣ ವಾಪಸ್ಸ್​ ನೀಡದಿರುವ ಕಾರಣ ಈಗ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಗೋವಿಂದ್ ದೂರು ನೀಡಿದ್ದಾರೆ. ಸದ್ಯ ವಂಚಕ ಯುವರಾಜ್ ಸ್ವಾಮಿ ಸಿಸಿಬಿ ವಶದಲ್ಲಿ ಇದ್ದು, ಯುವರಾಜ್ ಸ್ವಾಮಿ ವಿರುದ್ದ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳ ದಾಖಲಾಗಿವೆ. ಹೀಗಾಗಿ ಎಲ್ಲಾ ಪ್ರಕರಣಗಳನ್ನು ವರ್ಗಾವಣೆ ಮಾಡಿಸಿಕೊಂಡು ಸಿಸಿಬಿ ತನಿಖೆ ನಡೆಸುತ್ತಿದೆ.

ವಂಚಕ ಯುವರಾಜ್ ವಿರುದ್ಧ ಮತ್ತೊಂದು FIR.. B.L.ಸಂತೋಷ್ ಹೆಸರಲ್ಲಿ 30 ಲಕ್ಷ ವಂಚನೆ

Published On - 1:31 pm, Fri, 15 January 21

ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ