AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ; ಲಸಿಕೆ ಪೋಲಾಗುವುದನ್ನು ತಪ್ಪಿಸಲು ಉಡುಪಿ ಯುವಕರ ತಂಡದಿಂದ ವಿನೂತನ ಪ್ರಯೋಗ

ಈ ಕ್ಯಾರಿಯರ್ 2 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದರೊಳಗೆ 400 ಡೋಸ್ ಲಸಿಕೆ ಸಾಗಿಸಬಹುದು. 25 ವೋಲ್ಟ್ ಪವರ್ ಕನ್ಸಂಪ್ಷನ್ ಮಾಡುವ ಈ ಕ್ಯಾರಿಯರ್ ಶೇಕಡಾ 96 ರಷ್ಟು ವೇಗವಾಗಿ ನಾಲ್ಕರಿಂದ 6 ಡಿಗ್ರಿಗೆ ಇಳಿಯುತ್ತದೆ. ಇದೇ ಈ ಯಂತ್ರದ ವಿಶೇಷ ಎಂದು ತಂಡದ ಸದಸ್ಯ ಮಯೂರ ಶೆಟ್ಟಿ ಹೇಳಿದ್ದಾರೆ.

ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ; ಲಸಿಕೆ ಪೋಲಾಗುವುದನ್ನು ತಪ್ಪಿಸಲು ಉಡುಪಿ ಯುವಕರ ತಂಡದಿಂದ ವಿನೂತನ ಪ್ರಯೋಗ
ವ್ಯಾಕ್ಸಿನ್ ಕ್ಯಾರಿಯರ್
preethi shettigar
|

Updated on: May 30, 2021 | 11:00 AM

Share

ಉಡುಪಿ: ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದು, ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಈಗ ಎಲ್ಲಾ ಕಡೆ ಲಸಿಕೆಗಾಗಿ ಹಾಹಾಕಾರ ಶುರುವಾಗಿದ್ದು, ಭಾರತದಂತಹ ಬೃಹತ್ ರಾಷ್ಟ್ರದಲ್ಲಿ 136 ಕೋಟಿ ಜನಸಂಖ್ಯೆಗೆ ಲಸಿಕೆ ನೀಡುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಲಸಿಕೆ ಪೂರೈಸುವ ಒತ್ತಡವನ್ನು ಅರಿತ ಉಡುಪಿ ಜಿಲ್ಲೆಯ ಯುವಕರ ತಂಡವೊಂದು ವ್ಯಾಕ್ಸಿನ್ ಕ್ಯಾರಿಯರ್​ ಅನ್ನು ಆವಿಷ್ಕರಿಸಿದೆ.

ನಮ್ಮ ದೇಶದ ವಾತಾವರಣ ವೈಪರೀತ್ಯದ ಕಾರಣದಿಂದಾಗಿ ಭಾರತದಲ್ಲಿ ಲಸಿಕೆ ವ್ಯಯವಾಗುತ್ತಿದೆ. ಹಾಗಾಗಿ ಲಸಿಕೆ ಪೋಲು ತಪ್ಪಿಸಲು ಮಣಿಪಾಲದ ಬ್ಲ್ಯಾಕ್ ಫ್ರಾಗ್ ಕಂಪನಿಯು ಎಂವೋಲಿಯೋ ಹೆಸರಿನ ವ್ಯಾಕ್ಸಿನ್ ಕ್ಯಾರಿಯರ್​ ಅನ್ನು ಆವಿಷ್ಕರಿಸಿದೆ. ಈ ಯಂತ್ರ, ಗ್ರಾಮೀಣ ಭಾಗಕ್ಕೆ ಲಸಿಕೆ ಕೊಂಡೊಯ್ಯಲು ಬಹಳ ಉಪಕಾರಿ ಆಗಲಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕೊರೊನಾ ಮಹಾಮಾರಿಯ ವಿರುದ್ಧ ಭಾರತ ಪ್ರಯೋಗ ಮಾಡಿರುವ 2 ಲಸಿಕೆಗಳು. ಈ ಲಸಿಕೆಗಳ ಸಾಗಾಟ ಮತ್ತು ಸಾರ್ವಜನಿಕರಿಗೆ ಲಸಿಕೆ ಹಾಕುವ ಸಂದರ್ಭದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚುಚ್ಚುಮದ್ದು ಪೋಲಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ಯಾರಿಯರ್ ಅನುಕೂಲಕರವಾಗಿದೆ.

ಈ ಕ್ಯಾರಿಯರ್ 2 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದರೊಳಗೆ 400 ಡೋಸ್ ಲಸಿಕೆ ಸಾಗಿಸಬಹುದು. 25 ವೋಲ್ಟ್ ಪವರ್ ಕನ್ಸಂಪ್ಷನ್ ಮಾಡುವ ಈ ಕ್ಯಾರಿಯರ್ ಶೇಕಡಾ 96 ರಷ್ಟು ವೇಗವಾಗಿ ನಾಲ್ಕರಿಂದ 6 ಡಿಗ್ರಿಗೆ ಇಳಿಯುತ್ತದೆ. ಇದೇ ಈ ಯಂತ್ರದ ವಿಶೇಷ ಎಂದು ತಂಡದ ಸದಸ್ಯ ಮಯೂರ ಶೆಟ್ಟಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅನುದಾನ ಬಳಸಿ ಈ ತಂತ್ರಜ್ಞಾನವನ್ನು ತಯಾರು ಮಾಡಲಾಗಿದೆ. ಸೋಲಾರ್ ಮತ್ತು ಬ್ಯಾಟರಿಯಲ್ಲಿ ಕೆಲಸಮಾಡುವ ಎಂವೋಲಿಯೋ ಮಷೀನ್​ನಲ್ಲಿ ಟೆಂಪ್ರೇಚರ್ ಸೆಟ್ ಮಾಡಬಹುದು. ಅಲ್ಲದೆ ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲೂ ಜನಕ್ಕೆ ಗುಣಮಟ್ಟದ ಲಸಿಕೆ ನೀಡಬಹುದು. ಸೋಲಾರ್ ಪ್ಯಾನಲ್ ಮತ್ತು ವಿದ್ಯುತ್ ಮೂಲಕ ಬ್ಯಾಟರಿ ಚಾರ್ಜ್ ಆಗುತ್ತದೆ. ಈ ಕ್ಯಾರಿಯರ್ 12ರಿಂದ 15 ಗಂಟೆ ಕೆಲಸ ಮಾಡುತ್ತದೆ. ಈಗಾಗಲೇ 5 ರಾಜ್ಯಗಳಲ್ಲಿ ವ್ಯಾಕ್ಸಿನ್ ಕ್ಯಾರಿಯರ್ ಬಳಕೆ ಮಾಡಲಾಗುತ್ತಿದೆ.

ಈ ಕ್ಯಾರಿಯರಿಗೆ 36 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಎನ್​ಜಿಒಗಳು, ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರ ಮಷೀನ್ ಖರೀದಿ ಮಾಡಿ ಬಳಸಿದರೆ ಲಸಿಕೆ ಪೋಲಾಗುವುದನ್ನು ತಪ್ಪಿಸಬಹುದು. 2015 ರಿಂದ ಬ್ಲ್ಯಾಕ್ ಫ್ರಾಗ್ ವ್ಯಾಕ್ಸಿನ್ ಕ್ಯಾರಿಯರ್ ಪ್ರೊಡಕ್ಷನ್ ಮಾಡುತ್ತಿದೆ. 2020 ರಲ್ಲಿ ಕೊರೊನಾ ಸೋಂಕು ತಗುಲಿದಾಗ ಗಂಟಲ ದ್ರವ ತೆಗೆದು ಲ್ಯಾಬ್​ಗೆ ಸಾಗಿಸಲು ಈ ಯಂತ್ರವನ್ನು ಬಳಸಲಾಗಿತ್ತು ಎಂದು ತಂಡದ ಸದಸ್ಯ ಡಾನ್ಸನ್ ಹೇಳಿದ್ದಾರೆ.

ಮಣಿಪುರ, ಅಸ್ಸಾಂ, ಮೇಘಾಲಯ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಎಂವೋಲಿಯೋ ವ್ಯಾಕ್ಸಿನ್ ಕ್ಯಾರಿಯರ್​ಗೆ ಅಲ್ಲಿನ ಸರ್ಕಾರ ಖರೀದಿಸಿ ಬಳಸುತ್ತಿವೆ. ಇನ್ನು ಕರ್ನಾಟಕ ಮತ್ತು ತಮಿಳುನಾಡಲ್ಲಿ ವ್ಯಾಕ್ಸಿನ್ ಕ್ಯಾರಿಯರ್​ ಖರೀದಿ ಬಗ್ಗೆ ಮಾತುಕತೆಯ ಹಂತದಲ್ಲಿದೆ. ಈ ತಂಡದಲ್ಲಿ 23 ಜನ ಯುವಕರಿದ್ದು, ಮುಂದಿನ ತಿಂಗಳಿಂದ 1500 ಯೂನಿಟ್ ಪ್ರೊಡಕ್ಷನ್ ಮಾಡುವ ಯೋಚನೆ ಹೊಂದಿದ್ದಾರೆ.

ಇದನ್ನೂ ಓದಿ:

CM Yediyurappa PC: ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಿಎಂ ಬಾಲಸೇವಾ ಯೋಜನೆ ಘೋಷಣೆ

ಸಮಾಧಾನಕರ ಸಂಗತಿ: ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ 3ನೇ ಹಂತಕ್ಕೆ.. ಅಕ್ಟೋಬರ್ ವೇಳೆಗೆ ಭಾರತಕ್ಕೆ 85 ಕೋಟಿ ಡೋಸ್ ಲಭ್ಯ

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ