Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ವರದಿ ನೋಡಿ ಮಗುವಿನ ಚಿಕಿತ್ಸೆಗೆ ಮುಂದಾದ ಯುವಕರು: ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದನಿಗೆ ನೆರವು

ವರದಿ ನೋಡಿದ ಬಳಿಕ ಯುವಕರು ಒಟ್ಟಾಗಿ ಆ ಕಂದಮ್ಮನ ಜೀವ ಉಳಿಸಲು ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದು, ಒಂದು ಟೂರ್ನಿಯನ್ನು ಆಯೋಜನೆ ಮಾಡಿ ಅದರಿಂದ ಬಂದ ಹಣವನ್ನು ಅಶಕ್ತ ಕಂದಮ್ಮನಿಗೆ ನೀಡಿದೆ.

ಟಿವಿ9 ವರದಿ ನೋಡಿ ಮಗುವಿನ ಚಿಕಿತ್ಸೆಗೆ ಮುಂದಾದ ಯುವಕರು: ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದನಿಗೆ ನೆರವು
ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 23, 2021 | 12:11 PM

ಉಡುಪಿ: ರಜಾದಿನ ಬಂದರೆ ಸಾಕು ಹುಡುಗರೆಲ್ಲಾ ಬ್ಯಾಟ್ ಹಿಡಿದುಕೊಂಡು ಕ್ರಿಕೆಟ್ ಆಟದಲ್ಲಿ ದಿನ ಕಳೆಯುತಾರೆ. ಟೂರ್ನಮೆಂಟ್ ಆಯೋಜಿಸಿ, ಅದರಿಂದ ಬಂದ ಹಣವನ್ನು ಸುಮ್ಮನೆ ಪೋಲು ಮಾಡ್ತಾರೆ. ಆದರೆ ಉಡುಪಿಯ ಕ್ರಿಕೆಟ್ ತಂಡದ ಯುವಕರು ಒಂದು ಜೀವ ಉಳಿಸುವುದಕ್ಕೆ ಕ್ರಿಕೆಟ್ ಆಡುತ್ತಾರೆ. ಹೌದು ಉಡುಪಿಯ ಉದ್ಯಾವರದ ಈ ಗೆಳೆಯರ ತಂಡ ಟಿವಿ9 ವಾಹಿನಿಯ ‘ಕಂದನ ಉಳಿಸಿ’ ಅಭಿಯಾನಕ್ಕೆ ಸಹಾಯ ಹಸ್ತ ಚಾಚಿದೆ.

ಸಹಾಯ ಮಾಡುವುದಕ್ಕೆ ಶ್ರೀಮಂತಿಕೆ ಬೇಕು ಎಂದೇನು ಇಲ್ಲ. ಆದರೆ ಮಾನವೀಯತೆಯ ಮನಸ್ಸಿದ್ದರೆ ಸಾಕು. ಎನ್ನುವುದಕ್ಕೆ ಈ ಯುವಕರ ತಂಡವೆ ಸಾಕ್ಷಿ. ಉಡುಪಿಯ ಈ ತಂಡ ಯಾವಾಗಲೇ ಆಡಿದರೂ ಅದಕ್ಕೊಂದು ಸದುದ್ದೇಶ ಇರುತ್ತದೆಂದು ಎಲ್ಲರೂ ಸಹಕಾರ ಮಾಡುತ್ತಾರೆ. ಇವರು ಈ ಬಾರಿ ಆಟ ಅಡಿರುವುದು ಮತ್ತು ಟೂರ್ನಮೆಂಟ್ ಆಯೋಜಿಸಿರುವುದು ಕಂದಮ್ಮನ ಬದುಕಿಗಾಗಿ. ಹೌದು, ಟಿವಿ9 ವಾಹಿನಿ ಹಮ್ಮಿಕೊಂಡಿರುವ ಕಂದನ ಉಳಿಸಿ ಅಭಿಯಾನಕ್ಕೆ ಎಲ್ಲೆಡೆ ಸ್ಪಂದನೆ ದೊರೆಯುತ್ತಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಗೆ ತುತ್ತಾಗಿದ್ದ ಕಂದ ಜನೀಶ್​ನ ಬಗ್ಗೆ ನಾವು ಪ್ರಸಾರ ಮಾಡಿದ್ದ ಸುದ್ದಿ ನೋಡಿ ಉಡುಪಿ ಕಟಪಾಡಿಯ ಈ ಸ್ಪೋರ್ಟ್ಸ್ ತಂಡವೂ ಸಹಾಯ ಹಸ್ತ ಚಾಚಿದೆ.

cricket team

ಟಿವಿ9 ವರದಿಗೆ ಸ್ಪಂಧಿಸಿದ ಯುವಕರ ತಂಡ

ಕಳೆದ ಅನೇಕ ವರ್ಷಗಳಿಂದ ಕ್ರೀಡೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಯುನೈಟೆಡ್ ಫ್ರೆಂಡ್ಸ್ ಯುವಕರ ತಂಡ ನಿತ್ಯ ಕ್ರಿಕೆಟ್‌ ಆಡುವ ಹವ್ಯಾಸ ಹೊಂದಿದ್ದು, ಸದ್ಯ ಒಂದು ಮಹತ್ತರವಾದ ಆಶಯದಿಂದ ಟೂರ್ನಿಗಳನ್ನು ಆಯೋಜನೆ ಮಾಡಿದ್ದಾರೆ. ಈ ಟೂರ್ನಿಗಳ ಮೂಲಕ ಒಂದಷ್ಟು ಹಣವನ್ನು ಸಂಪಾದನೆ ಮಾಡಿದ್ದು ಟಿವಿ9ನಲ್ಲಿನ ಕಂದಮ್ಮನ ಉಳಿಸಿ ಅಭಿಯಾನದ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.

cricket team

ಟೂರ್ನಿ ನಡೆಸಿ ಕಂದನಿಗೆ ನೆರವು

ವರದಿ ನೋಡಿದ ಬಳಿಕ ಯುವಕರು ಒಟ್ಟಾಗಿ ಆ ಕಂದಮ್ಮನ ಜೀವ ಉಳಿಸಲು ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದು, ಒಂದು ಟೂರ್ನಿಯನ್ನು ಆಯೋಜನೆ ಮಾಡಿ ಅದರಿಂದ ಬಂದ ಹಣವನ್ನು ಅಶಕ್ತ ಕಂದಮ್ಮನಿಗೆ ನೀಡಿದೆ.

cricket team

ಯುನೈಟೆಡ್ ಫ್ರೆಂಡ್ಸ್ ಕ್ರಿಕೆಟ್ ತಂಡದಿಂದ ಕಂದಮ್ಮನಿಗೆ ನೆರವು

ಆಟದ ಜೊತೆ ಮಾನವೀಯ ಪಾಠ ತೋರಿದ ಈ ಯುವಕರ ಕಾರ್ಯ ಇನ್ನಷ್ಟು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಒಳ್ಳೆಯ ಕೆಲಸಕ್ಕೆ ಯಾವುದಾದರೂ ಒಂದು ರೂಪದಲ್ಲಿ ಬೆಂಬಲ ದೊರೆಯುತ್ತದೆ ಎನ್ನುವುದಕ್ಕೆ ಇದೇ ಸ್ಪಷ್ಟ ನಿದರ್ಶನ.

ಇದನ್ನೂ ಓದಿ: ಟಿವಿ9 ರಹಸ್ಯ ಕಾರ್ಯಾಚರಣೆ: ಪರಪ್ಪನ ಜೈಲಿನಲ್ಲಿ ಲಕ್ಷ ಲಕ್ಷ ಕೊಟ್ಟರೆ ಸಿಗುವ ಸೌಲಭ್ಯಗಳೇನು ಗೊತ್ತಾ? ಕೈದಿಗಳ ದಂಧೆಗೆ ಜೈಲಾಧಿಕಾರಿಗಳೇ ಸಾಥ್​..!

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ