AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ

ಕಳೆದ ಲಾಕ್​ಡೌನ್ ಅವಧಿಯಲ್ಲಿ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತಿದ್ದರಿಂದ ಸುಮಾರು 28 ಅಡಿ ಆಳದ ಬಾವಿ ತೋಡಿದ್ದೆ. ಆದರೆ ನೀರು ಬಂದಿರಲಿಲ್ಲ. ಈ ಬಾರಿಯ ಲಾಕ್​ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಇದೇ ಬಾವಿಯಲ್ಲಿ ನಾಲ್ಕು ಅಡಿ ತೋಡಿದ್ದರಿಂದ ಭರಪೂರ ನೀರು ಬಂದಿದೆ. ಇದರಿಂದ ಖುಷಿಯಾಗಿದೆ ಎಂದು ಬಾವಿ ತೋಡಿದ ವ್ಯಕ್ತಿ ಮಹಾದೇವ ಮಂಕಾಳ ನಾಯ್ಕ ತಿಳಿಸಿದ್ದಾರೆ.

ಲಾಕ್​ಡೌನ್​ ಸಮಯದ ಸದುಪಯೋಗ; 32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ವ್ಯಕ್ತಿ
32 ಅಡಿ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾದ ಉತ್ತರ ಕನ್ನಡದ ಮಹಾದೇವ ಮಂಕಾಳು
TV9 Web
| Edited By: |

Updated on: Jun 07, 2021 | 11:57 AM

Share

ಉತ್ತರ ಕನ್ನಡ: ಯಾವುದೇ ಕೆಲಸವನ್ನು ಮಾಡುವ ಮೊದಲು ಮನಸ್ಸಿರಬೇಕು ಹಾಗೆಯೇ ಎಂತಹದ್ದೇ ಕೆಲಸವನ್ನಾದರು ಸಾಧಿಸಲು ಆತ್ಮಸ್ಥೈರ್ಯ ಇದ್ದರೆ ಸಾಕು ಎನ್ನುವ ಮಾತಿದೆ. ಈ ಮಾತಿಗೆ ಅಂಕೋಲಾದ ವ್ಯಕ್ತಿಯೊಬ್ಬರು ಉದಾಹರಣೆಯಾಗಿ ನಿಂತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕಾಲಹರಣ ಮಾಡದೇ ಬಾವಿ ತೋಡುವ ಕೆಲಸಕ್ಕೆ ಕೈಹಾಕಿ ಇದೀಗ ಯಶಸ್ವಿಯಾಗಿದ್ದಾರೆ. ಏಕಾಂಗಿಯಾಗಿ ಬಾವಿ ತೆಗೆದು ಗ್ರಾಮಕ್ಕೆ ನೀರು ಒದಗಿಸುವ ಮೂಲಕ ಇತ ಆಧುನಿಕ ಭಗೀರಥನಾಗಿದ್ದು, ಸಾರ್ವಜನಿಕರು ವ್ಯಕ್ತಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜುಗುಣಿ ಗ್ರಾಮದ ನಿವಾಸಿಯಾದ ಮಹಾದೇವ ಮಂಕಾಳು ನಾಯ್ಕ ಅವರು ಕಲ್ಲಿನ ನೆಲದಲ್ಲಿ ಬಾವಿ ತೋಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿ ವರ್ಷ ಬೇಸಿಗೆ ಬಂತು ಎಂದರೆ ಈ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಒಂದೇ ಒಂದು ಬಾವಿಯಿಂದ 60ಕ್ಕೂ ಹೆಚ್ಚು ಮನೆಯವರು ನೀರು ತರಬೇಕು. ಮಳೆ ಪ್ರಾರಂಭವಾಗುವ ಮುನ್ನ ಕೆಲ ತಿಂಗಳು ಈ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ.

ಅಂತರ್ಜಲ ಬತ್ತಿ ಹೋಗುವುದರಿಂದ ವಾರಕ್ಕೊಮ್ಮೆ ಗ್ರಾಮ ಪಂಚಾಯತಿ ನೀಡುವ ನೀರೇ ಗತಿ. ಹೀಗಾಗಿ ಮಹಾದೇವ ತಮ್ಮ ಮನೆಯ ಹಿತ್ತಲಲ್ಲಿ ಒಂದು ಬಾವಿ ತೆಗೆಯುವ ಆಲೋಚನೆ ಮಾಡಿ ಕೆಲಸ ಪ್ರಾರಂಭಿಸಿದ್ದರು. ಕಳೆದ ಲಾಕ್​ಡೌನ್ ಅವಧಿಯಲ್ಲಿ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತಿದ್ದರಿಂದ ಸುಮಾರು 28 ಅಡಿ ಆಳದ ಬಾವಿ ತೋಡಿದ್ದೆ. ಆದರೆ ನೀರು ಬಂದಿರಲಿಲ್ಲ. ಈ ಬಾರಿಯ ಲಾಕ್​ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಇದೇ ಬಾವಿಯಲ್ಲಿ ನಾಲ್ಕು ಅಡಿ ತೋಡಿದ್ದರಿಂದ ಭರಪೂರ ನೀರು ಬಂದಿದೆ. ಇದರಿಂದ ಖುಷಿಯಾಗಿದೆ ಎಂದು ಬಾವಿ ತೋಡಿದ ವ್ಯಕ್ತಿ ಮಹಾದೇವ ಮಂಕಾಳ ನಾಯ್ಕ ತಿಳಿಸಿದ್ದಾರೆ.

ಗ್ರಾಮದಲ್ಲಿ ಕೆಲವರ ಮನೆಯಲ್ಲಿ ಬಾವಿ ಇದೆ. ಆದರೆ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಊರ ಪಕ್ಕದಲ್ಲೇ ಸಮುದ್ರ ಇರುವುದರಿಂದ  ಬೇಸಿಗೆಯಲ್ಲಿ ಬಾವಿಯ ನೀರು ಉಪ್ಪಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಊರ ಮಂದಿಯೆಲ್ಲಾ ಖಾಲಿ ಕೊಡ ಹಿಡಿದು ನೀರಿಗಾಗಿ ಪರದಾಡುವ ಸಮಸ್ಯೆ ಸಾಮಾನ್ಯವಾಗಿದೆ. ಇದನ್ನು ಕಂಡ ಮಹಾದೇವ ಅವರಿಗೆ ಸಮರ್ಪಕವಾದ ಬಾವಿ ಬೇಕು ಎಂದು ಅನಿಸಿತು. ಆದರೆ ಕೂಲಿ ಕೆಲಸ ಮಾಡುವ ಮಹಾದೇವ ಅವರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ವಂತ ಬಾವಿ ತೆಗೆಸಲು ಸಾಧ್ಯವಿರಲಿಲ್ಲ. ಹೀಗಾಗಿ ಲಾಕ್​ಡೌನ್ ಅವಧಿಯಲ್ಲಿ ಕೂಲಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವ ಬದಲು ನೀರನ್ನು ಕಾಣಲೇಬೇಕೆಂದು ಸತತ ಪ್ರಯತ್ನ ಮಾಡಿದ್ದಾರೆ.

ಸತತ ಪರಿಶ್ರಮದಿಂದ ಬಂಡೆಗಲ್ಲನ್ನು ಕಡಿದು ಬಾವಿ ತೋಡಿದ್ದು, ಇದೀಗ ಬರಪೂರ ನೀರು ಚಿಮ್ಮುತ್ತಿದೆ. ಸದ್ಯ ತಾವು ತೆಗೆದಿರುವ ಬಾವಿಯ ನೀರನ್ನು ಮನೆಗೆ ಬಳಸಿಕೊಳ್ಳುತ್ತಿರುವ ಮಹಾದೇವ ನಾಯ್ಕ, ಗ್ರಾಮಸ್ಥರಿಗೂ ನೀರು ನೀಡುವ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಇದ್ದ ನೀರಿನ ಬವಣೆ ಕಂಡು ಮಾದೇವ ಬಾವಿ ತೆಗೆದಿರುವುದಕ್ಕೆ ಗ್ರಾಮಸ್ಥರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಅಕ್ಕಪಕ್ಕದವರ ನೀರಿನ ಬವಣೆ ತೀರಿಸಲು ಈ ಮಹಿಳೆ ಮಾಡಿದ್ದು ಸಾಹಸಗಾಥೆ! ಎರಡು ಬಾವಿ ತೋಡಿ ಸಾಹಸ ಮೆರೆದ 56 ವರ್ಷದ ಮಹಿಳೆ

60 ಅಡಿ ಆಳದ ಎರಡು ಬಾವಿ ನಿರ್ಮಾಣ; ಇಡಿ ಊರಿಗೆ ನೀರನ್ನು ಉಣಿಸಿದ ಕಾರವಾರದ ಮಹಿಳೆ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?