ಭಟ್ಕಳ: ಸಂಸದ ಅನಂತ್ ಕುಮಾರ್ ಹೆಗಡೆ ಹಾರಿಸಿದ್ದ ಹನುಮಧ್ವಜ ತೆರವು

| Updated By: ವಿವೇಕ ಬಿರಾದಾರ

Updated on: Mar 07, 2024 | 2:08 PM

ಸಂಸದ ಅನಂತ್ ಕುಮಾರ್ ಹೆಗಡೆ ಅವರು ಭಟ್ಕಳ್​ ತಾಲೂಕಿನ ಹೆಬಳೆಯ ತೆಂಗಿನಗುಂಡಿಯಲ್ಲಿ ಬೀಚ್ ಸರ್ಕಲ್ ಬಳಿಯಲ್ಲಿ ಹನುಮಧ್ವಜವನ್ನು ಪುನಃ ಹಾರಿಸಿ, ಕಟ್ಟೆಗೆ ವೀರ ಸಾವರ್‌ಕರ್ ಬೀಚ್ ಎನ್ನುವ ನಾಮ ಫಲಕವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಸೇರಿಕೊಂಡು ಹಾಕಿದ್ದರು. ಆದರೆ ಈ ಧ್ವಜವನ್ನು ಗ್ರಾಮ ಪಂಚಾಯಿತಿ ತೆರವುಗೊಳಿಸಿದೆ.

ಭಟ್ಕಳ: ಸಂಸದ ಅನಂತ್ ಕುಮಾರ್ ಹೆಗಡೆ ಹಾರಿಸಿದ್ದ ಹನುಮಧ್ವಜ ತೆರವು
ಅನಂತ ಕುಮಾರ್ ಹೆಗಡೆ ಹಾರಿಸಿದ್ದ​ ಹನುಮಧ್ವಜ
Follow us on

ಕಾರವಾರ, ಮಾರ್ಚ್​ 07: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಹೆಬಳೆ ತೆಂಗಿನಗುಂಡಿಯಲ್ಲಿ ಬೀಚ್ ಸರ್ಕಲ್ ಬಳಿ ಸಂಸದ ಅನಂತ್ ಕುಮಾರ್ ಹೆಗಡೆ (Anathkumar Hegade) ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ಹಾರಿಸಿದ್ದ ಹನುಮಧ್ವಜವನ್ನು (Hanuman Dhwaja) ಗ್ರಾಮ ಪಂಚಾಯತಿ ರಾತ್ರೋ ರಾತ್ರಿ ತೆರವುಗೊಳಿಸಿದೆ. ಸೋಮವಾರ (ಮಾ.04) ರಂದು ಸಂಸದ ಅನಂತ್ ಕುಮಾರ್ ಹೆಗಡೆ ಅವರು ಮಧ್ಯಾಹ್ನ ಹೆಬಳೆಯ ತೆಂಗಿನಗುಂಡಿಯಲ್ಲಿ ಬೀಚ್ ಸರ್ಕಲ್ ಬಳಿಯಲ್ಲಿ ಹನುಮಧ್ವಜವನ್ನು ಪುನಃ ಹಾರಿಸಿ, ಕಟ್ಟೆಗೆ ವೀರ ಸಾವರ್‌ಕರ್ ಬೀಚ್ ಎನ್ನುವ ನಾಮ ಫಲಕವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಸೇರಿಕೊಂಡು ಹಾಕಿದ್ದರು. ಹಾಗೂ ಜೈ ಶ್ರೀರಾಮ್ ಹಾಗೂ ಹರ ಹರ ಮಹಾದೇವ ಎನ್ನುವ ಘೋಷಣೆಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಕೂಗಿದ್ದರು.

ಈ ಘಟನೆಗೆ ಸಂಬಂಧ ಭಟ್ಕಳದ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಒಟ್ಟೂ 21 ಜನರ ವಿರುದ್ಧ ದೂರು ದಾಖಲಾಗಿತ್ತು. ಸದ್ಯ ತೆಂಗಿನ ಗುಂಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ. ತೆಂಗಿನಗುಂಡಿ ಗ್ರಾಮದಲ್ಲಿ ಎರಡು ಕೆಎಸ್​ಆರ್​ಪಿ ತುಕುಡಿ ನಿಯೋಜನೆ‌ ಮಾಡಲಾಗಿದೆ.

ಇದನ್ನೂ ಓದಿ: ಮಸೀದಿ ಬಳಿಯ ಭಗವಾ ಧ್ವಜ ತೆರವಿಗೆ ಸಂಚು; ಮಾಜಿ ಶಾಸಕ, ಅಂಜುಮನ್ ಕಮಿಟಿ ಅಧ್ಯಕ್ಷನ ವಿರುದ್ಧ FIR

ಏನಿದು ವಿವಾದ

ತೆಂಗಿನಗುಂಡಿ ಗ್ರಾಮದಲ್ಲಿನ ಬೀಚ್ ಸರ್ಕಲ್ ಬಳಿ ಇದ್ದ ಸಾವರ್ಕರ್ ವೃತ್ತ ಮತ್ತು ಭಗವಾಧ್ವಜವನ್ನು ಗ್ರಾಮ ಪಂಚಾಯಿತಿ ಪಿಡಿಒ ಜನವರಿ 17 ರಂದು ತೆರವುಗೊಳಿಸಿದ್ದರು. ಅಂದು ತೆಂಗಿನಗುಂಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಬಿಜೆಪಿ ಮುಖಂಡರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದ್ ನಾಯ್ಕ್, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸಾವರ್ಕರ್ ನಾಮಫಲಕ ಅಳವಡಿಕೆಗೆ ಒಪ್ಪಿಗೆ ನೀಡಲಾಗಿತ್ತು. ಈಗ ಗ್ರಾಮ ಪಂಚಾಯಿತಿ ಪಿಡಿಒ ಏಕಾಏಕಿ ಜೆಸಿಬಿ ಮೂಲಕ ನಾಮಫಲಕ ತೆರವುಗೊಳಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:59 pm, Thu, 7 March 24