AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಸಮಯದಲ್ಲಿ ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ

ದಸರಾದ ಸಮಯದಲ್ಲಿ ಬೆಂಗಳೂರಿನಲ್ಲಿ ದುರ್ಗಾಪೂಜೆಯ ಗಮ್ಮತ್ತು ಎಲ್ಲೆಡೆ ಕಾಣ ಸಿಗುತ್ತಿದೆ. ಪ್ರತಿ ಗಲ್ಲಿಗಳಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿದೆ. ದುರ್ಗಾ ಪುಜೆಯ ಕೊನೆಯ ದಿನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್ಗಳನ್ನು ನೀವು ಹುಡುಕುತ್ತಿದ್ದರೆ ನೀವು ಭೇಟಿ ನೀಡಬಹುದಾದ ಜಾಗಗಳು ಇಲ್ಲಿವೆ.

ದಸರಾ ಸಮಯದಲ್ಲಿ  ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ
ಬೆಂಗಳೂರಿನಲ್ಲಿರುವ ಉತ್ತಮ ದುರ್ಗಾ ಪೂಜೆಯ ಸ್ಥಳಗಳು
ಭಾವನಾ ಹೆಗಡೆ
|

Updated on:Sep 29, 2025 | 12:13 PM

Share

ಬೆಂಗಳೂರು, ಸೆಪ್ಟೆಂಬರ್ 29: ದಸರಾ (Dasara) ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಬೆಂಗಳೂರಿನ ಗಲ್ಲಿಗಲ್ಲಿಗಳೂ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿವೆ. ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಿರುವ ದುರ್ಗಾ ಪೂಜೆಯ ಕೊನೆಯ ದಿನವೂ ಹತ್ತಿರವಾಗುತ್ತಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುವಂತಹ ದಾಂಡಿಯಾ ನೃತ್ಯಕ್ಕಾಗಿ ಎಲ್ಲಾ ವಯೋಮಾನದವರೂ ಕಾದು ಕುಳಿತಿರುತ್ತಾರೆ. ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್​ಗಳನ್ನು ಹುಡುಕುತ್ತಿದ್ದರೆ, ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳು ಇಲ್ಲಿವೆ.

ಬೆಂಗಳೂರಿನಲ್ಲಿರುವ  ದುರ್ಗಾ ಪೆಂಡಾಲ್​ಗಳು

1. ಬಿಡಿಪಿಸಿ, ಅರಮನೆ ಮೈದಾನ: ಅರಮನೆ ಮೈದಾನದಲ್ಲಿ ನಡೆಯುವ ಈ ಭವ್ಯ ಉತ್ಸವವು ಬೆಂಗಳೂರಿನ ಅತಿ ದೊಡ್ಡ ಸಭೆಗಳಲ್ಲಿ ಒಂದಾಗಿದೆ. ನೀವು ಹೆಚ್ಚಿನ ಪ್ರಮಾಣದ ಜನ ಸಮೂಹ ಮತ್ತು ರೋಮಾಂಚಕ ಅನುಭವಗಳನ್ನು ಬಯಸುವುದಾದರೆ ಈ ಆಯ್ಕೆ ನಿಮಗೆ ಸೂಕ್ತವಾಗಿದೆ.

2. SUC ದುರ್ಗಾ ಪೂಜೆ, ಬಿಲೆಕಹಳ್ಳಿ( ಶ್ರೀನಿವಾಸ್ ಕಲ್ಯಾಣ ಮಂಟಪ): ನೀವು ಶಾಂತವಾದ ಹಬ್ಬದ ವಾತಾವರಣವನ್ನು ಬಯಸುವುದಾದರೆ ಈ ಜಾಗ ನಿಮಗೆ ಹೇಳಿ ಮಾಡಿಸಿದಂತದ್ದು. ಇಲ್ಲಿ ನೀವು ಆರಾಮದಾಯಕವಾಗಿ ಪೂಜೆಯ ಅನುಭವವನ್ನು ಪಡೆಯಬಹುದು.

3. ಬರ್ಷಾ ಬೆಂಗಾಲಿ ಅಸೋಸಿಯೇಷನ್, HSR/ಸರ್ಜಾಪುರ: ಇದು ಎಲ್ಲಾ ದಾಂಡಿಯಾ ಪ್ರಿಯರ ನೆಚ್ಚಿನ ತಾಣವಾಗಿದೆ. ಆಹಾರ ಮಳಿಗೆಗಳೊಂದಿಗೆ ಒಳ್ಳೆಯ ವಾತಾವರಣವಿದ್ದು ನಿಮಗೆ ಸೂಕ್ತವಾಗಿದೆ.

4. ಸಾರಥಿ ಸೋಷಿಯೋ-ಕಲ್ಚರಲ್ ಟ್ರಸ್ಟ್, ಕೋರಮಂಗಲ: ಇಲ್ಲಿ ಕೇವಲ ದುರ್ಗಾ ಪೂಜೆಯ ಆಚರಣೆಯೊಂದೇ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು,ಹಾಡು-ಕುಣಿತವೂ ಇದ್ದು, ಮೈನವಿರೇಳಿಸುವ ಸಂಜೆಯನ್ನು ನಿಮಗೆ ನೀಡುತ್ತದೆ.

5. ಅಮದೆರ್ ಪೂಜೊ, ಕನಕಪುರ ರೋಡ್/ ಜೆಪಿ ನಗರ: ಎರಡು ಸ್ಥಳಗಳಲ್ಲಿ ನೆಲೆಯಾಗಿರುವ ಈ ಪುಜೆಯು ಕುಟುಂಬದೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ.

6. ಜಯಮಹಲ್ ದುರ್ಗಾ ಪೂಜೆ: ನಗರದ ಹೃದಯ ಭಾಗದಲ್ಲಿರುವ ಈ ಜಾಗ, ಹೆಚ್ಚಿನ ಸಾಂಸ್ಕೃತಿಕತೆಯೊಂದಿಗೆ ಕೂಡಿದೆ.

7. ಬೆಂಗಾಲಿ ಅಸೋಸಿಯೇಷನ್ , ಉಲ್ಸೂರು:  ನಗರದ ಈ ಜಾಗ ಹೆಚ್ಚಿನ ಜನಸಮೂಹವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಮೊದಲಿನಿಂದಲೂ ಹೆಸರು ಮಾಡಿದೆ. ಇಲ್ಲಿ ಊಟೋಪಚಾರದ ಜೊತೆಗೆ ನವಮಿಯ ರಾತ್ರಿಯಂದು ದಾಂಡಿಯಾ ನೃತ್ಯಕ್ಕಾಗಿ ಹೆಸರುವಾಸಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:43 am, Mon, 29 September 25

Follow Us
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಅಮೆರಿಕಕ್ಕೆ ತೆರಳಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​