AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಸಮಯದಲ್ಲಿ ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ

ದಸರಾದ ಸಮಯದಲ್ಲಿ ಬೆಂಗಳೂರಿನಲ್ಲಿ ದುರ್ಗಾಪೂಜೆಯ ಗಮ್ಮತ್ತು ಎಲ್ಲೆಡೆ ಕಾಣ ಸಿಗುತ್ತಿದೆ. ಪ್ರತಿ ಗಲ್ಲಿಗಳಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿದೆ. ದುರ್ಗಾ ಪುಜೆಯ ಕೊನೆಯ ದಿನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್ಗಳನ್ನು ನೀವು ಹುಡುಕುತ್ತಿದ್ದರೆ ನೀವು ಭೇಟಿ ನೀಡಬಹುದಾದ ಜಾಗಗಳು ಇಲ್ಲಿವೆ.

ದಸರಾ ಸಮಯದಲ್ಲಿ  ಬೆಂಗಳೂರಿನಲ್ಲಿ ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳ ಮಾಹಿತಿ ಇಲ್ಲಿದೆ
ಬೆಂಗಳೂರಿನಲ್ಲಿರುವ ಉತ್ತಮ ದುರ್ಗಾ ಪೂಜೆಯ ಸ್ಥಳಗಳು
ಭಾವನಾ ಹೆಗಡೆ
|

Updated on:Sep 29, 2025 | 12:13 PM

Share

ಬೆಂಗಳೂರು, ಸೆಪ್ಟೆಂಬರ್ 29: ದಸರಾ (Dasara) ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಬೆಂಗಳೂರಿನ ಗಲ್ಲಿಗಲ್ಲಿಗಳೂ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿವೆ. ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಿರುವ ದುರ್ಗಾ ಪೂಜೆಯ ಕೊನೆಯ ದಿನವೂ ಹತ್ತಿರವಾಗುತ್ತಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡುವಂತಹ ದಾಂಡಿಯಾ ನೃತ್ಯಕ್ಕಾಗಿ ಎಲ್ಲಾ ವಯೋಮಾನದವರೂ ಕಾದು ಕುಳಿತಿರುತ್ತಾರೆ. ನೀವೇನಾದರೂ ಬೆಂಗಳೂರಿನಲ್ಲಿರುವ ದುರ್ಗಾ ಪೆಂಡಾಲ್​ಗಳನ್ನು ಹುಡುಕುತ್ತಿದ್ದರೆ, ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳು ಇಲ್ಲಿವೆ.

ಬೆಂಗಳೂರಿನಲ್ಲಿರುವ  ದುರ್ಗಾ ಪೆಂಡಾಲ್​ಗಳು

1. ಬಿಡಿಪಿಸಿ, ಅರಮನೆ ಮೈದಾನ: ಅರಮನೆ ಮೈದಾನದಲ್ಲಿ ನಡೆಯುವ ಈ ಭವ್ಯ ಉತ್ಸವವು ಬೆಂಗಳೂರಿನ ಅತಿ ದೊಡ್ಡ ಸಭೆಗಳಲ್ಲಿ ಒಂದಾಗಿದೆ. ನೀವು ಹೆಚ್ಚಿನ ಪ್ರಮಾಣದ ಜನ ಸಮೂಹ ಮತ್ತು ರೋಮಾಂಚಕ ಅನುಭವಗಳನ್ನು ಬಯಸುವುದಾದರೆ ಈ ಆಯ್ಕೆ ನಿಮಗೆ ಸೂಕ್ತವಾಗಿದೆ.

2. SUC ದುರ್ಗಾ ಪೂಜೆ, ಬಿಲೆಕಹಳ್ಳಿ( ಶ್ರೀನಿವಾಸ್ ಕಲ್ಯಾಣ ಮಂಟಪ): ನೀವು ಶಾಂತವಾದ ಹಬ್ಬದ ವಾತಾವರಣವನ್ನು ಬಯಸುವುದಾದರೆ ಈ ಜಾಗ ನಿಮಗೆ ಹೇಳಿ ಮಾಡಿಸಿದಂತದ್ದು. ಇಲ್ಲಿ ನೀವು ಆರಾಮದಾಯಕವಾಗಿ ಪೂಜೆಯ ಅನುಭವವನ್ನು ಪಡೆಯಬಹುದು.

3. ಬರ್ಷಾ ಬೆಂಗಾಲಿ ಅಸೋಸಿಯೇಷನ್, HSR/ಸರ್ಜಾಪುರ: ಇದು ಎಲ್ಲಾ ದಾಂಡಿಯಾ ಪ್ರಿಯರ ನೆಚ್ಚಿನ ತಾಣವಾಗಿದೆ. ಆಹಾರ ಮಳಿಗೆಗಳೊಂದಿಗೆ ಒಳ್ಳೆಯ ವಾತಾವರಣವಿದ್ದು ನಿಮಗೆ ಸೂಕ್ತವಾಗಿದೆ.

4. ಸಾರಥಿ ಸೋಷಿಯೋ-ಕಲ್ಚರಲ್ ಟ್ರಸ್ಟ್, ಕೋರಮಂಗಲ: ಇಲ್ಲಿ ಕೇವಲ ದುರ್ಗಾ ಪೂಜೆಯ ಆಚರಣೆಯೊಂದೇ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು,ಹಾಡು-ಕುಣಿತವೂ ಇದ್ದು, ಮೈನವಿರೇಳಿಸುವ ಸಂಜೆಯನ್ನು ನಿಮಗೆ ನೀಡುತ್ತದೆ.

5. ಅಮದೆರ್ ಪೂಜೊ, ಕನಕಪುರ ರೋಡ್/ ಜೆಪಿ ನಗರ: ಎರಡು ಸ್ಥಳಗಳಲ್ಲಿ ನೆಲೆಯಾಗಿರುವ ಈ ಪುಜೆಯು ಕುಟುಂಬದೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ.

6. ಜಯಮಹಲ್ ದುರ್ಗಾ ಪೂಜೆ: ನಗರದ ಹೃದಯ ಭಾಗದಲ್ಲಿರುವ ಈ ಜಾಗ, ಹೆಚ್ಚಿನ ಸಾಂಸ್ಕೃತಿಕತೆಯೊಂದಿಗೆ ಕೂಡಿದೆ.

7. ಬೆಂಗಾಲಿ ಅಸೋಸಿಯೇಷನ್ , ಉಲ್ಸೂರು:  ನಗರದ ಈ ಜಾಗ ಹೆಚ್ಚಿನ ಜನಸಮೂಹವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಮೊದಲಿನಿಂದಲೂ ಹೆಸರು ಮಾಡಿದೆ. ಇಲ್ಲಿ ಊಟೋಪಚಾರದ ಜೊತೆಗೆ ನವಮಿಯ ರಾತ್ರಿಯಂದು ದಾಂಡಿಯಾ ನೃತ್ಯಕ್ಕಾಗಿ ಹೆಸರುವಾಸಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:43 am, Mon, 29 September 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ