AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ವರ್ಷಕ್ಕೊಮ್ಮೆ ಈ ರೀತಿ ಸಮಸ್ಯೆ ಬರುತ್ತೆ; ಇಂಥಾ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ: ಶಾಸಕ ಜಮೀರ್ ಅಹ್ಮದ್

ಸಿಎಂ ಯಡಿಯೂರಪ್ಪ 1,700 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು. ಆದರೆ ಅಪ್ಲಿಕೇಶನ್ ಹಾಕೋಕೆ ಆ್ಯಪ್ ವರ್ಕ್ ಆಗ್ತಿಲ್ಲ. ಎಲ್ಲಿ ಹೋಯ್ತು 1,700 ಕೋಟಿ ಪರಿಹಾರ ಧನ? 250 ಕೋಟಿ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಉಳಿದ ಹಣ ಎಲ್ಲಿ ಹೋಯ್ತು? ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

100 ವರ್ಷಕ್ಕೊಮ್ಮೆ ಈ ರೀತಿ ಸಮಸ್ಯೆ ಬರುತ್ತೆ; ಇಂಥಾ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ: ಶಾಸಕ ಜಮೀರ್ ಅಹ್ಮದ್
ಶಾಸಕ ಜಮೀರ್ ಅಹ್ಮದ್
Follow us
sandhya thejappa
|

Updated on: Jun 19, 2021 | 1:54 PM

ಬೆಂಗಳೂರು: 100 ವರ್ಷಕ್ಕೆ ಒಮ್ಮೆ ಈ ರೀತಿ ಸಮಸ್ಯೆ ಬರುತ್ತದೆ. ಇಂತಹ ಸಮಯದಲ್ಲಿ ನನಗೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಕೊರೊನಾ ಎರಡನೇ ಅಲೆ ಬರುತ್ತೆ ಅಂತ ತಜ್ಞರು ಸರ್ಕಾರಕ್ಕೆ ಸಲಹೆ ಕೊಟ್ಟಿದ್ರು. ಆದ್ರೆ ಸರ್ಕಾರ ಉಡಾಫೆಯಿಂದ ಮುಂಜಾಗ್ರತವಾಗಿ ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಸಾಕಷ್ಟು ಜನ ಬೆಡ್ ಸಿಗದೇ ಮೃತಪಟ್ಟಿದ್ದಾರೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನ ನಾನು ಮಾಡ್ತಾ ಇದ್ದೀನಿ. ನಮ್ಮ ದುರಾದೃಷ್ಟ ಸಂಕಷ್ಟದ ವೇಳೆ ಬಿಜೆಪಿ ಸರ್ಕಾರ ಇದೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ 1,700 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು. ಆದರೆ ಅಪ್ಲಿಕೇಶನ್ ಹಾಕೋಕೆ ಆ್ಯಪ್ ವರ್ಕ್ ಆಗ್ತಿಲ್ಲ. ಎಲ್ಲಿ ಹೋಯ್ತು 1,700 ಕೋಟಿ ಪರಿಹಾರ ಧನ? 250 ಕೋಟಿ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಉಳಿದ ಹಣ ಎಲ್ಲಿ ಹೋಯ್ತು? ಎಂದು ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

ಸ್ಪೇಷಲ್ ಪ್ಯಾಕೇಜ್ ಪರಿಹಾರ ಬಡವರಿಗೆ ಸಿಕ್ತಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ. ಶೇ.80ರಷ್ಟು ಜನ ವ್ಯವಸ್ಥೆ ಸರಿ ಇಲ್ಲದ ಕಾರಣ ಮೃತಪಟ್ಟಿದ್ದಾರೆ. ಬಿಪಿಎಲ್ ಕಾರ್ಡ್ ಇಲ್ಲದವರು ಸತ್ತಿದ್ದಾರೆ. ಅವರ ಗತಿ ಏನು? ಕಳೆದ ವಾರ ಪ್ರಧಾನ ಮಂತ್ರಿಗಳ ಪ್ರೆಸ್ ಮೀಟ್ ಇತ್ತು. ಏನೇನೂ ಘೋಷಣೆ ಮಾಡಿಲ್ಲ. ವ್ಯಾಕ್ಸಿನ್ ಉಚಿತವಾಗಿ ನೀಡುತ್ತೇನೆ ಅಂದ್ರು. ಜಿಎಸ್ಟಿ ಟ್ಯಾಕ್ಸ್ ಬಿಟ್ಬಿಡಿ ನಾವೇ ನಿಮಗೆ ಉಚಿತವಾಗಿ ವ್ಯಾಕ್ಸಿನ್ ಕೊಡ್ತೀವಿ. ದೇಶ್ ಕೀ ಅಚ್ಚೇ ದೀ ಆಯಾಂಗೆ ಬಾಯಿ ಬೆಹನೋ ಅಂತ ದೊಡ್ಡ ದೊಡ್ಡ ಭಾಷಣ ಮಾಡುತ್ತಿದ್ದರು. ಟೀ ಮಾರುತ್ತಿದ್ದವರು ಬಡವರ ಬಗ್ಗೆ ಕಾಳಜಿ ಇದೆ ಅಂತ ಜನರು ಪ್ರಧಾನಿ ಮಾಡಿದರು. ಆದ್ರೀಗ ಅವರು ಏನ್ ಮಾಡ್ತಿದ್ದಾರೆ. ಪೆಟ್ರೋಲ್ ದರ 100 ರೂ. ಗಿಂತ ಹೆಚ್ಚಾಗಿದೆ. ಕ್ರೂಡಾಯಿಲ್ ಮೇಲೆ ಶೇ.63 ರಷ್ಟು ಟ್ಯಾಕ್ಸ್ ಹಾಕುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಎರಡನೇ ಅಲೆ ಬಂದ ಮೇಲೆ ಜೆಡಿಎಸ್ ಅವ್ರು ಎಲ್ರೂ ಹೋಂ ಕ್ವಾರಂಟೈನ್ ಆಗಿದ್ದಾರೆ. ಜನಸೇವೆ ಮಾಡೋದನ್ನ ಮರೆತಿದ್ದಾರೆ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿ ಆಗಿ ತೋಟಕ್ಕೆ ಸೇರಿಕೊಂಡಿದ್ದಾರೆ. ಮೂರನೇ ಅಲೆ ಬರುತ್ತೆ ಅಂತ ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ 1,300 ಐಸಿಯು ಬೆಡ್ ಇದೆ. ಆದ್ರೆ 4500 ಐಸಿಯು ಬೆಡ್ ಬೇಕಾಗಿದೆ. ಮೂರನೇ ಅಲೆಗಾದ್ರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಇದನ್ನೂ ಓದಿ

ಬಿಜೆಪಿ ಯುದ್ಧಕಾಂಡ ಜನಸಾಮಾನ್ಯರ ಕರ್ಮಕಾಂಡವಾಗಿದೆ, ನರಕಯಾತನೆಗೆ ಕೊನೆಯೇ ಇಲ್ಲ- ಡಿಕೆ ಶಿವಕುಮಾರ್ ವ್ಯಥೆ

ರೇಣುಕಾಚಾರ್ಯಗೆ.. ಸರ್ ನೀವು ಆರೋಗ್ಯ ಸಚಿವರಾಗಬೇಕು ಎಂದ ಸೋಂಕಿತ!

(Zameer Ahmed says I have had opportunity to help during a hundred years of hardship)

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು