‘ಆನಂದ’ದ ಪಯಣ.. ಹೆಲಿಕಾಪ್ಟರ್ ಹತ್ತಿಸಿ ಅಭಿಮಾನಿಗಳ ಆಸೆ ಈಡೇರಿಸಿದ ಸಚಿವ ಆನಂದ್ ಸಿಂಗ್!

| Updated By: ಸಾಧು ಶ್ರೀನಾಥ್​

Updated on: Nov 11, 2020 | 10:51 AM

ಬಳ್ಳಾರಿ: ಹೆಲಿಕಾಪ್ಟರ್​ನಲ್ಲಿ ತನ್ನ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಆನಂದ್ ಸಿಂಗ್ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಹಂಪಿ ವಿವಿ ಹೆಲಿಪ್ಯಾಡ್​ನಿಂದ ಬೆಂಗಳೂರಿಗೆ ಸಚಿವರ ಆನಂದ್ ಸಿಂಗ್ ತಮ್ಮ ಅಭಿಮಾನಿಗಳ ಜೊತೆ ಕುಳಿತು ಮಾತನಾಡುತ್ತಾ ಆನಂದದಿಂದ ಪ್ರಯಾಣ ಮಾಡಿದ್ದಾರೆ. ‘ಆನಂದ’ದ ಪಯಣ.. ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಅಂಥೋನಿ ದಾಸ್ ಎಂಬ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆನಂದ್ ಸಿಂಗ್ ಜೊತೆ ಹೆಲಿಕ್ಯಾಪ್ಟರ್​ನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಸದ್ಯ ಈಗ ಇವರ ಕನಸನ್ನು […]

‘ಆನಂದ’ದ ಪಯಣ.. ಹೆಲಿಕಾಪ್ಟರ್ ಹತ್ತಿಸಿ ಅಭಿಮಾನಿಗಳ ಆಸೆ ಈಡೇರಿಸಿದ ಸಚಿವ ಆನಂದ್ ಸಿಂಗ್!
Follow us on

ಬಳ್ಳಾರಿ: ಹೆಲಿಕಾಪ್ಟರ್​ನಲ್ಲಿ ತನ್ನ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಮೂಲಕ ಸಚಿವ ಆನಂದ್ ಸಿಂಗ್ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಹಂಪಿ ವಿವಿ ಹೆಲಿಪ್ಯಾಡ್​ನಿಂದ ಬೆಂಗಳೂರಿಗೆ ಸಚಿವರ ಆನಂದ್ ಸಿಂಗ್ ತಮ್ಮ ಅಭಿಮಾನಿಗಳ ಜೊತೆ ಕುಳಿತು ಮಾತನಾಡುತ್ತಾ ಆನಂದದಿಂದ ಪ್ರಯಾಣ ಮಾಡಿದ್ದಾರೆ.

‘ಆನಂದ’ದ ಪಯಣ..
ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಅಂಥೋನಿ ದಾಸ್ ಎಂಬ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆನಂದ್ ಸಿಂಗ್ ಜೊತೆ ಹೆಲಿಕ್ಯಾಪ್ಟರ್​ನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಸದ್ಯ ಈಗ ಇವರ ಕನಸನ್ನು ಸಚಿವರು ಈಡೇರಿಸಿದ್ದಾರೆ.

ಹೆಲಿಕ್ಯಾಪ್ಟರ್​ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ಬಳಿಕ ಮರಳಿ ಬರುವಾಗ ಅಭಿಮಾನಿಗಳನ್ನ ತಮ್ಮದೇ ಕಾರಿನಲ್ಲಿ ಆನಂದ್ ಸಿಂಗ್ ಕರೆದುಕೊಂಡು ಬಂದಿದ್ದಾರೆ. ತಮ್ಮ ನೆಚ್ಚಿನ ನಾಯಕ ತಮ್ಮ ಆಸೆ ಈಡೇರಿಸಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜನ ನಾಯಕನನ್ನು ಕೊಂಡಾಡಿದ್ದಾರೆ.