AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯಲಿ ಜೀವನ್ಮರಣ ಹೋರಾಟ ನಡೆಸ್ತಿದ್ದ ಹದ್ದಿಗೆ ಮಡಿವಾಳ ಪೊಲೀಸರ ಆಸರೆ!

ಬೆಂಗಳೂರು: ಮಡಿವಾಳ ಟ್ರಾಫಿಕ್ ಪೊಲೀಸರು ಹದ್ದಿನ ರಕ್ಷಣೆ ಮಾಡಿದ್ದಾರೆ. ನಿನ್ನೆಯಿಂದಲೂ ಠಾಣೆಯ ಸುತ್ತಮುತ್ತ ಹಾರಾಡ್ತಿದ್ದ ಹದ್ದು ಇಂದು ಪೊಲೀಸರೇ ತನ್ನ ಆರಕ್ಷಿಸಬೇಕು ಎಂದು ಬಯಸಿ, ಠಾಣೆಯೆದುರೇ ಪ್ರತ್ಯಕ್ಷವಾಗಿತ್ತು. ಆಹಾರವಿಲ್ಲದೇ ನಿತ್ರಾಣವಾಗಿದ್ದ ಆ ಹದ್ದು ರೆಕ್ಕೆ ಬಿಚ್ಚಿ ಹಾರಾಡಲಾಗದೆ ನಡುರಸ್ತೆಯಲ್ಲೆ ಪರಿತಪಿಸುತ್ತಿತ್ತು. ಮಡಿವಾಳ ಟ್ರಾಫಿಕ್ ಪಿಎಸ್ಐ ಶಿವರಾಜ್ ಕುಮಾರ್ ಮತ್ತು ಸಿಬ್ಬಂದಿಗೆ ವೆಹಿಕಲ್ ಚೆಕ್ಕಿಂಗ್ ವೇಳೆ ಈ ಹದ್ದು ನಿತ್ರಾಣವಾಗಿ ನಡುರಸ್ತೆಯಲ್ಲಿ ಪರಿತಪಿಸುತ್ತಿದ್ದಿದ್ದು ಕಂಡು ಬಂದಿದೆ. ಕೂಡಲೇ ಕರ್ತವ್ಯನಿರತ ಪಿಎಸ್ ಐ ಶಿವರಾಜ್ ಕುಮಾರ್ ಅಸ್ವಸ್ಥವಾಗಿದ್ದ ಹದ್ದಿಗೆ ನೀರುಣಿಸಿ […]

ರಸ್ತೆಯಲಿ ಜೀವನ್ಮರಣ ಹೋರಾಟ ನಡೆಸ್ತಿದ್ದ ಹದ್ದಿಗೆ ಮಡಿವಾಳ ಪೊಲೀಸರ ಆಸರೆ!
ಸಾಧು ಶ್ರೀನಾಥ್​
|

Updated on: Apr 17, 2020 | 2:14 PM

Share

ಬೆಂಗಳೂರು: ಮಡಿವಾಳ ಟ್ರಾಫಿಕ್ ಪೊಲೀಸರು ಹದ್ದಿನ ರಕ್ಷಣೆ ಮಾಡಿದ್ದಾರೆ. ನಿನ್ನೆಯಿಂದಲೂ ಠಾಣೆಯ ಸುತ್ತಮುತ್ತ ಹಾರಾಡ್ತಿದ್ದ ಹದ್ದು ಇಂದು ಪೊಲೀಸರೇ ತನ್ನ ಆರಕ್ಷಿಸಬೇಕು ಎಂದು ಬಯಸಿ, ಠಾಣೆಯೆದುರೇ ಪ್ರತ್ಯಕ್ಷವಾಗಿತ್ತು.

ಆಹಾರವಿಲ್ಲದೇ ನಿತ್ರಾಣವಾಗಿದ್ದ ಆ ಹದ್ದು ರೆಕ್ಕೆ ಬಿಚ್ಚಿ ಹಾರಾಡಲಾಗದೆ ನಡುರಸ್ತೆಯಲ್ಲೆ ಪರಿತಪಿಸುತ್ತಿತ್ತು. ಮಡಿವಾಳ ಟ್ರಾಫಿಕ್ ಪಿಎಸ್ಐ ಶಿವರಾಜ್ ಕುಮಾರ್ ಮತ್ತು ಸಿಬ್ಬಂದಿಗೆ ವೆಹಿಕಲ್ ಚೆಕ್ಕಿಂಗ್ ವೇಳೆ ಈ ಹದ್ದು ನಿತ್ರಾಣವಾಗಿ ನಡುರಸ್ತೆಯಲ್ಲಿ ಪರಿತಪಿಸುತ್ತಿದ್ದಿದ್ದು ಕಂಡು ಬಂದಿದೆ.

ಕೂಡಲೇ ಕರ್ತವ್ಯನಿರತ ಪಿಎಸ್ ಐ ಶಿವರಾಜ್ ಕುಮಾರ್ ಅಸ್ವಸ್ಥವಾಗಿದ್ದ ಹದ್ದಿಗೆ ನೀರುಣಿಸಿ ಆರೈಕೆ ಮಾಡಿದ್ದಾರೆ. ಹಾರಾಲಾಗದೆ ನಿತ್ರಾಣವಾಗಿದ್ದ ಹದ್ದಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ ಅಗತ್ಯ ವೈದ್ಯಕೀಯ ನೆರವನ್ನೂ ಕಲ್ಪಿಸಿದ್ದಾರೆ. ಬಳಿಕ ಬನ್ನೇರುಘಟ್ಟ ಸಮೀಪದ ಪ್ರಾಣಿ ದಯಾ ಸಂಘದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಮಡಿವಾಳ ಸಂಚಾರಿ ಠಾಣೆಯ ಮುಖ್ಯ ಪೇದೆ ಲೋಕೇಶ್ ಮತ್ತು ಮಲ್ಲಿಕಾರ್ಜುನ ಸಹ ಇದರಲ್ಲಿ ನೆರವಿನ ಹಸ್ತ ಚಾಚಿದ್ದಾರೆ.