AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಕೆಲಸದವನಿಂದ್ಲೇ ಲಾಕರ್ ಕಳ್ಳತನ, ಉಂಡ ಮನೆಗೆ ಕನ್ನ ಹಾಕೋಕೆ ಹೋಗಿ ಲಾಕ್

ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ […]

ಅಡುಗೆ ಕೆಲಸದವನಿಂದ್ಲೇ ಲಾಕರ್ ಕಳ್ಳತನ, ಉಂಡ ಮನೆಗೆ ಕನ್ನ ಹಾಕೋಕೆ ಹೋಗಿ ಲಾಕ್
ಆಯೇಷಾ ಬಾನು
|

Updated on: Oct 19, 2020 | 6:36 AM

Share

ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ ಮಾಡಿದ್ದ. ಅದರಂತೆ ಅಕ್ಟೋಬರ್ 9ರಂದು ರಾಜೇಶ್ ಬಾಬು ಮನೆಯಲ್ಲಿದ್ದ ವಜ್ರ, ಚಿನ್ನಾಭರಣಗಳಿದ್ದ ಲಾಕರ್ ಕದ್ದೊಯ್ದಿದ್ದಾನೆ.. ಈ ಲಾಕರ್‌ನಲ್ಲಿ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಬೆಲೆಬಾಳುವ ವಜ್ರ ಮತ್ತು ಚಿನ್ನದ ಆಭರಣ ಇತ್ತು. ಈ ಕಳ್ಳತನದಿಂದ ಶಾಕ್‌ ಆದ ಮನೆ ಮಾಲೀಕ ರಾಜೇಶ್ ಜೆ.ಪಿ ನಗರ ಠಾಣೆಯಲ್ಲಿ‌ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿಜಿಟಲ್ ಲಾಕರ್ ಸಮೇತ ಎಸ್ಕೇಪ್ ಆಗಿದ್ದ ಕೈಲಾಸ್‌ನನ್ನ 48 ಗಂಟೆಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .

ಲಾಕರ್ ಕದ್ದ ಕೈಲಾಸ್‌ ಲಾಕರ್ ಸಮೇತ ಮೈಸೂರಿಗೆ ಹೋಗಿ ಲಾಡ್ಜ್ ನಲ್ಲಿ ಸೇರಿಕೊಂಡಿದ್ದ. ಅಲ್ಲಿ 2 ದಿನ ಲಾಕರ್ ಒಪನ್ ಮಾಡೋಕೆ ಒದ್ದಾಡಿದ್ದಾನೆ. ಆದ್ರೆ ಓಪನ್ ಆಗಿಲ್ಲ. ಇಲ್ಲೇ ಇದ್ರೆ ಪೊಲೀಸರ ಕೈಯಲ್ಲಿ ಲಾಕ್ ಆಗ್ತೀನಿ ಅಂತ ತನ್ನ ಊರಾದ ಪ.ಬಂಗಾಳಕ್ಕೆ ತೆರಳಲು ರೈಲು ಏರಿದ್ದ. ರೈಲ್ವೆ ನಿಲ್ದಾಣ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದಾಗ ಆರೋಪಿ ಕೈಲಾಸ್‌ ಯಶವಂತಪುರ ರೈಲ್ವೆ ನಿಲ್ದಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದು ಗೊತ್ತಾಗಿತ್ತು. ಈ ಮಾಹಿತಿ ತಿಳಿದು ಪೊಲೀಸರು ಆತ ತಲುಪುವ ಮುಂಚೆಯೇ ಹೌರಾ ಬಳಿ ಆತನ ಸ್ವಾಗತಕ್ಕೆ ಕಾದಿದ್ದಾರೆ. ಆದರೆ ಅಲ್ಲಿ ಕೂಡ ಪೊಲೀಸರ ಕಣ್ತಪ್ಪಿಸಿ ರೈಲ್ವೆ ನಿಲ್ದಾಣದ ಬೇರೆ-ಬೇರೆ ಪ್ಲಾಟ್ ಫಾರ್ಮ್‌ನಿಂದ ಹೊರಗಡೆ ಹೋಗೋಕೆ ಸಂಚು ಹಾಕಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪ್ಲ್ಯಾನ್ ಮಾಡಿ ರೈಲ್ವೆ ನಿಲ್ದಾಣದಲ್ಲೇ ಕೈಲಾಸ್‌ನನ್ನ ಬಂಧಿಸಿ, ವಜ್ರ, ಚಿನ್ನಾಭರಣಗಳಿದ್ದ ಲಾಕರ್ ವಶಕ್ಕೆ ಪಡೆದಿದ್ದಾರೆ.

ಮಾಲೀಕನಿಗೆ ವಂಚಿಸಿ ಆರೋಪಿ ಚಾಪೆ ಕೆಳಗೆ ನುಸುಳಿದ್ರೆ, ಬೆಂಗಳೂರು ಪೊಲೀಸರ ಚಾಣಾಕ್ಷ ತನಿಖೆ ನಡೆಸಿ ರಂಗೋಲಿ ಕೆಳೆಗೆ ನುಸುಳಿ ಕೈಲಾಸ್‌ನನ್ನ ಲಾಕ್ ಮಾಡಿದ್ದಾರೆ. ಒಟ್ನಲ್ಲಿ ಅಯ್ಯೋ ಪಾಪ ಎಂದು ಪರ ರಾಜ್ಯದವರಿಗೆ ಕೆಲಸ ನೀಡುವ ಮುಂಚೇ ಮೂರು ಸಲ ಯೋಚನೆ ಮಾಡಿ. ಇದು ಒಂದು ಉದಾಹರಣೆ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್