AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಕೆಲಸದವನಿಂದ್ಲೇ ಲಾಕರ್ ಕಳ್ಳತನ, ಉಂಡ ಮನೆಗೆ ಕನ್ನ ಹಾಕೋಕೆ ಹೋಗಿ ಲಾಕ್

ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ […]

ಅಡುಗೆ ಕೆಲಸದವನಿಂದ್ಲೇ ಲಾಕರ್ ಕಳ್ಳತನ, ಉಂಡ ಮನೆಗೆ ಕನ್ನ ಹಾಕೋಕೆ ಹೋಗಿ ಲಾಕ್
ಆಯೇಷಾ ಬಾನು
|

Updated on: Oct 19, 2020 | 6:36 AM

Share

ಬೆಂಗಳೂರು: ಬೇರೆ ರಾಜ್ಯದಿಂದ ಬಂದು ಅಡುಗೆ ಕೆಲಸ ಮಾಡ್ಕೊಂಡು ಇದ್ದು, ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ನಿವಾಸಿ ಕೈಲಾಸ್ ದಾಸ್ ಎಂಬಾತ ಜೆ.ಪಿ.ನಗರದ ರಾಜೇಶ್ ಬಾಬು ಎಂಬುವರ ಮನೆಯಲ್ಲಿ 6 ವರ್ಷದಿಂದ ಅಡುಗೆ ಕೆಲಸ ಮಾಡ್ಕೊಂಡು ಇವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಈ ಮನೆಯ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಉಂಡು ತಿಂದ ಮನೆಗೆ ಕನ್ನ ಹಾಕೋಕೆ ಈತ ಪ್ಲ್ಯಾನ್ ಮಾಡಿದ್ದ. ಅದರಂತೆ ಅಕ್ಟೋಬರ್ 9ರಂದು ರಾಜೇಶ್ ಬಾಬು ಮನೆಯಲ್ಲಿದ್ದ ವಜ್ರ, ಚಿನ್ನಾಭರಣಗಳಿದ್ದ ಲಾಕರ್ ಕದ್ದೊಯ್ದಿದ್ದಾನೆ.. ಈ ಲಾಕರ್‌ನಲ್ಲಿ ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಬೆಲೆಬಾಳುವ ವಜ್ರ ಮತ್ತು ಚಿನ್ನದ ಆಭರಣ ಇತ್ತು. ಈ ಕಳ್ಳತನದಿಂದ ಶಾಕ್‌ ಆದ ಮನೆ ಮಾಲೀಕ ರಾಜೇಶ್ ಜೆ.ಪಿ ನಗರ ಠಾಣೆಯಲ್ಲಿ‌ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿಜಿಟಲ್ ಲಾಕರ್ ಸಮೇತ ಎಸ್ಕೇಪ್ ಆಗಿದ್ದ ಕೈಲಾಸ್‌ನನ್ನ 48 ಗಂಟೆಗಳಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .

ಲಾಕರ್ ಕದ್ದ ಕೈಲಾಸ್‌ ಲಾಕರ್ ಸಮೇತ ಮೈಸೂರಿಗೆ ಹೋಗಿ ಲಾಡ್ಜ್ ನಲ್ಲಿ ಸೇರಿಕೊಂಡಿದ್ದ. ಅಲ್ಲಿ 2 ದಿನ ಲಾಕರ್ ಒಪನ್ ಮಾಡೋಕೆ ಒದ್ದಾಡಿದ್ದಾನೆ. ಆದ್ರೆ ಓಪನ್ ಆಗಿಲ್ಲ. ಇಲ್ಲೇ ಇದ್ರೆ ಪೊಲೀಸರ ಕೈಯಲ್ಲಿ ಲಾಕ್ ಆಗ್ತೀನಿ ಅಂತ ತನ್ನ ಊರಾದ ಪ.ಬಂಗಾಳಕ್ಕೆ ತೆರಳಲು ರೈಲು ಏರಿದ್ದ. ರೈಲ್ವೆ ನಿಲ್ದಾಣ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದಾಗ ಆರೋಪಿ ಕೈಲಾಸ್‌ ಯಶವಂತಪುರ ರೈಲ್ವೆ ನಿಲ್ದಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದು ಗೊತ್ತಾಗಿತ್ತು. ಈ ಮಾಹಿತಿ ತಿಳಿದು ಪೊಲೀಸರು ಆತ ತಲುಪುವ ಮುಂಚೆಯೇ ಹೌರಾ ಬಳಿ ಆತನ ಸ್ವಾಗತಕ್ಕೆ ಕಾದಿದ್ದಾರೆ. ಆದರೆ ಅಲ್ಲಿ ಕೂಡ ಪೊಲೀಸರ ಕಣ್ತಪ್ಪಿಸಿ ರೈಲ್ವೆ ನಿಲ್ದಾಣದ ಬೇರೆ-ಬೇರೆ ಪ್ಲಾಟ್ ಫಾರ್ಮ್‌ನಿಂದ ಹೊರಗಡೆ ಹೋಗೋಕೆ ಸಂಚು ಹಾಕಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪ್ಲ್ಯಾನ್ ಮಾಡಿ ರೈಲ್ವೆ ನಿಲ್ದಾಣದಲ್ಲೇ ಕೈಲಾಸ್‌ನನ್ನ ಬಂಧಿಸಿ, ವಜ್ರ, ಚಿನ್ನಾಭರಣಗಳಿದ್ದ ಲಾಕರ್ ವಶಕ್ಕೆ ಪಡೆದಿದ್ದಾರೆ.

ಮಾಲೀಕನಿಗೆ ವಂಚಿಸಿ ಆರೋಪಿ ಚಾಪೆ ಕೆಳಗೆ ನುಸುಳಿದ್ರೆ, ಬೆಂಗಳೂರು ಪೊಲೀಸರ ಚಾಣಾಕ್ಷ ತನಿಖೆ ನಡೆಸಿ ರಂಗೋಲಿ ಕೆಳೆಗೆ ನುಸುಳಿ ಕೈಲಾಸ್‌ನನ್ನ ಲಾಕ್ ಮಾಡಿದ್ದಾರೆ. ಒಟ್ನಲ್ಲಿ ಅಯ್ಯೋ ಪಾಪ ಎಂದು ಪರ ರಾಜ್ಯದವರಿಗೆ ಕೆಲಸ ನೀಡುವ ಮುಂಚೇ ಮೂರು ಸಲ ಯೋಚನೆ ಮಾಡಿ. ಇದು ಒಂದು ಉದಾಹರಣೆ.

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ