‘ಶ್ರೀ ಕಥಾಮಂಜರಿ’ ಗದ್ಯ ಕಾವ್ಯ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ
ದಿವಂಗತ ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ರವರು ರಚಿಸಿದ ಶ್ರೀ ಕಥಾಮಂಜರಿ ಗದ್ಯ ಕಾವ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅನಾವರಣಗೊಳಿಸಿದರು

ಶ್ರೀ ಕಥಾಮಂಜರಿ ಗದ್ಯಕಾವ್ಯ ಬಿಡುಗಡೆ
ಬೆಂಗಳೂರು: ‘ಶ್ರೀ ಕಥಾಮಂಜರಿ’ ಗದ್ಯ ಕಾವ್ಯ (ಸಂಪೂರ್ಣ ಮಹಾಭಾರತ)ವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಅನಾವರಣಗೊಳಿಸಿದರು.
ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಆಯೋಜಿಸಲ್ಪಟ್ಟ ದಿವಂಗತ ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ವಿರಚಿತ ‘ಶ್ರೀ ಕಥಾಮಂಜರಿ’ ಗದ್ಯ ಬಿಡುಗಡೆಗೊಂಡಿದೆ.




