ಅರವಿಂದ್​ ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​; ಸದಸ್ಯರ ಎದುರೇ ಅವರು ಅಳೋಕೂ ಇದೆ ಕಾರಣ

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್​ಗೆ ಆಯ್ಕೆ ಆಗಿದ್ದರು. ಈ ಟಾಸ್ಕ್​ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್ ಈ ಮೂಲಕ ಅವರು ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ.

ಅರವಿಂದ್​ ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​; ಸದಸ್ಯರ ಎದುರೇ ಅವರು ಅಳೋಕೂ ಇದೆ ಕಾರಣ
ಅರವಿಂದ್​

Updated on: Mar 18, 2021 | 10:35 PM

ಮೂರನೇ ವಾರಕ್ಕೆ ಅರವಿಂದ್​ ಕೆಪಿ ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಮೂರನೇ ವಾರ ಅವರು ಮನೆಯನ್ನು ಮುನ್ನಡೆಸಲಿದ್ದಾರೆ. ಅವರು ಕ್ಯಾಪ್ಟನ್​ ಆಗುತ್ತಿದ್ದಂತೆ ಗಳಗಳನೆ ಅತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಜೋಡಿ ಟಾಸ್ಕ್​ನಲ್ಲಿ ರಾಜೀವ್​ ಹಾಗೂ ದಿವ್ಯಾ ಉರುಡಗ ಅದ್ಭುತವಾಗಿ ಆಟವಾಡಿದ್ದರು. ಗೇಮ್​ ಗೆದ್ದಿದ್ದಕ್ಕೆ ಸಿಕ್ಕಿದ್ದ ವಿಶೇಷ ಚಾರ್ಜರ್​ ಅನ್ನು ಹಿಂದಿರುಗಿಸಿದರೆ ಬೆಡ್​ ರೂಂ ಬಿಟ್ಟುಕೊಡುವುದಾಗಿ ಬಿಗ್​ ಬಾಸ್​ ಹೇಳಿದ್ದರು. ಆದರೆ, ಇದಕ್ಕೆ ಅರವಿಂದ್​​ ನಿರಾಕರಿಸಿದ್ದರು. ಇದು ಪರೋಕ್ಷವಾಗಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಬರೋಕೆ ಅವರಿಗೆ ಸಹಾಯ ಮಾಡಿದೆ.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್​ಗೆ ಆಯ್ಕೆ ಆಗಿದ್ದರು. ಯು ಆಕಾರದ ಆಯಾಸ್ಕಾಂತವನ್ನು ಎರಡು ಕಬ್ಬಿಣದ ಹಿಡಿಕೆಯಲ್ಲಿ ಹಿಡಿದುಕೊಳ್ಳಬೇಕು. ಈ ಟಾಸ್ಕ್​ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್ ಈ ಮೂಲಕ ಅವರು ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ.

ಇನ್ನು, ಬಿಗ್​ ಬಾಸ್​ ಮನೆ ಸ್ಪರ್ಧಿಗಳಿಗೆ ಜೀವನದಲ್ಲಿ ತಿರುವು ನೀಡಿದವರ ಬಗ್ಗೆ ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಮಾತನಾಡಿದ್ದ ಅರವಿಂದ್​, ಬೆಂಗಳೂರಿಗೆ ಬಂದಿದ್ದೆ. ಹಾಸ್ಟೇಲ್​ ​ ಪಕ್ಕದಲ್ಲಿ ಒಂದು ಆಟೋ ಮೊಬೈಲ್​ ಸ್ಪೇರ್​​ ಶಾಪ್​ ಇತ್ತು. ನನ್ನ ರೈಡ್​ಗೆ 2005-06 ಅವರೇ ಸ್ಪಾನ್ಸರ್​ ಮಾಡಿದ್ದರು. ಇದು ನನ್ನ ಜೀವನದ ದೊಡ್ಡ ತಿರುವು. ಅವರು ಇಲ್ಲ ಎಂದರೆ ನಾನು ಇಲ್ಲಿಗೆ ಬರುತ್ತಲೇ ಇರುತ್ತಿರಲಿಲ್ಲ ಎಂದು ಕಣ್ಣಲ್ಲಿ ನೀರು ಹಾಕಿದರು.

ದಿವ್ಯಾ-ಮಂಜು ರೊಮ್ಯಾನ್ಸ್​..

ದಿವ್ಯಾ ಹಾಗೂ ಮಂಜು ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಬ್ಬರಿಗೊಬ್ಬರು ಜಗಳ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಬಿಗ್​ ಬಾಸ್​ ಮನೆಯಲ್ಲಿ ಇವರ ರೊಮ್ಯಾನ್ಸ್​ ಮೂರನೇ ವಾರವೂ ಮುಂದುವರಿದೆ. ಸಾಮಾನ್ಯವಾಗಿ ಪ್ರೀತಿ ಪಾತ್ರರಾದವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಲಾಗುತ್ತದೆ. ಮನೆಯಲ್ಲೂ ಇಂದು ಅದೇ ಆಗಿದೆ. ಮಂಜು ಕೈ ಮೇಲೆ ದಿವ್ಯಾ ಸ್ಕೆಚ್​ಪೆನ್​ ತೆಗೆದುಕೊಂಡು ಬರೆಯೋಕೆ ಸ್ಟಾರ್ಟ್​ ಮಾಡಿದ್ದಾರೆ. ಈ ವೇಳೆ ಅವರು ಬರೆದಿದ್ದು ‘ಮಂಜು ಲವ್ಸ್​ ದಿವ್ಯಾ’ ಎಂದು. ಇದನ್ನು ನೋಡಿದ ಮಂಜು, ಅಬ್ಬಾ ಎಷ್ಟೊಂದು ಪ್ರೀತಿಯಿಂದ ಬರೆಯುತ್ತಿದ್ದಾರೆ ಎಂದಿದ್ದಾರೆ. ಹೀಗೆ ಬರೆದಿದ್ದನ್ನು ಮಂಜು, ವಿಶ್ವಾಗೆ ತೋರಿಸಿದ್ದಾರೆ. ಇದನ್ನು ನೋಡಿದ ವಿಶ್ವ ನಾಚಿ ನೀರಾಗಿದ್ದಾರೆ. ನಗುತ್ತಲೇ ಕಣ್ಣು ಮುಚ್ಚಿದ್ದಾರೆ. ಈ ವೇಳೆ ಅವರಿಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗಿಲ್ಲ. ಆಗ ನೋಡೋಕೆ ಎರಡು ಕಣ್ಣು ಸಾಲುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us