AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆ ಸೇರಿರೋ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಸಮ್​ಥಿಂಗ್ ಸ್ಪೆಷಲ್?

ಇತ್ತೀಚೆಗೆ ಸ್ನೇಹಿತ್ ಹಾಗೂ ಸಂಗೀತಾ ಮಾತನಾಡುತ್ತಿದ್ದರು. ಇವರನ್ನು ಕಾರ್ತಿಕ್ ನೋಡುತ್ತಾ ಇದ್ದರು. ಆ ಬಳಿಕ ಸ್ನೇಹಿತ್ ಹೊರಗೆ ಬಂದು ‘ಏನಾಯ್ತು’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾರ್ತಿಕ್, ‘ಬಾಯಿಗೆ ಬಂದ ತುತ್ತು ಕೈಗೆ ಬಂದಿಲ್ಲ’ ಎಂದರು.

ಬಿಗ್ ಬಾಸ್ ಮನೆ ಸೇರಿರೋ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಸಮ್​ಥಿಂಗ್ ಸ್ಪೆಷಲ್?
ಕಾರ್ತಿಕ್-ಸಂಗೀತಾ
Follow us
ರಾಜೇಶ್ ದುಗ್ಗುಮನೆ
|

Updated on: Oct 13, 2023 | 10:20 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಮಧ್ಯೆ ದೊಡ್ಮನೆಯಲ್ಲಿ ಪ್ರೀತಿ ಹುಟ್ಟಿತು. ಅದೇ ರೀತಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಮಧ್ಯೆ ಪ್ರೀತಿ ಮೂಡಿದ್ದು ಇವರು ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿದ್ದು ಮತ್ತೊಂದು ಲವ್​ಸ್ಟೋರಿ ಹುಟ್ಟಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ನಡೆದುಕೊಳ್ಳುತ್ತಿರುವ ರೀತಿ ಈ ಅನುಮಾನ ಹುಟ್ಟುಹಾಕಿದೆ.

ಇತ್ತೀಚೆಗೆ ಸ್ನೇಹಿತ್ ಹಾಗೂ ಸಂಗೀತಾ ಮಾತನಾಡುತ್ತಿದ್ದರು. ಇವರನ್ನು ಕಾರ್ತಿಕ್ ನೋಡುತ್ತಾ ಇದ್ದರು. ಆ ಬಳಿಕ ಸ್ನೇಹಿತ್ ಹೊರಗೆ ಬಂದು ‘ಏನಾಯ್ತು’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾರ್ತಿಕ್, ‘ಬಾಯಿಗೆ ಬಂದ ತುತ್ತು ಕೈಗೆ ಬಂದಿಲ್ಲ’ ಎಂದರು.

ಇನ್ನು, ಪ್ರಥಮ್ ಬಂದಾಗ ಸಂಗೀತಾ ಹಾಗೂ ಕಾರ್ತಿಕ್ ಅವರನ್ನು ಒಟ್ಟಿಗೇ ಕರೆಯುತ್ತಿದ್ದರು. ಸಂಗೀತಾ ಬಳಿ ಸ್ವೀಟ್ ಮಾಡಿಕೊಂಡು ಬರುವಂತೆ ಸೂಚಿಸಿದರು ಪ್ರಥಮ್. ಸಂಗೀತಾ ಬಳಿ ಸ್ವೀಟ್ ತಿನ್ನಿಸುವಂತೆ ಸೂಚಿಸಿದರು. ಆಗ ಕಾರ್ತಿಕ್ ಅವರನ್ನು ಸಮೀಪವೇ ಕರೆದು ಇಟ್ಟುಕೊಂಡಿದ್ದರು ಪ್ರಥಮ್. ಈ ಮೂಲಕ ಕಾರ್ತಿಕ್​ಗೆ ಹೊಟ್ಟೆ ಉರಿಸುವ ಕೆಲಸ ಮಾಡಿದರು ಪ್ರಥಮ್.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮಿಲಿಟರಿ ಡ್ರೆಸ್ ಧರಿಸಿ ಬಂದ ಪ್ರಥಮ್; ಹೇಗಿತ್ತು ನೋಡಿ ಖದರ್

ಪ್ರಥಮ್ ಮನೆಯಿಂದ ಹೊರ ಹೋದ ಬಳಿಕ ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಈ ವಿಚಾರ ಚರ್ಚೆಗೆ ಬಂತು. ‘ನಮ್ಮಿಬ್ಬರನ್ನು ಹೊರಗೆ ಜನರು ಇಷ್ಟಪಡುತ್ತಿದ್ದಾರೆ. ಪ್ರಥಮ್ ನಡೆದುಕೊಂಡ ರೀತಿ ಇದೇ ಸಾಕ್ಷಿ. ಆದರೆ, ನಾವಿಬ್ಬರು ಫ್ರೆಂಡ್ಸ್ ಎನ್ನುವ ಕ್ಲಾರಿಟಿ ನಮಗೆ ಇರಲಿ’ ಎಂದರು ಕಾರ್ತಿಕ್. ಸದ್ಯ ಇವರ ಮಧ್ಯೆ ಸಮ್​ಥಿಂಗ್ ಸ್ಪೆಷಲ್ ನಡೆಯುತ್ತಿದೆಯೇ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು