Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಸಕ್ತಿ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣ’; ಪ್ರತಾಪ್ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್

ಬಿಗ್ ಬಾಸ್ ಮನೆಗೆ ಹೋದರೆ ಜನಪ್ರಿಯತೆ ಸಿಗುತ್ತದೆ. ಕೆಲವೊಮ್ಮೆ ಇದು ಉಲ್ಟಾ ಆಗಿದ್ದೂ ಇದೆ. ಕಾಂಟ್ರವರ್ಸಿ ಮಾಡಿಕೊಂಡು ಕುಖ್ಯಾತಿ ಪಡೆದವರೂ ಅನೇಕರಿದ್ದಾರೆ. ಕೆಲವರಿಗೆ ಈ ಆಟ ಇಷ್ಟವೇ ಆಗುವುದಿಲ್ಲ. ಪ್ರತಾಪ್​ಗೂ ಬಿಗ್ ಬಾಸ್ ಬಗ್ಗೆ ಆಸಕ್ತಿ ಇರಲಿಲ್ಲ. ಅವರು ಈ ಕುರಿತು ಹೇಳಿಕೊಂಡಿದ್ದರು.

‘ಆಸಕ್ತಿ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣ’; ಪ್ರತಾಪ್ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್
ಡ್ರೋನ್ ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 13, 2023 | 2:12 PM

ಡ್ರೋನ್ ಪ್ರತಾಪ್ ಅವರು ಕಳೆದ ಕೆಲವು ವರ್ಷಗಳಿಂದ ಚರ್ಚೆಯಲ್ಲಿದ್ದಾರೆ. ಅವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ ಅನ್ನೋದು ಕೆಲವರ ಆರೋಪ. ಬಿಗ್ ಬಾಸ್ ಮನೆ ಒಳಗೆ ಹೋದ ಬಳಿಕವೂ ಅವರು ಸುದ್ದಿಯಲ್ಲಿದ್ದಾರೆ. ಅಲ್ಲಿಯೂ ಡ್ರೋನ್ ವಿಚಾರ ಇಟ್ಟುಕೊಂಡು ಅವರನ್ನು ಟೀಕೆ ಮಾಡಲಾಗುತ್ತಿದೆ. ದೊಡ್ಮನೆಯಲ್ಲಿ ಈ ಬಗ್ಗೆ ಭರ್ಜರಿ ಚರ್ಚೆಗಳು ಆಗುತ್ತಿವೆ. ಸ್ನೇಹಿತ್ ಅವರು ಪ್ರತಾಪ್ (Drone Prathap ) ಅವರನ್ನು ಡೋಂಗಿ ಎಂದೆಲ್ಲ ಕರೆದಿದ್ದರು. ಈಗ ಡ್ರೋನ್ ಪ್ರತಾಪ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ‘ನಾನು ಬಿಗ್ ಬಾಸ್​ಗೆ ಹೋಗಲ್ಲ’ ಎಂದು ಅವರು ಹೇಳಿದ್ದರು.

ಪ್ರತಾಪ್ ಅವರು ತಾವೇ ಡ್ರೋನ್ ಕಂಡು ಹಿಡಿದಿದ್ದಾಗಿ ಹೇಳಿಕೊಂಡರು. ಈ ಕಾರಣದಿಂದ ಅವರಿಗೆ ಸಾಕಷ್ಟು ಪ್ರಚಾರ ನೀಡಲಾಯಿತು. ಅವರನ್ನು ಯುವ ವಿಜ್ಞಾನಿ ಎಂದೆಲ್ಲ ಕರೆಯಲಾಯಿತು. ಅಸಲಿ ವಿಚಾರ ಗೊತ್ತಾದ ಬಳಿಕ ಜನರು ಅವರನ್ನು ಟ್ರೋಲ್ ಮಾಡೋಕೆ ಶುರು ಮಾಡಿದರು. ಅವರಿಗೆ ಈ ಮೊದಲು ಬಿಗ್ ಬಾಸ್ ಮನೆಗೆ ಹೋಗುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದರು.

ಬಿಗ್ ಬಾಸ್ ಮನೆಗೆ ಹೋದರೆ ಜನಪ್ರಿಯತೆ ಸಿಗುತ್ತದೆ. ಕೆಲವೊಮ್ಮೆ ಇದು ಉಲ್ಟಾ ಆಗಿದ್ದೂ ಇದೆ. ಕಾಂಟ್ರವರ್ಸಿ ಮಾಡಿಕೊಂಡು ಕುಖ್ಯಾತಿ ಪಡೆದವರೂ ಅನೇಕರಿದ್ದಾರೆ. ಕೆಲವರಿಗೆ ಈ ಆಟ ಇಷ್ಟವೇ ಆಗುವುದಿಲ್ಲ. ಪ್ರತಾಪ್​ಗೂ ಬಿಗ್ ಬಾಸ್ ಬಗ್ಗೆ ಆಸಕ್ತಿ ಇರಲಿಲ್ಲ. ಅವರು ಈ ಕುರಿತು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ರಾತ್ರೋರಾತ್ರಿ ಬದಲಾದ ಡ್ರೋನ್ ಪ್ರತಾಪ್

‘ನೀವು ಬಿಗ್​ ಬಾಸ್​ಗೆ ಹೋಗುತ್ತೀರಿ ಎನ್ನುವ ಬಗ್ಗೆ ಸುದ್ದಿ ಆಗುತ್ತಲೇ ಇದೆಯಲ್ಲ’ ಎಂದು ಪ್ರತಾಪ್​ಗೆ ಕೇಳಲಾಯಿತು. ‘ಬಿಗ್ ಬಾಸ್​ಗೆ ಬರುವಂತೆ ಕರೆದಿದ್ದರು. ಆದರೆ, ನನಗೆ ಇಷ್ಟವಿಲ್ಲ. ನನಗೆ ಮಾಡೋಕೆ ಬೇರೆ ಕೆಲಸ ಇದೆ. ತಿಂಗಳಾನುಗಟ್ಟಲೆ ಒಂದು ಕಡೆ ಕೂತಿರೋಕೆ ನನಗೆ ಆಗಲ್ಲ’ ಎಂದು ಅವರು ಹೇಳಿದ್ದರು. ‘ಬಿಗ್ ಬಾಸ್ ಮನೆಗೆ ಹೋಗೋಕೆ ಎಲ್ಲರೂ ಬಯಸುತ್ತಾರೆ. ಆದರೆ, ನೀವೇನು ಹೀಗೆ ಹೇಳುತ್ತಿದ್ದೀರಲ್ಲ’ ಎಂದು ಪ್ರತಾಪ್ ಅವರನ್ನು ಕೇಳಲಾಯಿತು. ‘ಅವರೇನು ಮಾಡ್ತಾರೋ ಅದನ್ನು ಮಾಡ್ಲಿ. ಬಿಗ್ ಬಾಸ್ ಏನು ಎನ್ನುವ ಬಗ್ಗೆ ನನಗೆ ಐಡಿಯಾ ಇಲ್ಲ. ಆಸಕ್ತಿ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣ’ ಎಂದು ಪ್ರತಾಪ್ ಪ್ರಶ್ನೆ ಮಾಡಿದ್ದರು.

View this post on Instagram

A post shared by KUSHKA HAKLA (@kushka.hakla)

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮಿಲಿಟರಿ ಡ್ರೆಸ್ ಧರಿಸಿ ಬಂದ ಪ್ರಥಮ್; ಹೇಗಿತ್ತು ನೋಡಿ ಖದರ್ ಬಿಗ್ ಬಾಸ್ ಮನೆಗೆ ಬಂದ ದಿನವೇ ‘ನಾನು ಒಂದು ವಾರಕ್ಕೆ ಹೋಗ್ತೀನಿ’ ಎಂದು ಪ್ರತಾಪ್ ಹೇಳಿದ್ದರು. ಆದರೆ, ಈ ಬಗ್ಗೆ ಮನೆಯ ಸದಸ್ಯರು ಟೀಕೆ ಮಾಡಿದ ಬಳಿಕ ಅವರು ಮನಸ್ಸು ಬದಲಿಸಿದ್ದಾರೆ. ‘ಕೊನೆಯವರೆಗೂ ಇರುತ್ತೇನೆ, ಇದ್ದಷ್ಟು ದಿನ ಹೋರಾಡುತ್ತೇನೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Fri, 13 October 23

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!