AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada : ಈ 5 ಸವಾಲುಗಳನ್ನು ಎದುರಿಸಿ ಯಶಸ್ವಿ ಆಗುತ್ತಾ ಈ ಬಾರಿಯ ಕನ್ನಡ ಬಿಗ್​ ಬಾಸ್​​?

Bigg Boss Kannada Season 8 : ಕಿರುತೆರೆ ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ಜನಪ್ರಿಯವಾಗಿರುವ ಬಿಗ್ ಬಾಸ್​ಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಆದರೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಅಷ್ಟು ಸುಲಭವಲ್ಲ ಎಂಬುದು ಕೂಡ ನಿಜ.

Bigg Boss Kannada : ಈ 5 ಸವಾಲುಗಳನ್ನು ಎದುರಿಸಿ ಯಶಸ್ವಿ ಆಗುತ್ತಾ ಈ ಬಾರಿಯ ಕನ್ನಡ ಬಿಗ್​ ಬಾಸ್​​?
ಬಿಗ್​​ಬಾಸ್​​ ಕನ್ನಡ 8
ರಾಜೇಶ್ ದುಗ್ಗುಮನೆ
|

Updated on:Mar 03, 2021 | 8:08 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಅದ್ದೂರಿಯಾಗಿ ಆರಂಭವಾಗಿದೆ. ಕೋವಿಡ್​-19 ಭೀತಿ ನಡುವೆಯೂ ಈ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚು ಕಲರ್​ಫುಲ್​ ಆದಂತಹ ಮನೆಯಲ್ಲಿ 17 ಸ್ಪರ್ಧಿಗಳ ನಡುವೆ ಪೈಪೋಟಿ ಆರಂಭ ಆಗಿದೆ. ಬಜೆಟ್​ನ ದೃಷ್ಟಿಯಿಂದ ನೋಡಿದರೂ ಇದು ಬೇರೆಲ್ಲ ಶೋಗಳಿಗಿಂತ ದೊಡ್ಡ ಕಾರ್ಯಕ್ರಮ. ಆದರೆ ಬಿಗ್​ ಬಾಸ್​ನ ಪ್ರತಿ ಎಪಿಸೋಡ್​ನಲ್ಲಿಯೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ಅದಕ್ಕಾಗಿ ಎಲ್ಲಿಲ್ಲದ ಸರ್ಕಸ್​ ಮಾಡಬೇಕಾಗುತ್ತದೆ. ಇನ್ನು, ಈ ರಿಯಾಲಿಟಿ ಶೋಗೆ ಸವಾಲೊಡ್ಡುವ ಇತರೆ ಸಂಗತಿಗಳೂ ಇವೆ.

ಐಪಿಎಲ್​ ಎದುರು ನಡೆಯುತ್ತಾ ಬಿಗ್​ ಬಾಸ್​ ಆಟ? ಐಪಿಎಲ್​ ಹವಾ ಯಾವ ರೀತಿ ಇರುತ್ತದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಈ ಬಾರಿ ಐಪಿಎಲ್​ಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಐಪಿಎಲ್​ ಹರಾಜು ಪ್ರಕ್ರಿಯೆ ಕೂಡ ಮುಗಿದಿದ್ದು ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಏ.11ರಂದು ಅದ್ದೂರಿಯಾಗಿ ಐಪಿಎಲ್​ ಪಂದ್ಯಗಳು ಆರಂಭ ಆಗಲಿವೆ. ಅಂದಾಜು 60 ಪಂದ್ಯಗಳು ನಡೆಯಲಿವೆ. ರಾತ್ರಿ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಸಕ್ತಿ ತೋರಿಸುತ್ತಾರೆ. ಎಲ್ಲ ವಯೋಮಾನದವರೂ ಟಿವಿ ಮುಂದೆ ಕುಳಿತು ಕ್ರಿಕೆಟ್​ ಆಸ್ವಾಧಿಸುತ್ತಾರೆ. ಈ ವೇಳೆಯಲ್ಲಿ ಟಿಆರ್​ಪಿ ಗಿಟ್ಟಿಸಲು ಬಿಗ್​ ಬಾಸ್​ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಇದು ಈ ಬಾರಿ ಬಿಗ್​ ಬಾಸ್​ಗೆ ಇರುವ ಅತಿ ದೊಡ್ಡ ಸವಾಲು.

ಇಂಡಿಯಾ vs ಇಂಗ್ಲೆಂಡ್​ ಜೊತೆ ಬಿಗ್ ಬಾಸ್​ ಹಣಾಹಣಿ ಸದ್ಯ ನಡೆಯುತ್ತಿರುವ ಇಂಡಿಯಾ ವರ್ಸಸ್​ ಇಂಗ್ಲೆಂಡ್​ ಹಣಾಹಣಿಯಿಂದಲೂ ಬಿಗ್​ ಬಾಸ್​ಗೆ ಸವಾಲು ಎದುರಾಗಿದೆ. ಟೆಸ್ಟ್​ ಪಂದ್ಯಗಳ ಬಳಿಕ ಟಿ-20 ಅಬ್ಬರ ಶುರು ಆಗುತ್ತಿದೆ. ಎಲ್ಲ ಮ್ಯಾಚ್​ಗಳು ಸಂಜೆ 7 ಗಂಟೆಗೆ ಆರಂಭವಾಗಿ ರಾತ್ರಿ 10 ಅಥವಾ 10.30ರವರೆಗೆ ನಡೆಯುತ್ತವೆ. ಮಾ.12ರಿಂದ ಮಾ.20ರವರೆಗೂ ಒಟ್ಟು ಐದು T-20 ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್​​ ಪ್ರೇಮಿಗಳಿಗೆ ಹಬ್ಬದ ವಾತಾವರಣ ಏರ್ಪಡುತ್ತದೆ. ನಂತರ 3 ಏಕದಿನ ಪಂದ್ಯಗಳು ಧೂಳೆಬ್ಬಿಸಲಿವೆ. ಮಾ.23, 26 ಮತ್ತು 28ರಂದು ಈ ಪಂದ್ಯಗಳು ಇರಲಿದ್ದು, ಆ ಸಂದರ್ಭದಲ್ಲಿಯೂ ಬಿಗ್​ ಬಾಸ್​ಗೆ ವೀಕ್ಷಕರ ಕೊರತೆ ಕಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಚಾಲೆಂಜ್​ ಎದುರಿಸಲು ಬಿಗ್​ ಬಾಸ್​ ತಂತ್ರ ರೂಪಿಸಿಕೊಳ್ಳಬೇಕಿದೆ.

ಸವಾಲೊಡ್ಡುವ ದೊಡ್ಡ ಸಿನಿಮಾಗಳು! ಈಗಂತೂ ಕಿರುತೆರೆ ವರ್ಸಸ್​ ಹಿರಿತೆರೆ ಎಂಬ ವಾತಾವರಣ ನಿರ್ಮಾಣ ಆಗಿದೆ. ಕಳೆದ ವರ್ಷ ಲಾಕ್​ಡೌನ್​ನಿಂದ ರಿಲೀಸ್​ ಡೇಟ್​ ಮುಂದೂಡಿಕೊಂಡಿದ್ದ ಸಿನಿಮಾಗಳೆಲ್ಲ ಈಗ ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ. ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್​ ಸಿನಿಮಾಗಳು ಮಾರ್ಚ್​, ಏಪ್ರಿಲ್​ ಮತ್ತು ಮೇ ತಿಂಗಳ ಸಮಯದಲ್ಲಿ ಚಿತ್ರಮಂದಿರಕ್ಕೆ ಬರುತ್ತಿವೆ. ರಾಬರ್ಟ್​ (ಮಾ.11) , ಯುವರತ್ನ, (ಏ.1), ಸಲಗ (ಏ.15), ಕೋಟಿಗೊಬ್ಬ 3 (ಏ.29) ಚಿತ್ರಗಳನ್ನು ನೈಟ್​ ಶೋನಲ್ಲಿ ನೋಡಲು ಜನರು ಮುಗಿಬೀಳುವುದು ಗ್ಯಾರಂಟಿ. ವೀಕೆಂಡ್​ನ ಸಂಜೆಗಳಲ್ಲೂ ಜನರು ಥಿಯೇಟರ್​ನತ್ತ ಹೆಜ್ಜೆ ಹಾಕುವವರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಈ ಎಲ್ಲ ಸಿನಿಮಾಗಳ ಹವಾ ಎದುರು ಬಿಗ್​ ಬಾಸ್​ ಹಣಾಹಣಿ ನಡೆಸಬೇಕಿದೆ.

ಸ್ಪರ್ಧಿಗಳ ಆಯ್ಕೆಯಲ್ಲಿ ಎಡವಿದ ಬಿಗ್​ ಬಾಸ್​? ತುಂಬ ಜನಪ್ರಿಯವಾಗಿರುವ ಸ್ಪರ್ಧಿಗಳು ಬಿಗ್​ ಬಾಸ್​ನಲ್ಲಿ ಭಾಗವಹಿಸಿದರೆ ಜನರ ಆಸಕ್ತಿ ಕೂಡ ದೊಡ್ಡ ಮಟ್ಟದಲ್ಲಿ ಇರುತ್ತದೆ. ಆದರೆ ಈ ಬಾರಿ ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಬಿಗ್​ ಬಾಸ್​ ಆಯೋಜಕರು ಎಡವಿದ್ದಾರೇನೂ ಎಂಬ ಅನುಮಾನ ಕಾಡುತ್ತಿದೆ. ಸಿನಿಮಾ, ಕಿರುತೆರೆ, ಕ್ರೀಡೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಖ್ಯಾತಿ ಪಡೆದವರನ್ನು ಆಯ್ಕೆ ಮಾಡಲಾಗಿದೆಯಾದರೂ ಕೂಡ ಅವರಲ್ಲಿ ಕೆಲವರನ್ನು ವೀಕ್ಷಕರು ಇಷ್ಟಪಟ್ಟಿಲ್ಲ. ಈ ಬಾರಿಯ ಸ್ಪರ್ಧಿಗಳ ಆಯ್ಕೆ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಹಲವು ಮೀಮ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇಂಥ ಸ್ಪರ್ಧಿಗಳನ್ನು ಇಟ್ಟುಕೊಂಡು ಪ್ರೇಕ್ಷಕರನ್ನು ಸೆಳೆಯುವುದು ಬಿಗ್​ ಬಾಸ್​ ಮುಂದಿರುವ ಇನ್ನೊಂದು ಪ್ರಮುಖ ಸವಾಲು.

ಸೀರಿಯಲ್​ಗಳ​ ಪೈಪೋಟಿ ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಪ್ರಸಾರ ಆಗುತ್ತದೆ. ಇದೇ ಸಮಯಕ್ಕೆ ಸರಿಯಾಗಿ ಬೇರೆ ಬೇರೆ ಚಾನೆಲ್​ಗಳಲ್ಲಿ ಧಾರಾವಾಹಿಗಳ ಹವಾ ಕೂಡ ಹೆಚ್ಚಿರುತ್ತದೆ. ಜೀ ಕನ್ನಡದಲ್ಲಿ ‘ನಾಗಿಣಿ’ (ರಾ.9.45), ಸ್ಟಾರ್​ ಸುವರ್ಣದಲ್ಲಿ ‘ಮನಸೆಲ್ಲಾ ನೀನೇ’ (ರಾ.9.30) ‘ರಾಧಾ ಕೃಷ್ಣ’ (ರಾ.10), ಉದಯ ಟಿವಿಯ ಹೊಸ ಧಾರಾವಾಹಿ ‘ನಯನತಾರಾ’ ಸೇರಿದಂತೆ ಅನೇಕ ಸೀರಿಯಲ್​ಗಳು ಬಿಗ್​ ಬಾಸ್​ಗೆ ಪೈಪೋಟಿ ನೀಡುತ್ತಿವೆ. ಇದರ ನಡುವೆಯೂ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಬೇಕಿರುವ ಸವಾಲು ಬಿಗ್​ ಬಾಸ್​ನ ಮುಂದಿದೆ.

ಇದನ್ನೂ ಓದಿ: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ-ದಿವ್ಯಾ ಸುರೇಶ್​!

Published On - 7:25 pm, Wed, 3 March 21

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ