AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas Special | ಕ್ರಿಸ್ಮಸ್ ಹಬ್ಬಕ್ಕೆ ತಯಾರಿಸಲೇಬೇಕಾದ ಸಿಹಿ ಕಲ್ಕಲ್ಸ್ ಮಾಡುವ ವಿಧಾನ ಇಲ್ಲಿದೆ

ಕ್ರಿಸ್ಮಸ್​ಗೆ ತಿನ್ನಲೇಬೇಕಾದ ಸಿಹಿ ತಿಂಡಿ ಕಲ್ಕಲ್ಸ್ ತಯಾರಿಸುವ ವಿಧಾನ ಇಲ್ಲಿದೆ. ಈ ತಿನಿಸು ತಯಾರಿಸುವುದು ತುಂಬಾನೇ ಸುಲಭ. ನೀವು ಕೂಡ ಅರಾಮಾಗಿ ತಯಾರಿಸಿ ತಿನ್ನಬಹುದು.

Christmas Special | ಕ್ರಿಸ್ಮಸ್ ಹಬ್ಬಕ್ಕೆ ತಯಾರಿಸಲೇಬೇಕಾದ ಸಿಹಿ ಕಲ್ಕಲ್ಸ್ ಮಾಡುವ ವಿಧಾನ ಇಲ್ಲಿದೆ
ಕಲ್ಕಲ್ಸ್ Pic Courtesy @navinajafa
ಆಯೇಷಾ ಬಾನು
| Edited By: |

Updated on:Dec 24, 2020 | 10:53 PM

Share

ಡಿಸೆಂಬರ್ ಬಂತೂ ಅಂದ್ರೆ ಮೊದಲು ನೆನಪಾಗೋದು ಕ್ರಿಸ್ಮಸ್ ಹಬ್ಬ. ಏಸು ಕ್ರಿಸ್ತ ಹುಟ್ಟಿದ ಈ ದಿನವನ್ನು ಕ್ರಿಶ್ಚಿಯನ್ನರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇದು ಅವರ ದೊಡ್ಡ ಹಾಗೂ ಶ್ರೇಷ್ಟ ಹಬ್ಬ. ಈ ಹಬ್ಬಕ್ಕೆ ಕಲ್ಕಲ್ಸ್ ಬೇಕೇ ಬೇಕು.

ಕಲ್ಕಲ್ಸ್ ಬಗ್ಗೆ ನೀವು ಕೇಳಿರಲೇಬೇಕು. ಹೆಸರು ವಿಚಿತ್ರ ಅನಿಸಬಹುದು. ಆದರೆ ಕ್ರಿಸ್ಮಸ್​ಗೆ ಈ ತಿಂಡಿ ಕಂಪಲ್ಸರಿ. ನಮಗೆ ಕ್ರಿಶ್ಚಿಯನ್ ಫ್ರೆಂಡ್ಸ್ ಇಲ್ಲ. ಈ ತಿಂಡಿ ತಿನ್ನೋಕೆ ಅಗಲ್ಲ ಅಂತಾ ಬೇಜಾರ್ ಮಾಡ್ಕೋಬೇಡಿ. ಯಾಕಂದ್ರೆ ಈ ತಿನಿಸು ತಯಾರಿಸುವುದು ತುಂಬಾನೇ ಸುಲಭ. ನೀವು ಕೂಡ ಅರಾಮಾಗಿ ತಯಾರಿಸಿ ತಿನ್ನಬಹುದು. ಮೈದಾ ಹಿಟ್ಟಿನಿಂದ ಮಾಡುವಂತಹ ಈ ಕಲ್ಕಸ್ ಟೇಸ್ಟಿಯಾಗಿರುತ್ತದೆ. ಈ ರೆಸಿಪಿ ಮಾಡುವುದು ಹೇಗೆ ಅಂಥ ನಾವು ನಿಮ್ಗೆ ತಿಳಿಸ್ತೀವಿ. ರೆಸಿಪಿನಾ ತಿಳ್ಕೊಂಡು ನೀವೂ ಟ್ರೈ ಮಾಡಿ ರುಚಿ ನೋಡಿ.

ಕಲ್ಕಲ್ಸ್ ತಯಾರಿಸುವ ವಿಧಾನ ಮೊದಲು ರವೆಯನ್ನು ಪ್ಯಾನ್​ನಲ್ಲಿ ಹಾಕಿ ಹುರಿಯಬೇಕು. ಒಂದು ನಿಮಿಷದ ನಂತರ ಗ್ಯಾಸ್​ ಆಫ್ ಮಾಡಿ. ಒಂದು ಬೌಲ್‌‌ನಲ್ಲಿ ಒಂದು ಕಪ್ ಮೈದಾವನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಶುದ್ಧತುಪ್ಪವನ್ನು ಹಾಕಿ ಮೈದಾ ಮತ್ತು ತುಪ್ಪವನ್ನು ಕೈಯಲ್ಲಿಯೇ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಅದಕ್ಕೆ ಹುರಿದ ರವೆ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ. ಜೊತೆಗೆ ವೆನಿಲ್ಲಾ ಎಸೆನ್ಸ್ ಆ್ಯಡ್ ಮಾಡಿ. ಚಿಟಿಕೆಯಷ್ಟು ಉಪ್ಪನ್ನು ಸೇರಿಸಿ. ಈಗ ಎಲ್ಲವನ್ನು ಕೈಯಲ್ಲಿಯೆ ಮಿಕ್ಸ್ ಮಾಡಿ. ಒಂದು ಬೌಲ್‌‌ನಲ್ಲಿ ಹಾಲನ್ನು ಸ್ವಲ್ಪಸ್ವಲ್ವವೇ ಹಾಕಿ ಕೈಯಲ್ಲಿಯೇ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದು ಉಂಡೆಯಾಕಾರಕ್ಕೆ ಬಂದಿರುತ್ತದೆ. ಈಗ ಪೋರ್ಕ್ ಸ್ಪೂನ್​ ತೆಗೆದುಕೊಳ್ಳಿ. ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಪೋರ್ಕ್​ನಲ್ಲಿ ಆ ಉಂಡೆಗಳ ಮೇಲೆ ಗೆರೆ ಎಳೆದು ಕಲ್ಕಲ್ಸ್ ಮಾದರಿ ಸಿದ್ಧಪಡಿಸಿಕೊಳ್ಳಿ.

ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಯಾಗಲು ಇಡಿ. ಕಾದ ಎಣ್ಣೆಯಲ್ಲಿ ಎಲ್ಲಾ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಕಲರ್​ಗೆ ತಿರುಗುವವರೆಗೆ ಫ್ರೈ ಮಾಡಿ. ಇದಾದ ಬಳಿಕ ಈ ಕಲ್ಕಲ್ಸ್​ನ ಮೇಲೆ ಶುಗರ್ ಪೌಡರನ್ನು ಸ್ಪೆರ್ಡ್ ಮಾಡಿ. ಈಗ ಕಲ್ಕಲ್ಸ್​ ರೆಸಿಪಿ ಸಂಪೂರ್ಣವಾಗಿ ರೆಡಿ ಆಗಿದೆ. ಮನೆಯಲ್ಲಿ ಆರಾಮಾಗಿ ತಿಂದು ಖುಷಿಪಡಿ.

ಒಂದೇ ತಿಂಗಳಲ್ಲಿ ತೂಕ ಇಳಿಸಿಕೊಳ್ಳಬೇಕೆ? ಈ ಡಯಟ್​ ಫಾಲೋ ಮಾಡಿ

Published On - 3:32 pm, Mon, 21 December 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು