AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರ ಸ್ವರ್ಗದ ಬಾಗಿಲು ತೆರೆಯಲು ಸಮಯ ನಿಗದಿ: ಪ್ರವಾಸಿಗರು ಹೈರಾಣ..

ಚಿಕ್ಕಬಳ್ಳಾಪುರ: ಅದು ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತೇ ಇರುವ ಗಿರಿಧಾಮ. ವೀಕೆಂಡ್​ನಲ್ಲಿ ಅಲ್ಲಿಗೆ ಹೋಗಿ ಕುಣಿದು ಕುಪ್ಪಳಿಸದಿದ್ರೆ ವೀಕೆಂಡ್ ಬಗ್ಗೆ ವಿರಸ ಮೂಡುತ್ತೆ. ಆದರೆ ಕೊರೊನಾದಿಂದ ಗಿರಿಧಾಮ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ನಿಷೇಧ ವಾಪಸ್ ಪಡೆದು ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ತಡ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಭೂಮಿ ಆಕಾಶ ಸೇರಿ ಒಂದನ್ನೊಂದು ತಬ್ಬುವ ಹಾಗೆ ಬೆಳ್ಳಿಮೋಡಗಳ ಮಧ್ಯೆ ಇರುವ ಇದು ಪ್ರಕೃತಿ ಸೌಂದರ್ಯದ ನಾಡು.. ಹಾಗೇ ಪ್ರೇಮಿಗಳ ಬೀಡು. ಅಷ್ಟೇ ಯಾಕೆ ವೃದ್ಧರಿಗೆ ಸಿಕ್ಕಾಪಟ್ಟೆ […]

ಬೆಂಗಳೂರಿಗರ ಸ್ವರ್ಗದ ಬಾಗಿಲು ತೆರೆಯಲು ಸಮಯ ನಿಗದಿ: ಪ್ರವಾಸಿಗರು ಹೈರಾಣ..
ಸಾಧು ಶ್ರೀನಾಥ್​
|

Updated on:Sep 14, 2020 | 12:58 PM

Share

ಚಿಕ್ಕಬಳ್ಳಾಪುರ: ಅದು ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತೇ ಇರುವ ಗಿರಿಧಾಮ. ವೀಕೆಂಡ್​ನಲ್ಲಿ ಅಲ್ಲಿಗೆ ಹೋಗಿ ಕುಣಿದು ಕುಪ್ಪಳಿಸದಿದ್ರೆ ವೀಕೆಂಡ್ ಬಗ್ಗೆ ವಿರಸ ಮೂಡುತ್ತೆ. ಆದರೆ ಕೊರೊನಾದಿಂದ ಗಿರಿಧಾಮ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.

ಇದೀಗ ನಿಷೇಧ ವಾಪಸ್ ಪಡೆದು ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ತಡ ಪ್ರವಾಸಿಗರ ದಂಡೇ ಹರಿದು ಬರ್ತಿದೆ. ಭೂಮಿ ಆಕಾಶ ಸೇರಿ ಒಂದನ್ನೊಂದು ತಬ್ಬುವ ಹಾಗೆ ಬೆಳ್ಳಿಮೋಡಗಳ ಮಧ್ಯೆ ಇರುವ ಇದು ಪ್ರಕೃತಿ ಸೌಂದರ್ಯದ ನಾಡು.. ಹಾಗೇ ಪ್ರೇಮಿಗಳ ಬೀಡು. ಅಷ್ಟೇ ಯಾಕೆ ವೃದ್ಧರಿಗೆ ಸಿಕ್ಕಾಪಟ್ಟೆ ಹೆಲ್ತೀ ಪ್ಲೇಸ್.

ನಂದಿ ಬೆಟ್ಟ ಪ್ರವೇಶಿಸಲು ಪ್ರವಾಸಿಗರ ಜಾಗರಣೆ..! ರಾಜಧಾನಿ ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರೋ ಕಾರಣ, ಬೆಂಗಳೂರಿಗರ ಫೇವರಿಟ್ ಸ್ಪಾಟ್ ನಂದಿ ಹಿಲ್ಸ್. ಆದ್ರೆ ಇಂಥ ಸುಂದರ ಗಿರಿಧಾಮಕ್ಕೂ ಕೊರೊನಾ ಸಂಕಷ್ಟ ತಗುಲಿ ಕಳೆದ ಐದಾರು ತಿಂಗಳಿಂದ ಲಾಕ್​ಡೌನ್ ಆಗಿತ್ತು.

ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಾರ್ವಜನಿಕರ ಪ್ರವೇಶಕ್ಕೆ ಹೇರಿದ್ದ ನಿಷೇಧವನ್ನ ಹಿಂಪಡೆದು ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದ್ರಿಂದ ಮತ್ತೆ ರಾಜಧಾನಿ ಮಂದಿ ಗಿರಿಧಾಮದತ್ತ ಆಗಮಿಸ್ತಿದ್ದಾರೆ. ಆದ್ರೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಗಿರಿಧಾಮ ಪ್ರವೇಶಕ್ಕೆ ಹಲವು ನಿಬಂಧನೆ ವಿಧಿಸಿದೆ.

ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶ.. ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶ ನೀಡಿದೆ. ಇದರ ಪರಿವಿಲ್ಲದೆ ರಾತ್ರಿಯೇ ಗಿರಿಧಾಮಕ್ಕೆ ಬರುವ ಪ್ರವಾಸಿಗರು ಗೇಟ್ ಬಳಿ ಕಾರು-ಬೈಕ್, ವಾಹನಗಳಲ್ಲಿ ಜಾಗರಣೆ ಮಾಡುವಂತಾಗಿದೆ. ಹೀಗೆ ಅನ್​ಲಾಕ್ ಬಳಿ ನಂದಿ ಹಿಲ್ಸ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಒಂದ್ಕಡೆ ಹೀಗೆ ಪ್ರವಾಸಿಗರು ತಮಗೆ ತಿಳಿಯದಂತೆ ನಂದಿಹಿಲ್ಸ್ ಪ್ರವಾಸಕ್ಕೆ ಅಂತಾ ಬಂದು ಜಾಗರಣೆ ಮಾಡುತ್ತಿದ್ರೆ, ಇನ್ನೊಂದ್ಕಡೆ ಗಿರಿಧಾಮದ ಅಧಿಕಾರಿಗಳು ಮಾತ್ರ ತಮ್ಮ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಐದಾರು ತಿಂಗಳ ನಂತರ ಗಿರಿಧಾಮಕ್ಕೆ ಬರುವ ಪ್ರವಾಸಿಗರು, ಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯುವ ಹುಮ್ಮಸ್ಸಿನಲ್ಲಿದ್ದಾರೆ.

ಹೀಗಾಗಿ ಅಪಾಯಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಒಂದಷ್ಟು ನಿರ್ಬಂಧ ವಿಧಿಸಿದೆ. ಹೀಗಾಗಿ ಪ್ರವಾಸಿಗರು ಕೂಡ ನಿಯಮ ಪಾಲಿಸಿ ಪ್ರವಾಸವನ್ನ ಎಂಜಾಯ್ ಮಾಡಬೇಕಾಗಿದೆ.

Published On - 12:56 pm, Mon, 14 September 20

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?