AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10-15 ವರ್ಷದಿಂದ ಬೆಳೆದಿದ್ದ ಶ್ರೀಗಂಧ ಕಳವು, ರೈತರ ಕಣ್ಣೀರು..

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ 5 ಗ್ರಾಮಗಳ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಸುಮಾರು 10-15ವರ್ಷಗಳಿಂದ ಬೆಳೆದಿದ್ದ ಶ್ರೀಗಂಧದ ಮರಗಳನ್ನ ಇನ್ನೇನು ಕಟಾವು ಮಾಡಬೇಕು ಅನ್ನೋ ಚಿಂತನೆಯಲ್ಲಿ ರೈತರು ಇದ್ರು. ಆದ್ರೆ, ಈಗ ರೈತರಿಗೆ ಹೊಸ ಸಂಕಷ್ಟ ಶುರುವಾಗಿದೆ. ಕರ್ನಾಟಕವನ್ನ ಶ್ರೀಗಂಧದ ನಾಡು ಅಂತಾ ಕರೀತಾರೆ. ಕರ್ನಾಟಕದಲ್ಲಿ ಬೆಳೆಯೋ ಶ್ರೀಗಂಧದಷ್ಟು ಉತ್ಕೃಷ್ಟ ದರ್ಜೆ ಶ್ರೀಗಂಧ ಬೇರೆಲ್ಲೂ ಬೆಳೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೈಸರ್ಗಿಕವಾಗಿಯೇ ಶ್ರೀಗಂಧ ಬೆಳೆಯುತ್ತೆ. ಜೊತೆಗೆ ಗಂಧದ ಮರಗಳು ಕಣ್ಮರೆಯಾಗ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರೈತರ […]

10-15 ವರ್ಷದಿಂದ ಬೆಳೆದಿದ್ದ ಶ್ರೀಗಂಧ ಕಳವು, ರೈತರ ಕಣ್ಣೀರು..
ಆಯೇಷಾ ಬಾನು
| Edited By: |

Updated on: Sep 14, 2020 | 12:41 PM

Share

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ 5 ಗ್ರಾಮಗಳ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಸುಮಾರು 10-15ವರ್ಷಗಳಿಂದ ಬೆಳೆದಿದ್ದ ಶ್ರೀಗಂಧದ ಮರಗಳನ್ನ ಇನ್ನೇನು ಕಟಾವು ಮಾಡಬೇಕು ಅನ್ನೋ ಚಿಂತನೆಯಲ್ಲಿ ರೈತರು ಇದ್ರು. ಆದ್ರೆ, ಈಗ ರೈತರಿಗೆ ಹೊಸ ಸಂಕಷ್ಟ ಶುರುವಾಗಿದೆ.

ಕರ್ನಾಟಕವನ್ನ ಶ್ರೀಗಂಧದ ನಾಡು ಅಂತಾ ಕರೀತಾರೆ. ಕರ್ನಾಟಕದಲ್ಲಿ ಬೆಳೆಯೋ ಶ್ರೀಗಂಧದಷ್ಟು ಉತ್ಕೃಷ್ಟ ದರ್ಜೆ ಶ್ರೀಗಂಧ ಬೇರೆಲ್ಲೂ ಬೆಳೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೈಸರ್ಗಿಕವಾಗಿಯೇ ಶ್ರೀಗಂಧ ಬೆಳೆಯುತ್ತೆ.

ಜೊತೆಗೆ ಗಂಧದ ಮರಗಳು ಕಣ್ಮರೆಯಾಗ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರೈತರ ಹೊಲಗಳಲ್ಲಿ ಶ್ರೀಗಂಧ ಬೆಳೆಯಲು ಉತ್ತೇಜನ ನೀಡಿತ್ತು. ಹೀಗೆ ಬೆಳೆದ ಶ್ರೀಗಂಧ ಕಳ್ಳರ ಪಾಲಾದ್ರೆ ಏನ್ಮಾಡೋದು ಹೇಳಿ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಇಲ್ಲಿನ ಜಮೀನುಗಳಲ್ಲಿ ಶ್ರೀಗಂಧದ ಮರಗಳು ನೈಸರ್ಗಿಕವಾಗಿ ಬೆಳೆದಿದ್ವು.

ಕೆಲವು ರೈತರು ಶ್ರೀಗಂಧದ ಪ್ಲಾಂಟೇಷನ್ ಕೂಡ ಮಾಡಿದ್ರು. ಆದ್ರೆ, ರೈತರಿಗೆ ಶ್ರೀಗಂಧಕ್ಕೆ ಮಾರುಕಟ್ಟೆ ಎಲ್ಲಿದೆ ಅಂತಾ ಗೊತ್ತಿಲ್ಲ. ಹೀಗಾಗಿ ಕಟಾವಿಗೆ ಬಂದಿರೋ ಮರಗಳು ಕಳ್ಳರ ಪಾಲಾಗ್ತಿವೆ. ಈ ಕುರಿತು ಪೊಲೀಸರಿಗೆ, ಅರಣ್ಯ ಇಲಾಖೆಗೆ ದೂರು ಕೊಟ್ಟರೂ ಪ್ರಯೋಜನ ಆಗ್ತಿಲ್ಲ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.

ರಾತ್ರಿ ವೇಳೆ ಕಳ್ಳರು ಯಂತ್ರಗಳ ಸಹಾಯದಿಂದ ಶ್ರೀಗಂಧದ ಮರಗಳನ್ನ ಕಡಿದುಕೊಂಡು ಹೋಗ್ತಿದ್ದಾರೆ. ಇಲ್ಲಿನ ಕೆಲವು ರೈತರು ಜಮೀನಿನಲ್ಲಿಯೇ ಕುರಿ, ಮೇಕೆಗಳನ್ನ ಸಾಕ್ತಿದ್ದಾರೆ. ಆಯುಧಗಳ ಸಮೇತ ಆಗಮಿಸೋ ಕಳ್ಳರು ಈಗ ಗಂಧದ ಮರಗಳನ್ನ ಕದೀತಿದ್ದಾರೆ. ಮುಂದೊಂದು ದಿನ ಅದೇ ಆಯುಧಗಳನ್ನ ತೋರಿಸಿ, ರೈತರ ಪ್ರಾಣಿಗಳನ್ನ ಕದ್ದೊಯ್ಯೋ ಸಾಧ್ಯತೆ ಇದೆ ಅಂತಿದ್ದಾರೆ ರೈತ ಮುಖಂಡರು.

ಇನ್ನಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರ ಆಟಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲದೇ ಹೋದ್ರೆ ಈಗಾಗಲೇ ಸಂಕಷ್ಟದಲ್ಲಿರೋ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

ಜೊತೆಗೆ ಅರಣ್ಯ ಇಲಾಖೆ ರೈತರಿಗೆ ಗಂಧವನ್ನ ಎಲ್ಲಿ ಮಾರಾಟ ಮಾಡಬೇಕು ಅನ್ನೋ ಜಾಗೃತಿ ಮೂಡಿಸಬೇಕಿದೆ. ಮಾರುಕಟ್ಟೆಯ ಕುರಿತು ರೈತರಿಗೆ ತಿಳುವಳಿಕೆ ಮೂಡಿಸಿದ್ರೆ ಕಳ್ಳರ ಈ ಕೃತ್ಯಗಳಿಗೆ ತಡೆಯೊಡ್ಡಬಹುದು. ಹೀಗಾಗಿ ಇನ್ನಾದ್ರೂ ಪೊಲೀಸರು, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಅಂತಾ ಕಾದು ನೋಡ್ಬೇಕಿದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ