AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್​ಬುಕ್​ನಿಂದ ಹೊಸ ಅಸ್ತ್ರ

ಕೊರೊನಾ ಲಸಿಕೆಯ ಬಗ್ಗೆ ಜಾಲತಾಣದಲ್ಲಿ ಹರಿದಾಡುವ ತಪ್ಪು ಮಾಹಿತಿಗಳು ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಫೇಸ್​ಬುಕ್ ಅಭಿಪ್ರಾಯಪಟ್ಟಿದೆ.

ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್​ಬುಕ್​ನಿಂದ ಹೊಸ ಅಸ್ತ್ರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 07, 2022 | 5:42 PM

Share

ಕೊರೊನಾ ಲಸಿಕೆಯ ಬಗೆಗಿನ ಸುಳ್ಳು ಸುದ್ದಿ ತಡೆಗಟ್ಟಲು ಫೇಸ್​ಬುಕ್ ಸಂಸ್ಥೆ ಹೊಸ ಅಸ್ತ್ರ ಪ್ರಯೋಗಿಸಿದೆ. ಕೊವಿಡ್ ಲಸಿಕೆಯ ತಪ್ಪು ಮಾಹಿತಿಗಳನ್ನು ಫೇಸ್​ಬುಕ್​ನಿಂದ ತೆಗೆದುಹಾಕುವುದಾಗಿ ಹೇಳಿದೆ. ಕಳೆದ ಅಕ್ಟೋಬರ್​ನಲ್ಲಿ ಆಲ್ಫಾಬೆಟ್ ಇಂಕ್ (ಗೂಗಲ್) ಸಂಸ್ಥೆ ಯೂಟ್ಯೂಬ್ ಕುರಿತಾಗಿ ಇದೇ ನಿರ್ಧಾರವನ್ನು ತಾಳಿತ್ತು.

ಸಾರ್ವಜನಿಕ ವೇದಿಕೆಯಲ್ಲಿ ಹಲವು ಆರೋಗ್ಯ ತಜ್ಞರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಫೇಸ್​ಬುಕ್​ ನೀತಿಗಳನ್ನು ಮೀರುವ ಅಂತಹ ವಿಚಾರಗಳನ್ನು ತೆಗೆದುಹಾಕುವುದಾಗಿ ಫೇಸ್​ಬುಕ್​ ಹೇಳಿದೆ. ಕೊರೊನಾ ಲಸಿಕೆಯ ಬಗ್ಗೆ ಹರಿದಾಡುವ ತಪ್ಪು ಮಾಹಿತಿಗಳು ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಫೇಸ್​ಬುಕ್ ಅಭಿಪ್ರಾಯಪಟ್ಟಿದೆ.

ಫೈಜರ್ ಮತ್ತು ಮಾಡೆರ್ನಾ ಲಸಿಕೆ ತಯಾರಿಕಾ ಸಂಸ್ಥೆಗಳು ಅಮೆರಿಕ ಬಳಿ, ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿವೆ. ಫೈಜರ್ ಲಸಿಕೆಯ ಬಳಕೆಗೆ ಬುಧವಾರ ಅನುಮತಿ ಸೂಚಿಸಿರುವ ಬ್ರಿಟನ್, ಲಸಿಕೆ ಹಂಚಿಕೆಯಲ್ಲಿ ಮುಂಚೂಣಿಯಲ್ಲಿರುವ ಆಸಕ್ತಿ ತೋರಿದೆ.

ಈ ಸಂದರ್ಭದಲ್ಲಿ ವಿವಿಧ ಸಿದ್ಧಾಂತದ ಹಿನ್ನೆಲೆಯ ಲಸಿಕೆ ವಿರೋಧಿ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ವೈರಲ್ ಆಗಿದ್ದನ್ನು ಸಂಶೋಧಕರು ಗುರುತಿಸಿದ್ದಾರೆ. ಫಸ್ಟ್ ಡ್ರಾಫ್ಟ್ ಅಧ್ಯಯನದ ಪ್ರಕಾರ, ಫೇಸ್​ಬುಕ್ ಮತ್ತು ಇನ್ಸ್ಟಾಗ್ರಾಮ್​ನಲ್ಲಿ ನಡೆದ ಶೇ. 84ರಷ್ಟು ಸಂವಹನವು ಕೊವಿಡ್ ಲಸಿಕೆ ಕುರಿತದ್ದಾಗಿದೆ.

ಲಸಿಕೆ ಸುರಕ್ಷತೆ, ಅದರ ಪರಿಣಾಮಗಳು, ಲಸಿಕೆಗೆ ಬಳಸಿರುವ ಅಂಶಗಳು, ಲಸಿಕೆಯ ಅಡ್ಡಪರಿಣಾಮಗಳು ಇತ್ಯಾದಿ ಸುಳ್ಳು ಸುದ್ದಿಗಳನ್ನು ಹೊರಹಾಕುವುದಾಗಿ ಫೇಸ್​ಬುಕ್ ತಿಳಿಸಿದೆ. ಹಾಗೆಂದು ರಾತ್ರೋರಾತ್ರಿ ಈ ಕೆಲಸ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂದಿರುವ ಫೇಸ್​ಬುಕ್, ಯಾವತ್ತಿನಿಂದ ನಿಯಮಗಳು ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿಸಿಲ್ಲ.

ಕೊರೊನಾ ಲಸಿಕೆಯ ಬಗ್ಗೆ ಅಧೈರ್ಯ ಮೂಡಿಸುವ ಜಾಹೀರಾತುಗಳನ್ನೂ ನಿಷೇಧಿಸುವುದಾಗಿ ಫೇಸ್​ಬುಕ್ ಕಳೆದ ಅಕ್ಟೋಬರ್​ನಲ್ಲಿ ಹೇಳಿತ್ತು. ಅದರಂತೆ ಲಸಿಕೆ ವಿರೋಧಿ ಫೇಸ್​ಬುಕ್ ಪೇಜನ್ನು ಮತ್ತು ಕೆಲವು ಖಾಸಗಿ ಗುಂಪುಗಳನ್ನು ಫೇಸ್​ಬುಕ್​ನಿಂದ ತೆಗೆದುಹಾಕಿತ್ತು.

Published On - 6:43 pm, Fri, 4 December 20

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!