AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಷಾರು! ಮೈಸೂರಿನಲ್ಲಿ ಹಾವುಗಳು ಹಾರುತಿವೆ..

ಮೈಸೂರು: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣಿಸಿಕೊಳ್ಳುವ ಹಾರುವ ಹಾವು ಮೈಸೂರಿನಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ‌ ಕುತೂಹಲ ಮೂಡಿಸಿದೆ. ಮೈಸೂರಿನ ರಾಮಾನುಜ ರಸ್ತೆಯ ವೆಂಕಟರಮಣ ಎಂಬುವರ ಮನೆಯ ಪಕ್ಕದಲ್ಲಿದ್ದ ಮರದ ಮೇಲಿಂದ ಹಾವು ಮನೆಯ ಮೇಲ್ಛಾವಣಿಗೆ ಬಿದ್ದಿದೆ. ನಂತರ ಮನೆ ಬಾಗಿಲಿನ ಗ್ರಿಲ್​ನಲ್ಲಿ ಕಳೆದ ರಾತ್ರಿ ಕಾಣಿಸಿಕೊಂಡಿದೆ. ಹಾವನ್ನು ನೋಡಿ ಗಾಬರಿಗೊಂಡ ಮನೆಯ ಮಾಲೀಕರು ಉರಗ ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಮತ್ತೆ ಮಾಲೀಕ ನೋಡುವಷ್ಟರಲ್ಲಿ ಹಾವು ನಾಪತ್ತೆಯಾಗಿದೆ. ಮನೆಯಲ್ಲಿ ಕಾಣಿಸಿಕೊಂಡಿದ್ದ ವೇಳೆ ಮನೆಯವರು ತಮ್ಮ ಮೊಬೈಲ್​ನಲ್ಲಿ ಫೋಟೋ ಸೆರೆ ಹಿಡಿದಿದ್ದು, […]

ಹುಷಾರು! ಮೈಸೂರಿನಲ್ಲಿ ಹಾವುಗಳು ಹಾರುತಿವೆ..
ಸಾಧು ಶ್ರೀನಾಥ್​
|

Updated on:Jun 05, 2020 | 5:02 PM

Share

ಮೈಸೂರು: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣಿಸಿಕೊಳ್ಳುವ ಹಾರುವ ಹಾವು ಮೈಸೂರಿನಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ‌ ಕುತೂಹಲ ಮೂಡಿಸಿದೆ. ಮೈಸೂರಿನ ರಾಮಾನುಜ ರಸ್ತೆಯ ವೆಂಕಟರಮಣ ಎಂಬುವರ ಮನೆಯ ಪಕ್ಕದಲ್ಲಿದ್ದ ಮರದ ಮೇಲಿಂದ ಹಾವು ಮನೆಯ ಮೇಲ್ಛಾವಣಿಗೆ ಬಿದ್ದಿದೆ. ನಂತರ ಮನೆ ಬಾಗಿಲಿನ ಗ್ರಿಲ್​ನಲ್ಲಿ ಕಳೆದ ರಾತ್ರಿ ಕಾಣಿಸಿಕೊಂಡಿದೆ.

ಹಾವನ್ನು ನೋಡಿ ಗಾಬರಿಗೊಂಡ ಮನೆಯ ಮಾಲೀಕರು ಉರಗ ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಮತ್ತೆ ಮಾಲೀಕ ನೋಡುವಷ್ಟರಲ್ಲಿ ಹಾವು ನಾಪತ್ತೆಯಾಗಿದೆ. ಮನೆಯಲ್ಲಿ ಕಾಣಿಸಿಕೊಂಡಿದ್ದ ವೇಳೆ ಮನೆಯವರು ತಮ್ಮ ಮೊಬೈಲ್​ನಲ್ಲಿ ಫೋಟೋ ಸೆರೆ ಹಿಡಿದಿದ್ದು, ಅದನ್ನು ಉರಗ ತಜ್ಞ ಸ್ನೇಕ್ ಶಾಮ್ ಅವರಿಗೆ ತೋರಿಸಿದಾಗ ಇದು ಹಾರುವ ಹಾವು ಎಂದು ತಿಳಿದು ಬಂದಿದೆ.

ಹಾರುವ ಹಾವಿನ ವಿಶೇಷ ಭಾರತದಲ್ಲಿರುವ 270ಕ್ಕೂ ಹೆಚ್ಚು ವಿಧದ ಹಾವುಗಳಲ್ಲಿ ಈ ಹಾರುವ ಹಾವು ಕೂಡ ಒಂದಾಗಿದೆ. ಈ ಹಾವು ಸಾಮಾನ್ಯವಾಗಿ ಎತ್ತರದ ಮರದಲ್ಲಿ ವಾಸಮಾಡುತ್ತದೆ. ಈ ಹಾವುಗಳು ನೆಲದಲ್ಲಿ ಸಂಚಾರ ಮಾಡುವುದಕ್ಕಿಂತ ಹೆಚ್ಚಾಗಿ ಮರದಿಂದ ಮರಕ್ಕೆ ಹಾರಿ ಆಹಾರ ಹುಡುಕಿಕೊಳ್ಳುತ್ತವೆ. ಹೆಚ್ಚಾಗಿ ಹಸಿರು ಹಾಗೂ ಎತ್ತರದ ಮರಗಳಿರುವ ಮಲೆನಾಡು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ.

ಅದರಲ್ಲಿ ಸಣ್ಣ ಕೀಟಗಳು, ಪಕ್ಷಿ ಮೊಟ್ಟೆ, ಹಲ್ಲಿಗಳು, ಓತಿಕ್ಯಾತಗಳನ್ನು ತಿಂದು ಜೀವಿಸುತ್ತವೆ. ನೋಡಲು ಸುಂದರವಾಗಿರುವ ಈ ಹಾವು, ಕೆಂಪು, ಕಪ್ಪು, ಕಂದು ಬಣ್ಣದಲ್ಲಿರುತ್ತವೆ. ಈ ಹಾವುಗಳಿಗೆ ರೆಕ್ಕೆ ಇಲ್ಲದಿದ್ದರು ಎತ್ತರ ಮರದಿಂದ ಸಣ್ಣ ಮರದ ಕಡೆ ಗಾಳಿಯಲ್ಲಿ ತೇಲುತ್ತವೆ. ಭಾರತದಲ್ಲಿ ಮರದ ಹಾವು ಸಾಕಷ್ಟಿದ್ದರೂ, ಹಾರುವ ಹಾವು ಇದೊಂದೆ ಎಂಬುದು ವಿಶೇಷ.

ಮೈಸೂರಿಗೆ ಬಂದಿದ್ದು ಹೇಗೆ? ಮಲೆನಾಡು ಪ್ರದೇಶದ ದಟ್ಟ ಕಾಡುಗಳಲ್ಲಿ ಕಾಣಿಸುವ ಈ ಹಾವು ಮೈಸೂರಿನಲ್ಲಿ ಹೇಗೆ ಕಾಣಿಸಿಕೊಂಡಿದೆ ಎಂಬುದು ಸಹಜವಾಗಿಯೇ ಮೂಡವ ಪ್ರಶ್ನೆ. ಈ ಹಾವು ಮರದಿಂದ ಹಾರುವ ಹಾವುಗಳಾಗಿದ್ದು ಮಲೆನಾಡು ಪ್ರದೇಶದ ಕಾಡುಗಳಲ್ಲಿ ಹಾದು ಬರುವ ಲಾರಿಯಂತ ವಾಹನಗಳ ಮೇಲೆ ಬಿದ್ದು ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೈಸೂರಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ನಗರದ ಕೈಗಾರಿಕ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಅದಾದ ನಂತರ ಅಗ್ರಹಾರದಲ್ಲಿ ಕಾಣಿಸಿದೆ. ಇದು ವಿಷಕಾರಿ ಹಾವಲ್ಲ, ಮನುಷ್ಯನಿಗೆ ಕಚ್ಚಿದರೆ ಅಪಾಯವಿಲ್ಲ. ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಈ ಹಾವುಗಳು ಕಂಡು ಬರುತ್ತವೆ.

Published On - 4:52 pm, Fri, 5 June 20

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್