AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಗೆ ಬಂದು ಉಚಿತವಾಗಿ 2 ಕುದುರೆ ತೆಗೆದುಕೊಂಡು ಹೋದ ದರ್ಶನ್! ಕೊಟ್ಟವರು ಯಾರು?

ದಾವಣಗೆರೆ: ಮೊದಲಿನಿಂದಲೂ ಕುದುರೆಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್​ಗೆ, ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉಚಿತವಾಗಿ ನೀಡಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಸಾಕಿದ್ದಾರೆ. ವಿಚಾರ ತಿಳಿದ ನಟ ದರ್ಶನ್ ಇಂದು ದಾವಣಗೆರೆಗೆ ಭೇಟಿ ನೀಡಿ, ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಉಡುಗೂರೆಯಾಗಿ ಪಡೆದುಕೊಂಡರು. ಲಾಕ್ ಡೌನ್ […]

ದಾವಣಗೆರೆಗೆ ಬಂದು ಉಚಿತವಾಗಿ 2 ಕುದುರೆ ತೆಗೆದುಕೊಂಡು ಹೋದ ದರ್ಶನ್! ಕೊಟ್ಟವರು ಯಾರು?
ಸಾಧು ಶ್ರೀನಾಥ್​
|

Updated on:Aug 31, 2020 | 2:40 PM

Share

ದಾವಣಗೆರೆ: ಮೊದಲಿನಿಂದಲೂ ಕುದುರೆಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್​ಗೆ, ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉಚಿತವಾಗಿ ನೀಡಿದ್ದಾರೆ.

ಮಾಜಿ ಸಚಿವ ಮಲ್ಲಿಕಾರ್ಜುನ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಸಾಕಿದ್ದಾರೆ. ವಿಚಾರ ತಿಳಿದ ನಟ ದರ್ಶನ್ ಇಂದು ದಾವಣಗೆರೆಗೆ ಭೇಟಿ ನೀಡಿ, ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಉಡುಗೂರೆಯಾಗಿ ಪಡೆದುಕೊಂಡರು.

ಲಾಕ್ ಡೌನ್ ಆದ ಬಳಿಕ ಕೆಲಸ ಇಲ್ಲವಾಗಿದೆ. ಅದಕ್ಕೇ ಕುರಿ, ಕೋಳಿ, ಕುದುರೆ ಸಾಕ್ತಾ ಇದ್ದೇನೆ. ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ತಳಿಯ ಕುದುರೆ ಸಾಕಿದ್ದಾರೆ ಎಂಬ ಮಾಹಿತಿ ಇತ್ತು. ಇದೇ ವಿಚಾರಕ್ಕೆ ಪೋನ್ ಮಾಡಿದ್ದೆ. ಬನ್ನಿ ತಗೊಂಡು ಹೋಗಿ ಎಂದು‌ ಮಲ್ಲಿಕಾರ್ಜುನ ಹೇಳಿದ್ದರು. ಹೀಗಾಗಿ ಇಂದು ಕುದುರೆಗಳನ್ನ ತೆಗೆದುಕೊಂಡು ಹೋಗುತ್ತಿರುವೆ ಎಂದು ದರ್ಶನ್ ಹೇಳಿದರು.

ಕುದುರೆಗಳ ಬೆಲೆಯ ಬಗ್ಗೆ ದರ್ಶನ್‌ ಪ್ರತಿಕ್ರಿಯಿಸಿದ್ದು ಹೀಗೆ.. ಇನ್ನು ಕುದುರೆಗಳ ಬೆಲೆ ಕೇಳಿದ ಪತ್ರಕರ್ತರಿಗೆ, ಎಸ್ ಎಸ್ ಮಲ್ಲಿಕಾರ್ಜುನ ಅಂತವರಿಗೆ ನಾವು ಹಣ ಕೊಡಕ್ಕೆ ಆಗುತ್ತಾ ಎಂದು ನಟ ದರ್ಶನ್​ ತಮಾಷೆಯ ಉತ್ತರ ನೀಡಿದರು.

ಜಸ್ಟ್ ಸ್ಮೈಲ್ ಮಾಡಿ ನಿರ್ಗಮಿಸಿದರು! ಇದೇ ಸಂದರ್ಭದಲ್ಲಿ, ಪದೇ ಪದೇ ಕಾಂಗ್ರೆಸ್ ಯುವ ನಾಯಕರನ್ನು ಭೇಟಿ ಮಾಡುತ್ತಿದ್ದೀರಿ! ಹೀಗಾಗಿ ನೀವು ಕಾಂಗ್ರೆಸ್ ಸೇರುತ್ತಿರಾ? ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ, ದರ್ಶನ್ ಜಸ್ಟ್ ಒಂದು ಸ್ಮೈಲ್ ನೀಡಿ ಅಲ್ಲಿಂದ ನಿರ್ಗಮಿಸಿದ್ದಾರೆ.

Published On - 2:31 pm, Mon, 31 August 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ