AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ!

ಬೆಂಗಳೂರು: ಕನ್ನಡದಲ್ಲಿ ಒಂದು ಗಾದೆ ಇದೆ. ಹಣ ಅಂದ್ರೆ ಹೆಣನೂ ಬಾಯಿಬಿಡುತ್ತೆ ಅಂತಾ. ಆದರೆ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ.  ಮೃತರ ಸಂಬಂಧಿಕರಿಗೆ ರೋಗಿಗಳ ಹೆಣ ನೀಡಲು ಆಸ್ಪತ್ರೆ ಸಿಬ್ಬಂದಿ ಭರ್ಜರಿ ವಸೂಲಿಗೆ ಮುಂದಾಗಿದ್ದಾರೆ. ಕೊರೊನಾ ನಡುವೆ ಸುಲಿಗೆಗೆ ಮುಂದಾಗಿರುವ ಆಸ್ಪತ್ರೆ ಸಿಬ್ಬಂದಿ ನಗರದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ. ಹಣ ಕೊಟ್ಟರಷ್ಟೇ ವಾರ್ಡ್ ಬಾಯ್​ಗಳು ಕೆಲಸ ಮಾಡ್ತಾರಂತೆ. ಜೊತೆಗೆ, ಶವವನ್ನ ಌಂಬುಲೆನ್ಸ್​ಗೆ ಶಿಫ್ಟ್ ಮಾಡಲು ಸಹ ಲಂಚಕ್ಕೆ […]

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ!
KUSHAL V
| Updated By: ಸಾಧು ಶ್ರೀನಾಥ್​|

Updated on: Aug 08, 2020 | 11:54 AM

Share

ಬೆಂಗಳೂರು: ಕನ್ನಡದಲ್ಲಿ ಒಂದು ಗಾದೆ ಇದೆ. ಹಣ ಅಂದ್ರೆ ಹೆಣನೂ ಬಾಯಿಬಿಡುತ್ತೆ ಅಂತಾ. ಆದರೆ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೆಣ ಕಂಡ್ರೆ ಹಣಕ್ಕಾಗಿ ಬಾಯ್ಬಿಡ್ತಿದ್ದಾರೆ ಆಸ್ಪತ್ರೆ ಸಿಬ್ಬಂದಿ.  ಮೃತರ ಸಂಬಂಧಿಕರಿಗೆ ರೋಗಿಗಳ ಹೆಣ ನೀಡಲು ಆಸ್ಪತ್ರೆ ಸಿಬ್ಬಂದಿ ಭರ್ಜರಿ ವಸೂಲಿಗೆ ಮುಂದಾಗಿದ್ದಾರೆ. ಕೊರೊನಾ ನಡುವೆ ಸುಲಿಗೆಗೆ ಮುಂದಾಗಿರುವ ಆಸ್ಪತ್ರೆ ಸಿಬ್ಬಂದಿ ನಗರದ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ.

ಹಣ ಕೊಟ್ಟರಷ್ಟೇ ವಾರ್ಡ್ ಬಾಯ್​ಗಳು ಕೆಲಸ ಮಾಡ್ತಾರಂತೆ. ಜೊತೆಗೆ, ಶವವನ್ನ ಌಂಬುಲೆನ್ಸ್​ಗೆ ಶಿಫ್ಟ್ ಮಾಡಲು ಸಹ ಲಂಚಕ್ಕೆ ಡಿಮ್ಯಾಂಡ್​ ಇಡುತ್ತಾರಂತೆ. ನಾನ್ ಕೊವಿಡ್ ಮೃತದೇಹವನ್ನ ಸಾಗಿಸಲೂ ಸಹ ಮಾಮೂಲಿ ಪಡೆಯುತ್ತಿದ್ದಾರಂತೆ. ಅಂದ ಹಾಗೆ, ಕೆ.ಸಿ.ಜನರಲ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಇಂಥ ಲಂಚಾವತಾರ ಜೋರಾಗಿ ನಡೆಯುತ್ತಿದೆ.

ಒಂದು ವೇಳೆ ದುಡ್ಡು ಕೊಡಲ್ಲಿಲ್ಲಾ ಅಂದ್ರೆ ಅಂಬ್ಯೂಲೆನ್ಸ್​ಗೆ ಬಾಡಿ ಶಿಫ್ಟ್ ಆಗಲ್ಲ. ಸ್ಟ್ರೆಕ್ಚರ್ ಮುಟ್ಟಿದ್ರೆ ಇವ್ರಿಗೆ ಕಾಸು ಕೊಡಲೇಬೇಕು. ಅದು ಏನಿಲ್ಲಾ ಅಂದ್ರು ಮಿನಿಮಮ್​ ಸಾವಿರ ಅಥವಾ ಎರಡು ಸಾವಿರ ರೂಪಾಯಿ. ಐನೂರು ಸಾವಿರ ಕೊಟ್ರೆ ಕಿಸೆಗೆ ಹಾಕೊಂಡು ಬೈಕೊಂಡು ಹೋಗ್ತಾರಂತೆ ಎಂದು ಮೃತನ ರೋಗಿಗಳ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.