AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget 2021: ದೇಶದಲ್ಲೇ ಅತಿ ದೊಡ್ಡ ಗಾತ್ರದ ಬಜೆಟ್ ನೀಡಿರುವ ರಾಜ್ಯ ಯಾವುದು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಇಂದು (ಮಾರ್ಚ್ 8) ಕರ್ನಾಟಕ ರಾಜ್ಯ ಬಜೆಟ್ ಮಂಡಿಸಲಿದ್ದಾರೆ ಯಡಿಯೂರಪ್ಪ. ಬಜೆಟ್ ಗಾತ್ರದ ದೃಷ್ಟಿಯಿಂದ 2020- 21ರಲ್ಲಿ ದೊಡ್ಡ ಪ್ರಮಾಣದಲ್ಲಿ ನೀಡಿದ ರಾಜ್ಯ ಯಾವುದು ಹಾಗೂ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

Karnataka Budget 2021: ದೇಶದಲ್ಲೇ ಅತಿ ದೊಡ್ಡ ಗಾತ್ರದ ಬಜೆಟ್ ನೀಡಿರುವ ರಾಜ್ಯ ಯಾವುದು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Mar 08, 2021 | 11:18 AM

ಬೆಂಗಳೂರು: ಇಂದು (ಮಾರ್ಚ್ 8, 2021) ಕರ್ನಾಟಕ ಬಜೆಟ್ 2021- 22 ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡನೆ ಮಾಡಲಿದ್ದಾರೆ. ಬಜೆಟ್ ಗಾತ್ರದ ದೃಷ್ಟಿಯಿಂದ ದೇಶದಲ್ಲೇ ಯಾವ ರಾಜ್ಯ ಯಾವ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ. 2020- 21ನೇ ಸಾಲಿನಲ್ಲಿ ಟಾಪ್ 5 ಸ್ಥಾನದಲ್ಲಿರುವ ರಾಜ್ಯಗಳು ಹಾಗೂ ಅದರ ಬಜೆಟ್ ಗಾತ್ರ ಇಲ್ಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ದೇಶದ ಅತಿ ದೊಡ್ಡ ರಾಜ್ಯ (ಭೌಗೋಳಿಕವಾಗಿ) ಉತ್ತರಪ್ರದೇಶ. ಅಲ್ಲಿನ ಬಜೆಟ್ ಗಾತ್ರ 5,12,860 ಕೋಟಿ ರೂಪಾಯಿ.

ಆ ನಂತರದ ಸ್ಥಾನದಲ್ಲಿ ಇರುವುದು ಮಹಾರಾಷ್ಟ್ರ. ಅಲ್ಲಿನ ಬಜೆಟ್ ಗಾತ್ರ 4,04,794 ಕೋಟಿ ರೂಪಾಯಿ. ಆ ನಂತರದಲ್ಲಿ ಇರುವುದು ತಮಿಳುನಾಡು. ಅಲ್ಲಿನ ಬಜೆಟ್ ಗಾತ್ರ 3,00,390 ಕೋಟಿ ರೂಪಾಯಿ. ಇನ್ನು ಪಶ್ಚಿಮ ಬಂಗಾಲದಲ್ಲಿ ಮಂಡಿಸಿರುವ ಆಯವ್ಯಯ 2,55,677 ಕೋಟಿ ರೂಪಾಯಿ. ಅದಾದ ಮೇಲೆ ನಿಲ್ಲುವುದು ಕರ್ನಾಟಕ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕದ ಬಜೆಟ್ ಗಾತ್ರ 2,37,893 ಕೋಟಿ ರೂಪಾಯಿ ಇತ್ತು. ಬಜೆಟ್ ಗಾತ್ರದಲ್ಲಿ 2 ಲಕ್ಷ ಕೋಟಿ ದಾಟುವ ರಾಜ್ಯ ಅಂದರೆ, ರಾಜಸ್ಥಾನ 2,25,23 ಕೋಟಿ ರೂಪಾಯಿ ಇದ್ದರೆ, ಆಂಧ್ರಪ್ರದೇಶ, ಗುಜರಾತ್ ಹಾಗೂ ಬಿಹಾರ ಇವುಗಳ ಬಜೆಟ್ ಕ್ರಮವಾಗಿ 2,24,789 ಕೋಟಿ ರೂ., 2,17,287 ಕೋಟಿ ರೂ. ಮತ್ತು 2,11,761 ಕೋಟಿ ರೂಪಾಯಿಗಳಿವೆ. ದೇಶದಲ್ಲೇ ಅತ್ಯಂತ ಕಡಿಮೆ ಬಜೆಟ್ ಗಾತ್ರ ಇರುವ ರಾಜ್ಯ ಎಂದರೆ ಸಿಕ್ಕಿಂ. ಅಲ್ಲಿನ ಆಯವ್ಯಯದ ಲೆಕ್ಕ 7,051 ಕೋಟಿ ರೂಪಾಯಿ.

ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳ ಬಜೆಟ್ 20 ಸಾವಿರ ಕೋಟಿ ರುಪಾಯಿಯೊಳಗೇ ಇದೆ. ಇನ್ನು ಒಡಿಶಾ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ರಾಜ್ಯಗಳ ಬಜೆಟ್ 1.50 ಲಕ್ಷ ಕೋಟಿ ಮತ್ತು ಅದಕ್ಕೆ ಮೇಲ್ಪಟ್ಟು 2 ಲಕ್ಷ ಕೋಟಿ ರೂಪಾಯಿಯೊಳಗೆ ಇದ್ದರೆ, ಹರ್ಯಾಣ, ಕೇರಳ ಬಜೆಟ್ 1.50 ಲಕ್ಷ ಕೋಟಿಗೆ ಸ್ವಲ್ಪ ಕಡಿಮೆ ಇದೆ. ಅದೇ ರೀತಿ 90 ಸಾವಿರ ಕೋಟಿ ರೂ. ಮೇಲ್ಪಟ್ಟ 1 ಲಕ್ಷ ಕೋಟಿಯೊಳಗಿನ ಬಜೆಟ್ ಇರುವ ರಾಜ್ಯಗಳೆಂದರೆ, ಅಸ್ಸಾಂ, ಛತ್ತೀಸ್​ಗಢ. ಜಾರ್ಖಂಡ್ ಬಜೆಟ್ 85,429 ಕೋಟಿ ಹಾಗೂ ಹಿಮಾಚಲ ಪ್ರದೇಶದ ಆಯವ್ಯಯ 50 ಸಾವಿರ ಕೋಟಿ ರೂಪಾಯಿಯೊಳಗೆ ಇದೆ.

ಇದನ್ನೂ ಓದಿ: Karnataka Budget 2021: ಜನ ಸಾಮಾನ್ಯರಿಗೂ ಗೊತ್ತಿರಬೇಕಾದ ಬಜೆಟ್ ಪಾರಿಭಾಷಿಕ ಪದಗಳು

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಕೊರೊನಾ ಕಾಲದಲ್ಲಿ ಯಡಿಯೂರಪ್ಪ ಅರ್ಥಶಾಸ್ತ್ರ ಹೇಗಿರಲಿದೆ?

ಇದನ್ನೂ ಓದಿ: BS Yediyurappa Profile: ಕರ್ನಾಟಕ ರಾಜಕಾರಣದಲ್ಲಿ ‘ಬ್ರ್ಯಾಂಡ್’ ಹುಟ್ಟುಹಾಕಿದ ಯಡಿಯೂರಪ್ಪ ವ್ಯಕ್ತಿಚಿತ್ರ

Published On - 10:58 am, Mon, 8 March 21

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್