Panic attack: ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವ, ಒತ್ತಡಕ್ಕೀಡು ಮಾಡುವ ಸಮಸ್ಯೆಯ ಕುರಿತು ಮಾಹಿತಿ ಇಲ್ಲಿದೆ

ಈ ಸಮಸ್ಯೆಯಿಂದ ಬಳಲುತ್ತಿರುವವ ಹೊತ್ತಿನಲ್ಲಿ ಹೃದಯಬಡಿತ ಹೆಚ್ಚುತ್ತದೆ, ಉಸಿರಾಟ ತಡೆತಡೆದು ನಡೆಯುತ್ತದೆ, ವ್ಯಕ್ತಿ ತಾನು ಇನ್ನೇನು ಸಾಯಲಿದ್ದೇನೆ, ಇದು ತನ್ನ ಅಂತಿಮ ಕ್ಷಣಗಳು ಎಂಬಂತೆ ವರ್ತಿಸುತ್ತಾನೆ.

Panic attack: ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವ, ಒತ್ತಡಕ್ಕೀಡು ಮಾಡುವ ಸಮಸ್ಯೆಯ ಕುರಿತು ಮಾಹಿತಿ ಇಲ್ಲಿದೆ
Panic AttackImage Credit source: News Bytes
Follow us
| Updated By: ಅಕ್ಷತಾ ವರ್ಕಾಡಿ

Updated on:Nov 20, 2022 | 6:43 PM

ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕದ ಸ್ಥಿತಿ ಇವೆರಡು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಒಂದು ರೀತಿಯ ಕಾಯಿಲೆಯಾಗಿದ್ದು, ನೀವು ಈ ಕಾಯಿಲೆಯಿಂದ ಬಳಲುತ್ತಿದ್ದರೆ ಆದಷ್ಟು ಹೊರ ಬರಲು ಪ್ರಯತ್ನಿಸಿ.  ಯಾವುದೇ ಒಂದು ಘಟನೆಗಳು ನಿಮ್ಮನ್ನು ಭಯ ಭೀತರನ್ನಾಗಿಸುವುದು. ಇದು ನಿಮ್ಮನ್ನು ಕಾಲ ಕ್ರಮೇಣ ಮಾನಸಿಕ ಖಿನ್ನತೆಗೆ ಒಳಪಡಿಸುತ್ತದೆ. ಪ್ಯಾನಿಕ್ ಅಟ್ಯಾಕ್ ಹಾಗೂ ಆತಂಕದ ಸ್ಥಿತಿ ಬಹುಮಟ್ಟಿಗೆ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೂ, ಅನೇಕ ವಿಧಗಳಲ್ಲಿ ಆತಂಕದ ದಾಳಿಯಿಂದ ಭಿನ್ನವಾಗಿರುತ್ತದೆ.

ಸಾಮಾನ್ಯವಾಗಿ ಸುಲಭವಾಗಿ ಸ್ಥೈರ್ಯಗೆಡುವ ವ್ಯಕ್ತಿಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಆ ಹೊತ್ತಿನಲ್ಲಿ ಹೃದಯಬಡಿತ ಹೆಚ್ಚುತ್ತದೆ, ಉಸಿರಾಟ ತಡೆತಡೆದು ನಡೆಯುತ್ತದೆ, ವ್ಯಕ್ತಿ ತಾನು ಇನ್ನೇನು ಸಾಯಲಿದ್ದೇನೆ, ಇದು ತನ್ನ ಅಂತಿಮ ಕ್ಷಣಗಳು ಎಂಬಂತೆ ವರ್ತಿಸುತ್ತಾನೆ.

ಪ್ಯಾನಿಕ್ ಅಟ್ಯಾಕ್(Panic attack) ಎಂದರೆ ಹಠಾತ್, ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಭಯ, ಆತಂಕ. ಆದರೆ ಇದು ಕ್ರಮೇಣ ಬೆಳೆಯುತ್ತಾ ಹೋಗುತ್ತದೆ. ಇದು ನಿರೀಕ್ಷಿತ ಮತ್ತು ಅನಿರೀಕ್ಷಿತ ಎರಡೂ ಆಗಿರಬಹುದು. ಯಾರಿಗಾದರೂ, ಯಾವಾಗ ಬೇಕಾದರೂ ಸಂಭವಿಸಬಹುದಾದ ಒಂದು ರೀತಿಯ ಸಮಸ್ಯೆಯಾಗಿದೆ.

ಮತ್ತೊಂದೆಡೆ, ಆತಂಕದ ದಾಳಿಯು(anxiety attack) ನಿಮ್ಮ ಯಾವುದೋ ಭಯ ಅಥವಾ ಒತ್ತಡ ಉಲ್ಬಣಗೊಂಡಾಗ ಸಾಮಾನ್ಯವಾಗಿ ಸಂಭವಿಸುತ್ತದೆ. ಇದು ಸೌಮ್ಯ, ಮಧ್ಯಮ ಅಥವಾ ತೀವ್ರವಾಗಿರಬಹುದು. ನಿಮ್ಮ ಒತ್ತಡದ ಪರಿಸ್ಥಿತಿಯಿಂದಾಗಿ ಆತಂಕವನ್ನು ಪ್ರಚೋದಿಸುತ್ತದೆ.

ಈ ಎರಡು ಸಮಸ್ಯೆಗಳಿಂದ ನೀವು ನಿಮ್ಮನ್ನು ಕುಗ್ಗಿಸಲು ಅನುವುಮಾಡಿಕೊಡುತ್ತದೆ. ಆದ್ದರಿಂದ ಇಂತಹ ಸಮಸ್ಯೆ ತೀವ್ರ ಸ್ವರೂಪವನ್ನು ಪಡೆಯುವ ಮುನ್ನ ಮನಶಾಸ್ತ್ರಜ್ಞರನ್ನು ಭೇಟಿ ನೀಡಿ ಅವರ ಸಲಹೆ ತೆಗೆದುಕೊಳ್ಳಿ.

ನಿಮ್ಮ ಈ ಸಮಸ್ಯೆಗೆ ಪ್ರಮುಖ ಕಾರಣಗಳು ಇಲ್ಲಿವೆ: ಕೆಲಸದ ಒತ್ತಡ, ನಿಮ್ಮ ಅನುಭವಕ್ಕೆ ಬಂದ ಅಪಘಾತಕಾರಿ ಘಟನೆಗಳು, ದೀರ್ಘಕಾಲದ ಕಾಯಿಲೆಗಳು, ತಪ್ಪಿತಸ್ಥ ಎಂಬ ಭಾವನೆ, ಊಟವನ್ನು ಬಿಟ್ಟುಬಿಡುವುದು, ಘರ್ಷಣೆಗಳು ಅಥವಾ ಜಗಳಗಳು, ಬೇರ್ಪಡುವಿಕೆ ಅಥವಾ ನಷ್ಟದಿಂದಾಗಿ ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕದ ದಾಳಿಗಳು ಹೆಚ್ಚಾಗಬಹುದು.

ಇದನ್ನು ಓದಿ: ಬೆಟ್ಟದಷ್ಟು ಪ್ರೀತಿ ಮಾಡುವ ಸಂಗಾತಿಯು ಹಿಂಸಾತ್ಮಕ ಮತ್ತು ಆಕ್ರಮಣಕಾರಿ ರೂಪ ತಾಳುವುದೇಕೆ? ಮನಃಶಾಸ್ತ್ರಜ್ಞರು ಏನಂತಾರೆ?

ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ಹೃದಯ ಬಡಿತದ ಹೆಚ್ಚಳ, ದೇಹ ಶೀತ, ನಡುಕ, ಉಸಿರುಗಟ್ಟುವಿಕೆ, ಮರಗಟ್ಟುವಿಕೆ, ಎದೆ ನೋವು, ಸಾಯುವ ಭಯ, ಮೂರ್ಛೆ, ತಲೆನೋವು, ವಾಕರಿಕೆ, ಬೆವರು ಮತ್ತು ಆಯಾಸ.

ಆರೋಗ್ಯಕ್ಕೆ  ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:24 pm, Sun, 20 November 22

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್