Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ

Tirupati Balaji Darshan | Indian Railways: ಭಾರತೀಯ ರೈಲ್ವೇ ಬಾಲಾಜಿ ದರ್ಶನಕ್ಕೆ ನೀಡಿದ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಎಪ್ರಿಲ್ 10, ಎಪ್ರಿಲ್ 17, ಎಪ್ರಿಲ್ 24, ಮೇ 1, ಮೇ 8, ಮೇ 15, ಮೇ 25 ಮತ್ತು ಮೇ 29ರಂದು ಮಾತ್ರ ಬಳಸಬಹುದಾಗಿದೆ.

Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ
ತಿರುಪತಿ ದೇವಾಲಯ
Follow us
|

Updated on:Feb 12, 2021 | 6:11 PM

ದೆಹಲಿ: ಕೊರೊನಾ ಹೆದರಿಕೆಯಿಂದ ಎಲ್ಲಿಗೂ ಹೋಗದೇ, ಆರು ತಿಂಗಳು ಮನೆಯಲ್ಲೇ ಕುಳಿತಿದ್ದವರು ಈಗ ನಿಧಾನವಾಗಿ ಕೆಲಸಕ್ಕೂ ತೆರಳಲು ಆರಂಭಿಸಿಯಾಯಿತು. ಈಗ ಸಂಕಟ ಬಂದಾಗ ಕಾಯುವ ವೆಂಕಟರಮಣನ ದರ್ಶನ ಮಾಡುವ ಸಮಯ. ಹೀಗಾಗಿಯೇ ಭಾರತೀಯ ರೈಲ್ವೇ ತಿರುಪತಿ ತಿಮ್ಮಪ್ಪನ ದರ್ಶನಾರ್ಥಿಗಳಿಗೆ ಕಡಿಮೆ ದರದ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ. ಏಳು ಬೆಟ್ಟದ ಒಡೆಯ ವೆಂಟೇಶ್ವರನಿಗೆ ಕೈಮುಗಿದು ‘ನಿನ್ನೇ ನಂಬಿ ಬಂದಿಹೆನು..ಕಾಪಾಡೋ ತಿಮ್ಮಪ್ಪಾ’ ಎಂದು ಮೊರೆಯಿಡುವ ಭಕ್ತಾದಿಗಳಿಗೆ IRCTC ಹಲವು ಬಗೆಯ ವಿಶೇಷ ಪ್ಯಾಕೇಜ್​ಗಳನ್ನು ಘೋಷಿಸಿದೆ. (Indian Railways Balaji Darshan offer to visit Tirupati in cheap rates with family details here)

ಎಷ್ಟು ಕಡಿಮೆ ಗೊತ್ತಾ? ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಪರಮ ಪಾವನ ಕ್ಷೇತ್ರ ತಿರುಪತಿಗೆ ನೀವು ಏಕಾಂಗಿಯಾಗಿ ತೆರಳಬಯಸುವಿರಿ ಎಂದರೆ ಕೇವಲ ₹ 16,000ಕ್ಕೆ IRCTC ನಿಮಗೆ ತಿರುಪತಿ ದರ್ಶನ ಮಾಡಿಸಲಿದೆ. ಇಬ್ಬರು ಒಟ್ಟಿಗೆ ದರ್ಶನ ಮಾಡಬಯಸುವುದಾದರೆ ₹ 14,200 ಪಾವತಿಸಿದರೆ ಆಯಿತು. ಮೂವರ ಜತೆ ತಿರುಪತಿ ಯಾತ್ರೆ ಮಾಡುವುದಿದ್ದರೆ IRCTC ಇನ್ನೂ ವಿಶೇಷ ಕೊಡುಗೆ ಘೋಷಿಸಿದೆ. ಕೇವಲ ₹14,100 ಪಾವತಿಸುವ ಮೂಲಕ ನೀವು ಮೂವರ ಜತೆ ತಿಮ್ಮಪ್ಪನ ದರ್ಶನ ಮಾಡಬಹುದು. ನಿಮ್ಮ ಜತೆಗೆ 5ರಿಂದ 11 ವರ್ಷದೊಳಗಿನ ಪ್ರತಿ ಮಕ್ಕಳಿಗೆ ನೀವು ಪಾವತಿಸಬೇಕಿರುವುದು ₹12,900 ಮಾತ್ರ.

ಯಾವಾಗೆಲ್ಲಾ ಇದೆ ಈ ಕೊಡುಗೆ? ಈ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯ. ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 24, ಮೇ 1, ಮೇ 8, ಮೇ 15, ಮೇ 25 ಮತ್ತು ಮೇ 29ರಂದು ಮಾತ್ರ ಈ ಕೊಡುಗೆ ಲಭ್ಯವಿದೆ. ನೆನಪಿಡಿ, ಐಆರ್​ಸಿಟಿಸಿ ವೆಬ್​ಸೈಟ್​ನ ಮೂಲಕ packageCode=WMA17 ಎಂಬ ಕೋಡ್​ ಬಳಸಿ ಮಾತ್ರ ಈ ಕೊಡುಗೆಯನ್ನು ಬಳಸಬಹುದು. (Indian Railways offer to visit Tirupati in cheap rates with family here is the check date details here)

ಇದನ್ನೂ ಓದಿ: ತಿರುಪತಿಯ ರಥಸಪ್ತಮಿ ವಿಶೇಷ ದರ್ಶನಕ್ಕೆ 300 ರೂಪಾಯಿ ಟಿಕೆಟ್​: ಇದನ್ನು ಕೊಳ್ಳಲು ಹೀಗೆ ಮಾಡಿ

Published On - 1:51 pm, Fri, 12 February 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್