AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಮೂರು ಸೂಪರ್ ಓವರ್.. ಐಪಿಎಲ್​ನಲ್ಲಿ ಹೊಸ ಇತಿಹಾಸ!

ಐಸಿಸಿ ನಿಯಮದ ಪ್ರಕಾರ ಮೊದಲ ಸೂಪರ್​ನಲ್ಲಿ ಕಣಕ್ಕಿಳಿದ ಬ್ಯಾಟ್ಸ್​ಮನ್​ಗಳು ಮತ್ತೆ ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಮೊದಲ ಸೂಪರ್ ಓವರ್ ಮಾಡಿದ ಬೌಲರ್ ಮತ್ತೊಮ್ಮೆ ಬೌಲಿಂಗ್ ಮಾಡೋಹಾಗಿಲ್ಲ.. ಆದ್ರಿಂದ, ಸೂಪರ್ ಓವರ್ 2.O ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೆರಾನ್ ಪೊಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಆರಂಭಿಸಿದ್ರು. ಪಂಜಾಬ್ ಪರ ಮೊಹಮ್ಮದ್ ಶಮಿ ಬದಲು ಕ್ರಿಸ್ ಜೋರ್ಡನ್ ಬೌಲಿಂಗ್ ಮಾಡಲು ಮುಂದಾದ್ರು. ಹಾಗಾದ್ರೆ ಸೂಪರ್ ಓವರ್ 2.O ಹೇಗಿತ್ತು ಅನ್ನೋದನ್ನ ನೋಡೋದಾದ್ರೆ. ಬಾಲ್ ನಂ 1 1 […]

ಒಂದೇ ದಿನ ಮೂರು ಸೂಪರ್ ಓವರ್.. ಐಪಿಎಲ್​ನಲ್ಲಿ ಹೊಸ ಇತಿಹಾಸ!
ಆಯೇಷಾ ಬಾನು
ಆಯೇಷಾ ಬಾನು|

Updated on:Oct 19, 2020 | 9:17 AM

Share

ಐಸಿಸಿ ನಿಯಮದ ಪ್ರಕಾರ ಮೊದಲ ಸೂಪರ್​ನಲ್ಲಿ ಕಣಕ್ಕಿಳಿದ ಬ್ಯಾಟ್ಸ್​ಮನ್​ಗಳು ಮತ್ತೆ ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಮೊದಲ ಸೂಪರ್ ಓವರ್ ಮಾಡಿದ ಬೌಲರ್ ಮತ್ತೊಮ್ಮೆ ಬೌಲಿಂಗ್ ಮಾಡೋಹಾಗಿಲ್ಲ.. ಆದ್ರಿಂದ, ಸೂಪರ್ ಓವರ್ 2.O ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೆರಾನ್ ಪೊಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಆರಂಭಿಸಿದ್ರು. ಪಂಜಾಬ್ ಪರ ಮೊಹಮ್ಮದ್ ಶಮಿ ಬದಲು ಕ್ರಿಸ್ ಜೋರ್ಡನ್ ಬೌಲಿಂಗ್ ಮಾಡಲು ಮುಂದಾದ್ರು. ಹಾಗಾದ್ರೆ ಸೂಪರ್ ಓವರ್ 2.O ಹೇಗಿತ್ತು ಅನ್ನೋದನ್ನ ನೋಡೋದಾದ್ರೆ. ಬಾಲ್ ನಂ 1 1 ರನ್ ಕ್ರಿಸ್ ಜೋರ್ಡನ್​ರ ಮೊದಲ ಎಸೆತವನ್ನ ಲಾಂಗ್ ಆನ್​ನತ್ತ ಬಾರಿಸಿದ ಕೆರಾನ್ ಪೊಲ್ಲಾರ್ಡ್ 1 ರನ್ ಗಳಿಸಿದ್ರು

ಬಾಲ್ ನಂ 2 ವೈಡ್ ಹಾರ್ದಿಕ್ ಪಾಂಡ್ಯಾ ಸ್ಟ್ರೈಕ್​ನಲ್ಲಿದ್ದಾದ ಜೋರ್ಡನ್ ಎರಡನೇ ಎಸೆತವನ್ನ ಆನ್​ಸೈಡ್​ನತ್ತ ವೈಡ್ ಹಾಕಿದ್ರು. ಬಾಲ್ ನಂ 2 1 ರನ್ ಎರಡನೇ ಎಸೆತವನ್ನ ಜೋರ್ಡನ್ ಯಾರ್ಕರ್ ಹಾಕಿದ್ರು. ಡೀಪ್ ಮಿಡ್ ವಿಕೆಟ್​ನತ್ತ ಡ್ರೈವ್ ಮಾಡಿದ ಪಾಂಡ್ಯಾ 1 ರನ್ ಗಳಿಸಿದ್ರು

ಬಾಲ್ ನಂ 3 ಬೌಂಡರಿ ಮೂರನೇ ಎಸೆತವನ್ನ ಪವರ್ ಹಿಟ್ಟರ್ ಪೊಲ್ಲಾರ್ಡ್ ಡೀಪ್ ಕವರ್​ನಲ್ಲಿ ಬೌಂಡರಿ ಬಾರಿಸಿದ್ರು. ಅಲ್ಲಿಗೆ ಮುಂಬೈ ಮೂರನೇ ಎಸೆತದಲ್ಲಿ 8 ರನ್ ಕಲೆಹಾಕ್ತು.

ಬಾಲ್ ನಂ 4 ವೈಡ್ ಸಾಕಷ್ಟು ಒತ್ತಡವನ್ನ ಎದುರಿಸಿದ ಜೋರ್ಡನ್ ನಾಲ್ಕನೇ ಎಸೆತವನ್ನ ವೈಡ್ ಹಾಕಿದ್ರು. ಬಾಲ್ ನಂ 4 1 ರನ್ 4 ನೇ ಎಸೆತದಲ್ಲಿ ಎರಡು ರನ್ ಕಂಪ್ಲೀಟ್ ಮಾಡೋಕಾಗದೇ ಹಾರ್ದಿಕ್ ಪಾಂಡ್ಯಾ ನಾನ್ ಸ್ಟ್ರೈಕ್​ನತ್ತ ರನೌಟ್ ಆದ್ರು.

ಬಾಲ್ ನಂ 5 0 ರನ್ ಜೋರ್ಡನ್ 5ನೇ ಎಸೆತದಲ್ಲಿ ಪೊಲ್ಲಾರ್ಡ್ ಕೀಪರ್ ಕೈಗೆ ಕ್ಯಾಚ್ ಕೊಟ್ಟು ಔಟ್ ಆಗಿರ್ತರೆ. ಪೊಲ್ಲಾರ್ಡ್ ಔಟ್ ಅಂತ ಒಪ್ಪಿಕೊಳ್ಳದೇ ಡಿಆರ್​ಎಸ್ ಮೊರೆ ಹೋದ್ರು. ಆದ್ರೆ ಅಸಲಿಗೆ ಚೆಂಡು ಬ್ಯಾಟ್​ಗೆ ಬಡಿದಿದ್ದಿಲ್ಲ.

ಬಾಲ್ ನಂ 6 2 ರನ್ ಜೋರ್ಡನ್​ರ ಕೊನೇ ಎಸೆತದಲ್ಲಿ ಪೊಲ್ಲಾರ್ಡ್ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸರ್ ಬಾರಿಸಿದ್ರು. ಆದ್ರೆ ಕನ್ನಡಿಗ ಮಯಾಂಕ್ ಅಗರ್ವಾಲ್ ಬೌಂಡರಿಗೆರೆಯ ತುದಿಯಲ್ಲೇ ನಿಂತು ಕ್ಯಾಚ್ ಹಿಡಿದು, ಮೈದಾನದೊಳಗೆ ಚೆಂಡನ್ನ ಎಸೀತಾರೆ. ಅಲ್ಲಿಗೆ ಮಯಾಂಕ್ 4 ರನ್ ಸೇವ್ ಮಾಡ್ತಾರೆ. ಇದ್ರೊಂದಿಗೆ ಮುಂಬೈ ಸೂಪರ್ ಓವರ್​ನಲ್ಲಿ 11 ರನ್ ಗಳಿಸುತ್ತೆ.

12 ರನ್​ಗಳ ಗುರಿ ಬೆನ್ನತ್ತಿದ್ದ ಪಂಜಾಬ್ ಪರ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಗೂ ಕನ್ನಡಿಗ ಮಯಾಂಕ್ ಇನ್ನಿಂಗ್ಸ್ ಆರಂಭಿಸಿದ್ರೆ, ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡಿದ್ರು.

ಬಾಲ್ ನಂ 1 6 ರನ್ ಟ್ರೆಂಟ್ ಬೌಲ್ಟ್ ಹಾಕಿದ ಫುಲ್ಟಾಸ್ ಎಸೆತವನ್ನ ಕ್ರಿಸ್ ಗೇಲ್, 90 ಮೀಟರ್ ಉದ್ದದ ಭರ್ಜರಿ ಸಿಕ್ಸರ್ ಬಾರಿಸಿದ್ರು. ಅಲ್ಲಿಗೆ ಪಂಜಾಬ್ ಗೆಲ್ಲೋಕೆ 5 ಬಾಲ್​ನಲ್ಲಿ 6 ರನ್ ಬೇಕಾಗುತ್ತೆ.

ಬಾಲ್ ನಂ 2 1 ರನ್ ಎರಡನೇ ಎಸೆತದಲ್ಲಿ ಕ್ರಿಸ್ ಗೇಲ್ ಸ್ಕ್ಯಾರ್ ಲೆಗ್​ನತ್ತ ಡ್ರೈವ್ ಮಾಡಿ ಒಂದು ರನ್ ಗಳಿಸ್ತಾರೆ.

ಬಾಲ್ ನಂ 3 4 ರನ್ ಮೂರನೇ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಡೀಪ್ ಎಕ್ಟ್ರಾ ಕವರ್​ನತ್ತ ಬೌಂಡರಿ ಬಾರಿಸಿದ್ರು..

ಬಾಲ್ ನಂ 4 4 ರನ್ ನಾಲ್ಕನೇ ಎಸೆತದಲ್ಲಿ ಮಯಾಂಕ್ ಡೀಪ್ ಮಿಡ್ ವಿಕೆಟ್​ನತ್ತ ಬೌಂಡರಿ ಬಾರಿಸಿ ಪಂಜಾಬ್​ಗೆ ಗೆಲುವು ತಂದುಕೊಡ್ತಾರೆ. ಇದ್ರೊಂದಿಗೆ ಎರಡನೇ ಸೂಪರ್ ಓವರ್​ನಲ್ಲಿ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ಯಾಂಪ್​ನಲ್ಲಿ ಆಟಗಾರರ ಖುಷಿಗೆ ಪಾರಾವೇ ಇರಲಿಲ್ಲ.

Published On - 9:00 am, Mon, 19 October 20

Follow Us
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ