
ಕಲಬುರಗಿ: ಸಂಡೇ ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡಿದ್ದಾರೆ. ಜೊತೆಗೆ, ಲಾಕ್ಡೌನ್ ಉಲ್ಲಂಘಿಸಿ ಅನಗತ್ಯ ಸೇವೆಗಳ ಅಂಗಡಿಗಳನ್ನ ತೆರೆದವರಿಗೂ ಸಹ ಬಸ್ಕಿ ಹೊಡೆಸಿದ್ದಾರೆ.
ಗಂಗಾ ನಗರದಲ್ಲಿ ಸಂಡೇ ಲಾಕ್ಡೌನ್ ಉಲ್ಲಂಘಿಸಿ ಕೆಲವರು ಅನಗತ್ಯವಾಗಿ ಹೊರಗಡೆ ಓಡಾಡುತ್ತಿರೋದು ಪೊಲೀಸರಿಗೆ ಕಂಡುಬಂತು. ಆದ್ದರಿಂದ ರಾಘವೇಂದ್ರ ನಗರ ಠಾಣೆಯ ಸಿಪಿಐ ಅರುಣ್ ಬಸ್ಕಿ ಹೊಡೆಸುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಿದ್ದಾರೆ.
Published On - 2:28 pm, Sun, 19 July 20