ಕೆರೆಗೆ ಟ್ರ್ಯಾಕ್ಟರ್ ಪಲ್ಟಿ: ಓರ್ವ ಸಾವು, ಇಬ್ಬರಿಗೆ ಗಾಯ
ಜಿಲ್ಲೆಯ ಮಾಲೂರು ತಾಲೂಕಿನ ತಾಳಕುಂಟೆ ಗ್ರಾಮದ ಬಳಿಯ ಜಯಮಂಗಲದ ಪೃಥ್ವಿ(20) ಎಂಬಾತ ಸಾವನ್ನಪ್ಪಿರುವ ದುರ್ದೈವಿ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಕೋಲಾರದಲ್ಲಿ ಟ್ರಾಕ್ಟರ್ ಪಲ್ಟಿ
ಕೋಲಾರ: ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಸಾಮಾನ್ಯವಾಗಿ ಟ್ರ್ಯಾಕ್ಟರ್ನಂತಹ ಉದ್ದನೆಯ ವಾಹನಗಳು ಪಲ್ಟಿಯಾಗುವ ಸಾಧ್ಯತೆ ಇರುವುದಿಲ್ಲ. ಆದರೆ, ಇಲ್ಲಿ ಅಚಾತುರ್ಯ ಘಟನೆ ಸಂಭವಿಸಿದ್ದು, ಒಬ್ಬ ವ್ಯಕ್ತಿ ಜೀವ ತೆರುವಂತಾಗಿದೆ.
ಜಿಲ್ಲೆಯ ಮಾಲೂರು ತಾಲೂಕಿನ ತಾಳಕುಂಟೆ ಗ್ರಾಮದ ಬಳಿಯ ಜಯಮಂಗಲದ ಪೃಥ್ವಿ(20) ಎಂಬಾತ ಸಾವನ್ನಪ್ಪಿರುವ ದುರ್ದೈವಿ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದಲ್ಲಿ ಟ್ರಾಕ್ಟರ್ ಪಲ್ಟಿ
ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಕಾರು ಅಪಘಾತ
Published On - 5:34 pm, Wed, 6 January 21




