AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಸಿಯುತ್ತಿದೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರು ಮೌಲ್ಯ: ಗ್ರಾಹಕರ ಮುಂದಿರುವ ಆಯ್ಕೆಗಳೇನು?

ದೆಹಲಿ: ವಸೂಲಾಗದ ಸಾಲದ ಪ್ರಮಾಣ ಹೆಚ್ಚಾದ ಕಾರಣ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿದ್ದ ಲಕ್ಷ್ಮೀ ವಿಲಾಸ್​ ಬ್ಯಾಂಕ್​ ಮೇಲೆ ಭಾರತೀಯ ರಿಸರ್ವ್​ ಬ್ಯಾಂಕ್ ಮೊರಟೋರಿಯಂ ಹೇರಿದ ನಂತರ ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ನಿರಂತರ ಕುಸಿತ ಕಂಡಿದೆ. ಗ್ರಾಹಕರಿಗೆ ತಿಂಗಳಿಗೆ ₹ 25,000ದವರೆಗೆ ಮಾತ್ರ ಹಣ ಹಿಂಪಡೆಯಲು ಆರ್​ಬಿಐ ಅವಕಾಶ ನೀಡಿದ್ದು ಠೇವಣಿ ಇಟ್ಟಿರುವ ಹಣ ಏನಾಗಬಹುದು ಎಂಬ ಆತಂಕವನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ನಿರಂತರವಾಗಿ ಕುಸಿಯುತ್ತಿರುವ ಷೇರುಮೌಲ್ಯವು ಹೂಡಿಕೆದಾರರ ಹಣವನ್ನು ಡೋಲಾಯಮಾನ ಪರಿಸ್ಥಿತಿಗೆ ತಳ್ಳಿದೆ. ಬ್ಯಾಂಕ್​ನ ಷೇರುಮೌಲ್ಯವು ಸತತ […]

ಕುಸಿಯುತ್ತಿದೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರು ಮೌಲ್ಯ: ಗ್ರಾಹಕರ ಮುಂದಿರುವ ಆಯ್ಕೆಗಳೇನು?
ಸಿಂಗಾಪುರ ಮೂಲದ ಬ್ಯಾಂಕ್​ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನ
Skanda
| Edited By: ಆಯೇಷಾ ಬಾನು|

Updated on:Nov 24, 2020 | 4:19 PM

Share

ದೆಹಲಿ: ವಸೂಲಾಗದ ಸಾಲದ ಪ್ರಮಾಣ ಹೆಚ್ಚಾದ ಕಾರಣ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿದ್ದ ಲಕ್ಷ್ಮೀ ವಿಲಾಸ್​ ಬ್ಯಾಂಕ್​ ಮೇಲೆ ಭಾರತೀಯ ರಿಸರ್ವ್​ ಬ್ಯಾಂಕ್ ಮೊರಟೋರಿಯಂ ಹೇರಿದ ನಂತರ ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ನಿರಂತರ ಕುಸಿತ ಕಂಡಿದೆ. ಗ್ರಾಹಕರಿಗೆ ತಿಂಗಳಿಗೆ ₹ 25,000ದವರೆಗೆ ಮಾತ್ರ ಹಣ ಹಿಂಪಡೆಯಲು ಆರ್​ಬಿಐ ಅವಕಾಶ ನೀಡಿದ್ದು ಠೇವಣಿ ಇಟ್ಟಿರುವ ಹಣ ಏನಾಗಬಹುದು ಎಂಬ ಆತಂಕವನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ನಿರಂತರವಾಗಿ ಕುಸಿಯುತ್ತಿರುವ ಷೇರುಮೌಲ್ಯವು ಹೂಡಿಕೆದಾರರ ಹಣವನ್ನು ಡೋಲಾಯಮಾನ ಪರಿಸ್ಥಿತಿಗೆ ತಳ್ಳಿದೆ.

ಬ್ಯಾಂಕ್​ನ ಷೇರುಮೌಲ್ಯವು ಸತತ ಆರನೇ ದಿನ ಕುಸಿತ ಕಂಡಿದೆ. ನಕಾರಾತ್ಮಕ ಸುದ್ದಿಗಳ ಪರಿಣಾಮ ಈವರೆಗೆ ಷೇರುಮೌಲ್ಯ ಶೇ.53ರಷ್ಟು ಕುಸಿದಿದೆ. ಮಂಗಳವಾರ ಒಂದೇ ದಿನದ ವಹಿವಾಟಿನಲ್ಲಿ ಷೇರುಮೌಲ್ಯ ಶೇ.9.88 ಕಡಿಮೆಯಾಗಿದೆ. ಇದೀಗ ಪ್ರತಿ ಷೇರಿನ ಮೌಲ್ಯ ₹ 7.30ರ ಆಸುಪಾಸಿನಲ್ಲಿ ವಹಿವಾಟಾಗುತ್ತಿದೆ. ಸಿಂಗಾಪುರ ಮೂಲದ ಡಿಬಿಎಸ್​ ಬ್ಯಾಂಕ್​ ಜತೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ ಮಾಡಲು ಆರ್​ಬಿಐ ನಿರ್ಧರಿಸಿದೆ. ಡಿಬಿಎಸ್​ ಬ್ಯಾಂಕ್​ ಲಕ್ಷ್ಮೀ ವಿಲಾಸ್​ ಬ್ಯಾಂಕ್​ನಲ್ಲಿ ಸುಮಾರು ₹2000 ಕೋಟಿಯಷ್ಟು ಬಂಡವಾಳ ಹೂಡುವ ನಿರೀಕ್ಷೆಯಿದ್ದು, ನಂತರವಷ್ಟೇ ಆರ್​ಬಿಐ ಮೊರಟೋರಿಯಂ ತೆರವುಗೊಳಿಸಿ, ಗ್ರಾಹಕರಿಗೆ ಹಣಹಿಂಪಡೆಯಲು ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬಹುದು.

ಕಳೆದ ವರ್ಷದ ಸೆಪ್ಟೆಂಬರ್​ನಿಂದ ಈಚೆಗೆ ಮೊರಟೋರಿಯಂ ನಿರ್ಬಂಧಕ್ಕೆ ಒಳಪಟ್ಟ ಮೂರನೇ ಬ್ಯಾಂಕ್​ ಇದಾಗಿದ್ದು ಈ ಹಿಂದೆ ಯೆಸ್​ ಬ್ಯಾಂಕ್ ಮತ್ತು ಪಿಎಂಸಿ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ವಿಧಿಸಿತ್ತು. ಸ್ಟೇಟ್ ​ಬ್ಯಾಂಕ್ ಆಫ್​ ಇಂಡಿಯಾ ನೇತೃತ್ವದಲ್ಲಿ ಇತರ ಬ್ಯಾಂಕ್​ಗಳು ಬಂಡವಾಳ ಒದಗಿಸಿ ಯೆಸ್​ ಬ್ಯಾಂಕ್​ ಅನ್ನು ಮೇಲೆತ್ತಿದವು. ಆದರೆ ಪಿಎಂಸಿ ಇನ್ನೂ ಸಂಕಷ್ಟದಲ್ಲಿಯೇ ಇದೆ. ಆಡಳಿತ ಮಂಡಳಿಗಳ ಬೇಜವಾಬ್ದಾರಿಯಿಂದಾಗಿ ಬ್ಯಾಂಕ್​ಗಳು ಸಂಕಷ್ಟಕ್ಕೀಡಾದರೆ ನಮ್ಮ ಹಣದ ಗತಿಯೇನು ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

https://www.facebook.com/Tv9Kannada/videos/248333016630058/

Published On - 2:31 pm, Tue, 24 November 20

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ