AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘H.D.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ; ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ’

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ. ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ ಎಂದು ಯೋಗೇಶ್ವರ್​ ತಿರುಗೇಟು ಕೊಟ್ಟಿದ್ದಾರೆ.

‘H.D.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ; ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ’
ಸಿ.ಪಿ.ಯೋಗೇಶ್ವರ್ (ಎಡ); H.D.ಕುಮಾರಸ್ವಾಮಿ (ಬಲ)
Follow us
KUSHAL V
|

Updated on: Jan 21, 2021 | 7:35 PM

ಬೆಂಗಳೂರು: ಮಾಜಿ ಸಿಎಂ H.D.ಕುಮಾರಸ್ವಾಮಿ ಬಗ್ಗೆ ಅಯ್ಯೋ ಪಾಪ ಅನಿಸುತ್ತೆ. ಅವರಿಗೆ ಆತಂಕ ಭಯ ಕಾಡ್ತಿದೆ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನೂ ಕೆಲಸ ಮಾಡಿಸಲಿಲ್ಲ. ಈಗ ಸಣ್ಣಪುಟ್ಟ ಕಾಮಗಾರಿಯ ಉದ್ಘಾಟನೆಗೂ ಹೋಗ್ತಿದ್ದಾರೆ ಎಂದು ಯೋಗೇಶ್ವರ್​ ತಿರುಗೇಟು ಕೊಟ್ಟಿದ್ದಾರೆ.

ಇನ್ನೂ, ಡಾ.ಅಂಬೇಡ್ಕರ್ ಭವನ ಕಟ್ಟಡವೇ ನಿರ್ಮಾಣವಾಗಿಲ್ಲ. ಆದ್ರೂ ಉದ್ಘಾಟನೆ ಮಾಡುವುದ್ದಕ್ಕೆ ಹೊರಟಿದ್ದಾರೆ. ಒಬ್ಬ ಸಿಎಂ ಆಗಿದ್ದಂತವರು ಈ ಥರ ಮಾಡೋದು ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ. ಅವರಿಗೆ ನಾನು ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಬರ್ತೇನೆ ಅಂತಾ ಆತಂಕ ಇರಬಹುದು. ಹಳೇ ಮೈಸೂರು ಭಾಗದಲ್ಲಿ ಹೇಗೆ ಪಕ್ಷ ಸಂಘಟನೆ ಮಾಡ್ತೇನೆ ಅಂತಾ ನೀವೇ ನೋಡಿ ಎಂದು ಯೋಗೇಶ್ವರ್ ಹೇಳಿದರು.

ನಾನು ಮೊದಲಿಂದಲೂ ಹೋರಾಟ ಮಾಡಿಕೊಂಡೇ ಬಂದವನು. ಯಾವುದೇ ಕಾರಣಕ್ಕೂ ಹಳೇ ಮೈಸೂರು ಭಾಗದಲ್ಲಿ ದೋಸ್ತಿ ಬೇಡ ಅಂತಾ ನಮ್ಮ ನಾಯಕರಿಗೆ ಕಿವಿಮಾತು ಹೇಳ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಆಗಬೇಕು ಅಂದ್ರೆ ಯಾವುದೇ ಕಾರಣಕ್ಕೂ ದೋಸ್ತಿ ಮಾಡಬಾರದು. ಈ ಕಾರಣಕ್ಕೆ ಕುಮಾರಸ್ವಾಮಿಗೆ ಆತಂಕ ಕಾಡ್ತಿದೆ. ಹೀಗಾಗಿ, ನಮ್ಮಲ್ಲೇ ಕೆಲವರು ಅವರಿಗೆ ಸಪೋರ್ಟ್ ಮಾಡಿದ್ರು ಎಂದು ಸಚಿವರು ಹೇಳಿದರು.

ಸಿಎಂ ಜೊತೆ ಮುಂಚೆ ಮೀಟಿಂಗ್ ಮಾಡಿದ ಕುಮಾರಸ್ವಾಮಿ ಮೊದಲು ಬಿಜೆಪಿನ ಪ್ರೀತಿ ಮಾಡ್ತಿದ್ದರು. ಈಗ ಅವರೇ ಬಿಜೆಪಿಯನ್ನು ಬೈತಿದ್ದಾರೆ ಎಂದು ಹೇಳಿದರು.

‘ಸಿ.ಪಿ. ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು, ಈಗ ರಾಜ್ಯ ಮಟ್ಟದಲ್ಲಿ ಹಣ ಮಾಡಲು ಅಧಿಕಾರ ಕೊಟ್ಟಿದ್ದಾರೆ’

ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ