ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ, AEE ಅಮಾನತಿಗೆ ಸಚಿವ ಸೂಚನೆ
ಚಿಕ್ಕಬಳ್ಳಾಪುರ: ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಿಂದಾಗಿ, ಚಿಕ್ಕಬಳ್ಳಾಪುರ KRDLನ AEE ಮುನೀರ್ ಅವರನ್ನು ಅಮಾನತು ಮಾಡುವಂತೆ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ. 2017ರ ಹಣ ನೀಡಿದ್ರೂ ಇದುವರೆಗೂ ಕಾಮಗಾರಿ ಅನುಷ್ಠಾನ ಮಾಡಿಲ್ಲವೆಂದು AEE ಮುನೀರ್ ಮೇಲೆ ಅಸಮಾಧಾನಗೊಂಡ ಸಚಿವ ಡಾ. ಸುಧಾಕರ್, ಇಂದು ನಡೆದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ AEE ಮುನೀರ್ ಅಮಾನತ್ತಿಗೆ ಸೂಚನೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಈ ಸಂಬಂಧ ಜಿಲ್ಲಾಧಿಕಾರಿ ಲತಾ […]

ಚಿಕ್ಕಬಳ್ಳಾಪುರ: ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಿಂದಾಗಿ, ಚಿಕ್ಕಬಳ್ಳಾಪುರ KRDLನ AEE ಮುನೀರ್ ಅವರನ್ನು ಅಮಾನತು ಮಾಡುವಂತೆ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
2017ರ ಹಣ ನೀಡಿದ್ರೂ ಇದುವರೆಗೂ ಕಾಮಗಾರಿ ಅನುಷ್ಠಾನ ಮಾಡಿಲ್ಲವೆಂದು AEE ಮುನೀರ್ ಮೇಲೆ ಅಸಮಾಧಾನಗೊಂಡ ಸಚಿವ ಡಾ. ಸುಧಾಕರ್, ಇಂದು ನಡೆದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ AEE ಮುನೀರ್ ಅಮಾನತ್ತಿಗೆ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಈ ಸಂಬಂಧ ಜಿಲ್ಲಾಧಿಕಾರಿ ಲತಾ ಅವರ ಜೊತೆ ಮಾತನಾಡಿದ್ದು, ಮುನೀರ್ ಅಮಾನತಿಗೆ ಸೂಚಿಸಿದ್ದಾರೆ. ಈ ಮಧ್ಯೆ, ನನ್ನ ಅಮಾನತಿಗೆ ಸೂಚನೆ ನೀಡದಂತೆ AEE ಮುನೀರ್, ಸಚಿವ ಡಾ. ಸುಧಾಕರ್ ಬಳಿ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.