AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಕೆಜೋಳ ಬೆಳೆಯುವವರಿಗೆ ಮಾತ್ರ ಪರಿಹಾರ, ಭಕ್ತ ಬೆಳೆಯುವವರಿಗ್ಯಾಕಿಲ್ಲ?

ದಾವಣಗೆರೆ: ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ದಾವಣಗೆರೆ ಕೂಡಾ ಒಂದು. ಇಲ್ಲಿ 1.50 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಾರೆ. ಎಕರೆಗೆ ಅಂದಾಜು ಮೂವತ್ತು ಕ್ವಿಂಟಾಲ್ ಅಂದ್ರೆ ಪ್ರತಿ ಬೆಳೆಗೆ ಅಂದಾಜು 52 ಸಾವಿರ ಟನ್ ಭತ್ತ ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದು ಲಕ್ಷ ಟನ್ ಕೇವಲ ದಾವಣಣಗೆರೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದ್ರೆ ಈಗ ಭತ್ತಕ್ಕೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ 1830 ರೂಪಾಯಿ ದರ ನಿಗದಿ ಮಾಡಿ […]

ಮೆಕ್ಕೆಜೋಳ ಬೆಳೆಯುವವರಿಗೆ ಮಾತ್ರ ಪರಿಹಾರ, ಭಕ್ತ ಬೆಳೆಯುವವರಿಗ್ಯಾಕಿಲ್ಲ?
ಆಯೇಷಾ ಬಾನು
|

Updated on:Jun 01, 2020 | 3:01 PM

Share

ದಾವಣಗೆರೆ: ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ದಾವಣಗೆರೆ ಕೂಡಾ ಒಂದು. ಇಲ್ಲಿ 1.50 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಾರೆ. ಎಕರೆಗೆ ಅಂದಾಜು ಮೂವತ್ತು ಕ್ವಿಂಟಾಲ್ ಅಂದ್ರೆ ಪ್ರತಿ ಬೆಳೆಗೆ ಅಂದಾಜು 52 ಸಾವಿರ ಟನ್ ಭತ್ತ ಬೆಳೆಯಲಾಗುತ್ತಿದೆ. ವರ್ಷಕ್ಕೆ ಒಂದು ಲಕ್ಷ ಟನ್ ಕೇವಲ ದಾವಣಣಗೆರೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದ್ರೆ ಈಗ ಭತ್ತಕ್ಕೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ 1830 ರೂಪಾಯಿ ದರ ನಿಗದಿ ಮಾಡಿ ಖರೀದಿ ಕೇಂದ್ರ ಆರಂಭಿಸಿದೆ.

ಆದ್ರೆ ಅಲ್ಲಿ ಹತ್ತಾರು ನಿಮಯಗಳಿವೆ. ಫ್ರೂಟ್ ಐಡಿ ತರಬೇಕು. ಇದನ್ನ ಕೃಷಿ ಇಲಾಖೆ ಕೊಡುತ್ತದೆ. ಅದರಲ್ಲಿ ನೀವು ಬೆಳೆದ ಬೆಳೆ ಭತ್ತ ಅಂತಾ ದಾಖಲಾಗಿರಬೇಕು. ಆಧಾರ ಕಾರ್ಡ ನಂಬರ್ ಲಿಂಕ್ ಮಾಡಿರಬೇಕು. ಇದೇ ಕಾರಣಕ್ಕೆ ದಾವಣಗೆರೆ ಖರೀದಿ ಕೇಂದ್ರಕ್ಕೆ ಕೇವಲ 17 ಜನ ರೈತರು ಭತ್ತ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಕೇವಲ ಐದು ಜನ ರೈತರು ಮಾತ್ರ ಮಾರಾಟ ಮಾಡಿದ್ದಾರೆ. ಒಬ್ಬ ರೈತನಿಂದ 40 ಕ್ವಿಂಟಾಲ್ ಮಾತ್ರ ಖರೀದಿಯಾಗಿದೆ. ಓಪನ್ ಮಾರುಕಟ್ಟೆಯಲ್ಲಿ 1200 ರಿಂದ 1400 ವರೆಗೆ ದರಕುಸಿದೆ.

ಹತ್ತು ವರ್ಷದಲ್ಲಿ ಇದೆ ಮೊದಲ ಬಾರಿಗೆ ಇಷ್ಟು ಕಡಿಮೆ ದರ ಇದೆ. ಅಲ್ಲದೆ ದಾವಣಗೆರೆಯಲ್ಲಿ ಬೆಳೆಯುವುದು ಸೋನಾ ಮಸೂರಿ ಭತ್ತ. ಕನಿಷ್ಟ 2000 ರೂಪಾಯಿ ಕ್ವಿಂಟಾಲ್ ದರ ಇರಬೇಕಿತ್ತು. ಆದ್ರೆ ಈ ಸಲ ಬೆಳೆಗಾರ ಕಣ್ಣೀರು ಹಾಕುವಂತಾಗಿದೆ. ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ರೈತನಿಗೆ ಮೂರು ಸಾವಿರ ರೂಪಾಯಿ ಪರಿಹಾರ ನೀಡುತ್ತಿದೆ.

ಆದ್ರೆ ಭತ್ತದ ಬೆಳೆಗಾರಿಗೆ ಮಾತ್ರ ಯಾವುದೇ ರೀತಿಯ ಪರಿಹಾರನೀಡಿಲ್ಲ. ಮೇಲಾಗಿ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಸಕಾಲಕ್ಕೆ ರೈತರ ಸಂಕಷ್ಟಕ್ಕೆ ಸ್ಪಂಧಿಸಬೇಕಾಗಿದ್ದು ಸರ್ಕಾರದ ಆಧ್ಯತೆ ಆಗಬೇಕು. ಲಾಕ್​ಡೌನ್​ನಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಈಗ ಮಳೆ ಬೇರೆ ಆರಂಭವಾಗಿದೆ. ಭತ್ತ ಮನೆಯಲ್ಲೇ ಇಟ್ಟು ಕೊಳ್ಳುವಷ್ಟು ಸ್ಥಿತಿವಂತ ರೈತರಿಲ್ಲ. ಇದೇ ಕಾರಣಕ್ಕೆ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದ ಹುಚ್ಚವನಳ್ಳಿ ಮಂಜುನಾಥ ನೇತ್ರತ್ವದಲ್ಲಿ ಹೋರಾಟ ಶುರುವಾಗಿದೆ. ಕಿತ್ತಾಟದಲ್ಲಿ ತೊಡಗಿರುವ ಜನ ಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಸ್ಪಂಧಿಸುವರೇ ಎಂಬುದು ಸದ್ಯದ ಪ್ರಶ್ನೆ.

Published On - 2:26 pm, Mon, 1 June 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ