AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯನ್ನು ಮನೆಯಲ್ಲಿ ಕೂಡಿಹಾಕಿದ್ದನ್ನು ಪ್ರಶ್ನಿಸಿದಕ್ಕೆ ಮಹಿಳೆ ಮೇಲೆ ಹಲ್ಲೆ

ಬೆಂಗಳೂರು: ಕೂಡಿಹಾಕಿದ್ದ ಬೀದಿ ನಾಯಿಯನ್ನು ಬಿಡಿಸಿಕೊಳ್ಳಲು ಹೋಗಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ. ನೀಲಂ ಎಂಬ ಮಹಿಳೆಗೆ ಸುಧಾಕರನ್ ಪೈಪ್​​ನಿಂದ ಹಲ್ಲೆ ನಡೆಸಿದ್ದಾನೆ. ನೀಲಂ ರಾಮಚಂದ್ರಪುರ ಬಳಿ ಬೀದಿ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿದ್ದರು. ಅದೇ ಏರಿಯಾದ ಸುಧಾಕರನ್ ಎಂಬಾತ ಮನೆಯ ಟೆರೆಸ್ ಮೇಲೆ ನೀಲಂ ಊಟ ಹಾಕುತ್ತಿದ್ದ ಒಜೀ ಎಂಬ ಬೀದಿ ನಾಯಿಯನ್ನ ಕೂಡಿ ಹಾಕಿದ್ದ. ಹೀಗಾಗಿ ಈ ಬಗ್ಗೆ ಪ್ರಶ್ನಿಸಿ ನಾಯಿ ಬಿಡಿಸಿಕೊಳ್ಳಲು ಹೋದಾಗ ಮಹಿಳೆ ಮೇಲೆ ಪೈಪ್​ನಿಂದ ಹಲ್ಲೆ […]

ನಾಯಿಯನ್ನು ಮನೆಯಲ್ಲಿ ಕೂಡಿಹಾಕಿದ್ದನ್ನು ಪ್ರಶ್ನಿಸಿದಕ್ಕೆ ಮಹಿಳೆ ಮೇಲೆ ಹಲ್ಲೆ
ಆಯೇಷಾ ಬಾನು
|

Updated on: Oct 11, 2020 | 5:25 PM

Share

ಬೆಂಗಳೂರು: ಕೂಡಿಹಾಕಿದ್ದ ಬೀದಿ ನಾಯಿಯನ್ನು ಬಿಡಿಸಿಕೊಳ್ಳಲು ಹೋಗಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ. ನೀಲಂ ಎಂಬ ಮಹಿಳೆಗೆ ಸುಧಾಕರನ್ ಪೈಪ್​​ನಿಂದ ಹಲ್ಲೆ ನಡೆಸಿದ್ದಾನೆ.

ನೀಲಂ ರಾಮಚಂದ್ರಪುರ ಬಳಿ ಬೀದಿ ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿದ್ದರು. ಅದೇ ಏರಿಯಾದ ಸುಧಾಕರನ್ ಎಂಬಾತ ಮನೆಯ ಟೆರೆಸ್ ಮೇಲೆ ನೀಲಂ ಊಟ ಹಾಕುತ್ತಿದ್ದ ಒಜೀ ಎಂಬ ಬೀದಿ ನಾಯಿಯನ್ನ ಕೂಡಿ ಹಾಕಿದ್ದ. ಹೀಗಾಗಿ ಈ ಬಗ್ಗೆ ಪ್ರಶ್ನಿಸಿ ನಾಯಿ ಬಿಡಿಸಿಕೊಳ್ಳಲು ಹೋದಾಗ ಮಹಿಳೆ ಮೇಲೆ ಪೈಪ್​ನಿಂದ ಹಲ್ಲೆ ನಡೆಸಿದ್ದಾನೆ.

ಅಲ್ಲದೆ ಇದು ನನ್ನ ಮನೆ ನನ್ನ ನಾಯಿ ನನ್ನ ಪರ್ಸನಲ್ ಅದು ನನ್ನಿಷ್ಟ. ಟೆರೇಸ್ ಮೇಲೆ ಬಂದ್ರೆ ಕೊಂದುಬಿಡ್ತೀನಿ ಅಂತ ಅವಾಜ್ ಹಾಕಿದ್ದಾನೆ. ನಾಯಿಯಂತೆ ಎರಗಿದ್ದಾನೆ. ನೀಲಂ ಕೆನ್ನೆಗೆ ಬಾರಿಸಿದ್ದಾನೆ. ಮಹಿಳೆ ಮೇಲೆ ಸುಧಾಕರನ್ ಹಲ್ಲೆ ನಡೆಸಿರೋ ವಿಡಿಯೋ ಟಿವಿ9 ಗೆ ಲಭ್ಯವಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.