ಗದಗ ನಗರಸಭೆ ಯಡವಟ್ಟು, ಜೀವಂತವಾಗಿದ್ದರೂ ಬಡ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ, ಪೊಲೀಸರಿಂದಲೂ ಕಿರುಕುಳದ ಆರೋಪ
ತಮ್ಮದೇ ಮರಣ ಪ್ರಮಾಣ ಪತ್ರವನ್ನು ಕೈಯಲ್ಲಿ ಹಿಡಿದು ಅಲೆಯುತ್ತಿರೋ ಬಡ ಕುಟುಂಬ.. ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳ ಮಹಾ ಯಡವಟ್ಟಿನಿಂದ ಆ ಬಡ ಕುಟುಂಬ ಕಂಗಾಲು.. ಮನೆ ಯಜಮಾನನ ಕಿಲಾಡಿ ಬುದ್ದಿಗೆ ನಲುಗಿದ ಬಡ ಕುಟುಂಬ ಸದಸ್ಯರು. ಹೌದು ಈ ಎಲ್ಲಾ ವಿದ್ಯಮಾನಗಳು ಕಾಣಸಿಗೋದು ಗದಗ ನಗರದ ಖಾನತೋಟದಲ್ಲಿ...

ಗದಗ ನಗರದ ಖಾನತೋಟ ನಿವಾಸಿಯಾದ ತಿಪ್ಪಣ್ಣ ಲಕ್ಕುಂಡಿ ತನ್ನ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಹುಟ್ಟು ಹಾಕಿದ್ದಾನೆ. ವಿಚಿತ್ರ ಅಂದ್ರೆ, ಈ ತಿಪ್ಪಣ್ಣ ಲಕ್ಕುಂಡಿ 12 ವರ್ಷಗಳಿಂದ ಪತ್ನಿ ಮಕ್ಕಳನ್ನು ಬಿಟ್ಟು ನಾ ಪತ್ತೆಯಾಗಿಬಿಟ್ಟಿದ್ದಾನೆ. ತಿಪ್ಪಣ್ಣ ಪತ್ನಿ ದ್ರಾಕ್ಷಾಯಣಿ 2004 ರಲ್ಲಿ ಸಾವನ್ನಪ್ಪಿದ್ದಾಳೆ ಎಂದು ಮರಣ ಪ್ರಮಾಣ ಪತ್ರವನ್ನು ಹುಟ್ಟು ಹಾಕಲಾಗಿದೆ. ಹಾಗೆಯೇ ಇಬ್ಬರು ಮಕ್ಕಳಾದ ಅಶೋಕ ಹಾಗೂ ಕಲ್ಲಪ್ಪ ಎನ್ನುವವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಅವರ ಹೆಸರಿನಲ್ಲಿಯೂ ಕೂಡಾ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಲಾಗಿದೆ. ಈ ಮಧ್ಯೆ ಮನೆ ಜಪ್ತಿ ಮಾಡುತ್ತೇವೆ ಎಂದು ಪೊಲೀಸರು ಮನೆಗೆ ಬರ್ತಾರಂತೆ. ಹೀಗಾಗಿ ನೊಂದ ಕುಟುಂಬ ಕಂಗಾಲಾಗಿದೆ.
Also Read: ಸತ್ತವರ ಬ್ಯಾಂಕ್ ಖಾತೆಗೂ ಗೃಹಲಕ್ಷ್ಮಿ ಹಣ ಜಮೆ; ಯೋಜನೆಯ ಹಣ ಪಡೆಯಲು ಕುಟುಂಬಸ್ಥರ ಪರದಾಟ
Published On - 5:35 pm, Fri, 23 February 24



