ನುಗ್ಗಿಕೇರಿ ಆಂಜನೇಯನಿಗೆ ‘ಅಂಜನಿ ಪುತ್ರ’ ಅಪ್ಪು ಸಲ್ಲಿಸಿದರು ವಿಶೇಷ‌ ಪೂಜೆ

ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ವನ್ಯಜೀವಿ ತಾಣದಲ್ಲಿ ಸಾಕ್ಷ್ಯಚಿತ್ರವೊಂದರ ಶೂಟ್​ಗಾಗಿ ಎರಡು ದಿನಗಳ‌ ಹಿಂದೆ ದಾಂಡೇಲಿಗೆ ಬಂದಿದ್ದ ನಟ ಪುನೀತ್ ರಾಜ್​ಕುಮಾರ್​ ಇಂದು ಧಾರವಾಡಕ್ಕೆ ಆಗಮಿಸಿದರು. ಡಾಂಡೇಲಿಯಿಂದ ಮರಳುವಾಗ ನಟ ಪುನೀತ್​ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನುಗ್ಗಿಕೇರಿ ಆಂಜನೇಯನ ಸಿನ್ನಿಧಾನದಲ್ಲಿ ಪವರ್​ ಸ್ಟಾರ್​ ತಮ್ಮ ಪತ್ನಿಯೊಟ್ಟಿಗೆ ವಿಶೇಷ‌ ಪೂಜೆ ಸಲ್ಲಿಸಿದರು. ಜೋಯಿಡಾದಲ್ಲಿ ಸ್ಪೆಷಲ್​ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು! ಉತ್ತರ […]

ನುಗ್ಗಿಕೇರಿ ಆಂಜನೇಯನಿಗೆ ‘ಅಂಜನಿ ಪುತ್ರ’ ಅಪ್ಪು ಸಲ್ಲಿಸಿದರು ವಿಶೇಷ‌ ಪೂಜೆ

Updated on: Nov 09, 2020 | 5:51 PM

ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ವನ್ಯಜೀವಿ ತಾಣದಲ್ಲಿ ಸಾಕ್ಷ್ಯಚಿತ್ರವೊಂದರ ಶೂಟ್​ಗಾಗಿ ಎರಡು ದಿನಗಳ‌ ಹಿಂದೆ ದಾಂಡೇಲಿಗೆ ಬಂದಿದ್ದ ನಟ ಪುನೀತ್ ರಾಜ್​ಕುಮಾರ್​ ಇಂದು ಧಾರವಾಡಕ್ಕೆ ಆಗಮಿಸಿದರು.

ಡಾಂಡೇಲಿಯಿಂದ ಮರಳುವಾಗ ನಟ ಪುನೀತ್​ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಪ್ರಸಿದ್ಧ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನುಗ್ಗಿಕೇರಿ ಆಂಜನೇಯನ ಸಿನ್ನಿಧಾನದಲ್ಲಿ ಪವರ್​ ಸ್ಟಾರ್​ ತಮ್ಮ ಪತ್ನಿಯೊಟ್ಟಿಗೆ ವಿಶೇಷ‌ ಪೂಜೆ ಸಲ್ಲಿಸಿದರು.

ಜೋಯಿಡಾದಲ್ಲಿ ಸ್ಪೆಷಲ್​ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು!

ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜೋಯಿಡಾ ವನ್ಯಜೀವಿ ತಾಣಕ್ಕೆ ಇಂದು ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಭೇಟಿ ಕೊಟ್ಟರು. ಸಾಕ್ಷ್ಯ ಚಿತ್ರವೊಂದರ ಶೂಟಿಂಗ್​ಗಾಗಿ ಪುನೀತ್ ರಾಜ್​ಕುಮಾರ್​ ಜೋಯಿಡಾಕ್ಕೆ ಬಂದಿದ್ದರು.

ತಮ್ಮ ಭೇಟಿ ವೇಳೆ ನಟ ಜೋಯಿಡಾದ ವಿಶೇಷ ಜೇನು ಸವಿದು ಎಂಜಾಯ್​ ಮಾಡಿದರು. ಜೊತೆಗೆ, ಚಾಪಖಂಡ ನರಸಿಂಹ ಭಟ್​ರವರ ಹನಿ ಬೀ ಪಾರ್ಕ್​ನಲ್ಲಿ ಜೇನು ಕೃಷಿ ನೋಡಿ ಸಂತಸಪಟ್ಟರು. ಅಷ್ಟೇ ಅಲ್ಲದೆ, ತಮ್ಮ ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್​ನ ಟೀ-ಶರ್ಟ್ ತರಿಸಿ ಹಾಕಿಕೊಂಡರು.

ಇದಲ್ಲದೆ, ಜೋಯಿಡಾ ವನ್ಯಜೀವಿ ತಾಣದಲ್ಲಿ ಪಕ್ಷಿ ವೀಕ್ಷಣೆಗೆ ಸಹ ಮುಂದಾದರು. ವನ್ಯಜೀವಿ ಧಾಮದ ಸುಪ್ರಸಿದ್ಧ ದಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಪಕ್ಷಿಯನ್ನು ಸಹ ವೀಕ್ಷಿಸಿ ಆನಂದಿಸಿದರು.

 

Published On - 5:46 pm, Mon, 9 November 20