AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪಚುನಾವಣೆ ಪ್ರಚಾರಕ್ಕೆ ರಮೇಶ್​ ಜಾರಕಿಹೊಳಿ ಬರ್ತಾರೆ: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಉಪಚುನಾವಣೆ ಪ್ರಚಾರದ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಬೈ ಎಲೆಕ್ಷನ್​ ಪ್ರಚಾರಕ್ಕೆ ರಮೇಶ್​ ಜಾರಕಿಹೊಳಿ ಬರಲಿದ್ದಾರೆ ಎಂದು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಹೇಳಿದ್ದಾರೆ.

ಉಪಚುನಾವಣೆ ಪ್ರಚಾರಕ್ಕೆ ರಮೇಶ್​ ಜಾರಕಿಹೊಳಿ ಬರ್ತಾರೆ: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ ಮತ್ತು ರಮೇಶ್​ ಜಾರಕಿಹೊಳಿ
Skanda
|

Updated on: Mar 20, 2021 | 5:42 PM

Share

ರಾಯಚೂರು: ರಾಜ್ಯದಲ್ಲಿ ಉಪಚುನಾವಣಾ ಕಾವು ದಿನೇದಿನೇ ಏರುತ್ತಿದ್ದು, ಎಲ್ಲಾ ಪಕ್ಷಗಳೂ ಬಿರುಸಿನ ಪ್ರಚಾರಕ್ಕೆ ಸಿದ್ಧವಾಗುತ್ತಿವೆ. ಇದೇ ವೇಳೆಯಲ್ಲಿ ಉಪಚುನಾವಣೆ ಪ್ರಚಾರದ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಬೈ ಎಲೆಕ್ಷನ್​ ಪ್ರಚಾರಕ್ಕೆ ರಮೇಶ್​ ಜಾರಕಿಹೊಳಿ ಬರಲಿದ್ದಾರೆ ಎಂದು ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕೊವಿಡ್​ ನಿಯಮ ಅನ್ವಯಿಸಲ್ಲ, ಕೇವಲ ಒಳಾಂಗಣ ಸಮಾವೇಶಕ್ಕೆ ಮಾತ್ರ ನಿಯಮಗಳು ಅನ್ವಯವಾಗಲಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದ್ದಾರೆ.

ಶೀಘ್ರವೇ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುತ್ತೆ. ಮೂರು ಕ್ಷೇತ್ರಗಳಲ್ಲಿ‌ಯೂ ಬಿಜೆಪಿ ಗೆಲುವು ಖಚಿತ. ಐದು ಉಪಕಾಲುವೆ ವಿಚಾರ ಉಪ ಚುನಾವಣೆ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ. ನವದೆಹಲಿಗೆ ರಾಜ್ಯ ಮುಖಂಡರ ತಂಡ ತೆರಳಲಿದ್ದು ಶೀಘ್ರದಲ್ಲೇ ಬೆಳಗಾವಿ ಲೋಕಸಭೆ ಚುನಾವಣೆ ಅಭ್ಯರ್ಥಿ ಘೋಷಣೆಯಾಗುತ್ತೆ. ಸರ್ಕಾರದ ಅಭಿವೃದ್ದಿ ಪರ ಯೋಜನೆಗಳೇ ಬಿಜೆಪಿ ಗೆಲುವಿಗೆ ಪ್ರಮುಖ ಅಸ್ತ್ರವಾಗಲಿದೆ. ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ದಿ ಯೊಜನೆಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ತಲೆಮರೆಸಿಕೊಂಡಿರುವ ಜೆ.ಪಿ.ನಗರದ ಉದ್ಯಮಿ ‌ಮನೆ ಮೇಲೆ ಎಸ್​ಐಟಿ ದಾಳಿ 

ನಂಗೇನೂ ಗೊತ್ತಿಲ್ಲ, ಸಿಡಿ ನಂದಲ್ಲ, ಯುವತಿ ಯಾರು ಅಂತಾನೂ ಗೊತ್ತಿಲ್ಲ, ನೀವೇ ತನಿಖೆ ಮಾಡಿ: ಎಸ್​ಐಟಿ ತನಿಖೆಗೆ ರಮೇಶ್​ ಜಾರಕಿಹೊಳಿ ಉತ್ತರ