AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ […]

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!
KUSHAL V
| Edited By: |

Updated on:Nov 20, 2020 | 2:45 PM

Share

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ ಬಳ್ಳಾರಿ ಶಿವನ ವಿರುದ್ಧ ರೌಡಿ ಶೀಟ್​ ಸಹ ಓಪನ್​ ಇದೆ. ಈ ನಡುವೆ, ಮರ್ಡರ್ ಕೇಸ್​ ಒಂದರಲ್ಲಿ ಕಳೆದ 4 ವರ್ಷದಿಂದ ಜೈಲುಪಾಲಾಗಿದ್ದ ಬಳ್ಳಾರಿ ಶಿವ ಕಳೆದ ವಾರ ಪೆರೋಲ್ ಮೇಲೆ ಹೊರ ಬಂದಿದ್ದ.

ಈ ವೇಳೆ, ತನ್ನ ಹುಟ್ಟೂರಾದ ಕನಕಪುರದ ಹಳ್ಳಿಯಲ್ಲಿ ಬಾಡೂಟ ಹಾಕಿಸಿದ್ದ ಬಳ್ಳಾರಿ ಶಿವ ಬಳಿಕ ತನ್ನ ಕಾರಿನ ಹಿಂದೆ 20ಕ್ಕೂ ಹೆಚ್ಚು ಬೆಂಗಾವಲು ವಾಹನಗಳಲ್ಲಿ ತನ್ನ ಬೆಂಬಲಿಗರ ದಂಡನ್ನು ಕಟ್ಟಿಕೊಂಡು ಊರೆಲ್ಲಾ ರೌಂಡ್ಸ್​ ಹೊಡೆದಿದ್ದಾನೆ.

ಬಳ್ಳಾರಿ ಶಿವನ ಈ ವೈಭೋಗ ಕಂಡು ಖುದ್ದು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಅಂದ ಹಾಗೆ, ತನ್ನ ವಿಜಯ ಯಾತ್ರೆ ಮುಗಿಸಿದ ಬಳ್ಳಾರಿ ಶಿವನ ಪೆರೋಲ್ ಅವಧಿ ಮುಗಿದಿದ್ದು ರೌಡಿ ಮತ್ತೆ ಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ.

Published On - 2:15 pm, Fri, 20 November 20

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ