Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿದ್ದ ಬಸ್ ಜಪ್ತಿ, ಬಸ್ ನಿಲ್ಲಿಸಿ ಚಾಲಕ-ನಿರ್ವಾಹಕ ಪರಾರಿ

ನೆಲಮಂಗಲ: ಕಳೆದ 8 ತಿಂಗಳಿಂದ ಸರ್ಕಾರಕ್ಕೆ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ಮೀನಾಕ್ಷಿ ಬಸ್ ಜಪ್ತಿ ಮಾಡಲಾಗಿದೆ. RTO ಅಧಿಕಾರಿಗಳು ಪ್ರಯಾಣಿಕರಿದ್ದ ಬಸ್ ಜಪ್ತಿ ಮಾಡಿದ್ದಾರೆ. ಬಳ್ಳಾರಿ ಮೂಲದ ರವಿಪ್ರಕಾಶ್ ರೆಡ್ಡಿಗೆ ಸೇರಿರುವ ಖಾಸಗಿ ಬಸ್ ಇದಾಗಿದ್ದು 8 ತಿಂಗಳಿಂದ 2 ಲಕ್ಷದ 72 ಸಾವಿರ ತೆರಿಗೆ ಕಟ್ಟದೆ RTO ಅಧಿಕಾರಿಗಳ ಕಣ್ತಪ್ಪಿಸಿ ರಾತ್ರೋರಾತ್ರಿ ಬಸ್ ಚಾಲನೆ ಮಾಡುತ್ತಿದ್ದರು. ನಿಖರವಾದ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಬೆಂಗಳೂರಿನಿಂದ […]

ಪ್ರಯಾಣಿಕರಿದ್ದ ಬಸ್ ಜಪ್ತಿ, ಬಸ್ ನಿಲ್ಲಿಸಿ ಚಾಲಕ-ನಿರ್ವಾಹಕ ಪರಾರಿ
Follow us
ಆಯೇಷಾ ಬಾನು
|

Updated on: Nov 23, 2020 | 10:42 AM

ನೆಲಮಂಗಲ: ಕಳೆದ 8 ತಿಂಗಳಿಂದ ಸರ್ಕಾರಕ್ಕೆ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ಮೀನಾಕ್ಷಿ ಬಸ್ ಜಪ್ತಿ ಮಾಡಲಾಗಿದೆ. RTO ಅಧಿಕಾರಿಗಳು ಪ್ರಯಾಣಿಕರಿದ್ದ ಬಸ್ ಜಪ್ತಿ ಮಾಡಿದ್ದಾರೆ.

ಬಳ್ಳಾರಿ ಮೂಲದ ರವಿಪ್ರಕಾಶ್ ರೆಡ್ಡಿಗೆ ಸೇರಿರುವ ಖಾಸಗಿ ಬಸ್ ಇದಾಗಿದ್ದು 8 ತಿಂಗಳಿಂದ 2 ಲಕ್ಷದ 72 ಸಾವಿರ ತೆರಿಗೆ ಕಟ್ಟದೆ RTO ಅಧಿಕಾರಿಗಳ ಕಣ್ತಪ್ಪಿಸಿ ರಾತ್ರೋರಾತ್ರಿ ಬಸ್ ಚಾಲನೆ ಮಾಡುತ್ತಿದ್ದರು. ನಿಖರವಾದ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ವೇಳೆ ಮೀನಾಕ್ಷಿ ಬಸ್ ಸೀಜ್ ಮಾಡಿದ್ದಾರೆ.

ಬಸ್‌ನಲ್ಲಿ ಸುಮಾರು 50 ಜನರು ಪ್ರಯಾಣಿಸುತ್ತಿದ್ದರು. ಆರ್‌ಟಿಒ ಅಧಿಕಾರಿಗಳು ಬಸ್‌ಗೆ ತಡೆ ಹಿಡಿಯುತ್ತಿದ್ದಂತೆ ಬಸ್ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ಬಸ್​ನಿಂದ ಇಳಿದು ಪರಾರಿಯಾಗಿದ್ದಾರೆ. ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಬಸ್ ಮಾಲೀಕನಿಗೆ ಹಿಡಿ ಶಾಪ ಹಾಕಿದ್ದು ಬೀದಿ ಪಾಲಾಗಿದ್ದಾರೆ. ಕೆಲವರು ಬೇರೆ ಬಸ್ ಹಿಡಿದು ಪ್ರಯಾಣ ಮುಂದುವರೆಸಿದ್ದಾರೆ.