AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ: ಕಥೆ ಕೇಳಿ ಓಕೆ ಅಂದು ಇದೀಗ ಹೊರನಡೆದ ಸಮಂತಾ..

ಸೌತ್‌ ಸಿನಿ ದುನಿಯಾದ ಟಚಾಪ್‌ ಸುಂದರಿಯರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಕೇಳಿದ್ದ ಅಭಿಮಾನಿಗಳು ಅವ್ರ ಅಭಿನಯ ನೋಡೋಕೆ ಥ್ರಿಲ್‌ ಆಗಿ ಕಾಯ್ತಿದ್ರು. ಆದ್ರೀಗ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಮಣಿಯರಿಬ್ಬರೂ ಒಂದಾಗೋದು ಡೌಟ್ ಅನ್ನೋ ಮಾತಿಗೆ ಈ ಸ್ಟೋರಿ ಉತ್ತರ ಕೊಟ್ಟಂತಿದೆ. ಹಾಗಾದ್ರೆ ಅದ್ಯಾವ ಸಿನಿಮಾ.. ಆ ನಟಿಮಣಿಯರ ನಡುವೆ ನಡೆದಿದ್ದೇನು.. ಅದರ ಡಿಟೇಲ್ಸ್ ಇಲ್ಲಿದೆ ಓದಿ.

ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ: ಕಥೆ ಕೇಳಿ ಓಕೆ ಅಂದು ಇದೀಗ ಹೊರನಡೆದ ಸಮಂತಾ..
ಕಾತುವಕ್ಕಲು ರೆಂಡು ಕಾದಲ್‌
ಆಯೇಷಾ ಬಾನು
|

Updated on: Dec 07, 2020 | 7:41 AM

Share

ಸಿನಿ ದುನಿಯಾದಲ್ಲಿ ಸದ್ಯ ಮಲ್ಟಿ ಸ್ಟಾರ್‌ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಒಂದೇ ಸಿನಿಮಾದಲ್ಲಿ ತಮ್ಮ ತಮ್ಮ ನೆಚ್ಚಿನ ನಟನಟಿಯರನ್ನ ನೋಡೋಕೆ ಸಿನಿಮಾ ಅನೌನ್ಸ್‌ ಆದಾಗಿನಿಂದ್ಲೂ ಅಭಿಮಾನಿಗಳು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳೋವರೆಗೂ ಕಾದು ಕುಳಿತಿರ್ತಾರೆ.

ಆರಂಭದಿಂದ್ಲೇ ಸ್ಟಾರ್‌ಗಳೂ ಕೂಡ ತಮ್ಮ ಪಾತ್ರಕ್ಕೆ ಎಷ್ಟು ಇಂಪಾರ್ಟೆನ್ಸ್ ಇದೆ ಅನ್ನೋದನ್ನ ಲೆಕ್ಕ ಹಾಕಿಯೇ ಸಿನಿಮಾಗೆ ಸೈನ್ ಮಾಡಿರ್ತಾರೆ. ಸದ್ಯ ಟಾಲಿವುಡ್‌ ಹಾಗೂ ಕಾಲಿವುಡ್‌ ನಟಿಮಣಿಯರಾದ ಸಮಂತ ಹಾಗೂ ನಯನತಾರಾ ಒಂದೇ ಚಿತ್ರದಲ್ಲಿ ನಟಿಸ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು.

ನಯನತಾರಾ ಬಾಯ್‌ ಫ್ರೆಂಡ್‌ ವಿಗ್ನೇಶ್‌ ಶಿವನ್‌ ಆ್ಯಕ್ಷನ್‌ ಕಟ್‌ ಹೇಳ್ತಿರೋ ಕಾತುವಕ್ಕಲು ರೆಂಡು ಕಾದಲ್‌ ಸಿನಿಮಾದಲ್ಲಿ ಸಮಂತ ಹಾಗೂ ನಯನತಾರಾ ನಟಿಸ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈಗಾಗ್ಲೇ ಆಗಿರೋ ಮಾತು ಕಥೆ ಪ್ರಕಾರ ಇಬ್ಬರೂ ನಟಿಮಣಿಯರು ಕಥೆ ಕೇಳಿ ಪಾತ್ರಕ್ಕೂ ಓಕೆ ಅಂತ ಹೇಳಿದ್ರು. ಆದ್ರೀಗ ಕಾತುವಕ್ಕಲು ರೆಂಡು ಕಾದಲ್‌ ಸಿನಿಮಾದಿಂದ ಸಮಂತ ಹೊರ ನಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ಒಂದೇ ಚಿತ್ರದಲ್ಲಿ ನಟಿಸ್ತಿಲ್ಲ ಸಮಂತಾ, ನಯನತಾರಾ: ಅಷ್ಟಕ್ಕೂ ಈ ಚಿತ್ರದಲ್ಲಿ ಸಮಂತಾ ಪಾತ್ರಕ್ಕೆ ಅಂದುಕೊಂಡಷ್ಟು ಪ್ರಾಮುಖ್ಯತೆ ಇಲ್ವಂತೆ. ಹೀಗಾಗಿ ಸಮಂತಾ ಆ ಸಿನಿಮಾದಿಂದ ಹೊರ ಬಂದಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ. ಆದ್ರೆ ಈ ಸುದ್ದಿ ಎಷ್ಟು ನಿಜ ಅನ್ನೋದನ್ನ ಚಿತ್ರತಂಡ ಅಧಿಕೃತವಾಗಿ ಕನ್‌ ಫರ್ಮ್‌ ಮಾಡಬೇಕಿದೆ. ಸದ್ಯ ಹರಿದಾಡ್ತಿರೋ ಮಾಹಿತಿ ಪ್ರಕಾರ ಸಮಂತಾ ಪಾತ್ರಕ್ಕೆ ನಟಿ ಕೀರ್ತಿ ಸುರೇಶ್‌ ಅಥವಾ ತ್ರಿಶಾರನ್ನ ಕರೆತರೋಕೆ ಚಿತ್ರತಂಡ ಫ್ಲ್ಯಾನ್‌ ಮಾಡ್ತಿದೆಯಂತೆ.

ಒಟ್ನಲ್ಲಿ ನಟರ ಮಸ್ಟಿ ಸ್ಟಾರ್‌ ಸಿನಿಮಾ ರೀತಿಯೇ ನಟಿಮಣಿಯರೂ ಒಂದಾಗಿ ಸಿನಿಮಾದಲ್ಲಿ ಅಭಿನಯಿಸ್ತಾರೆ ಅನ್ನೋದನ್ನ ಕೇಳಿ ಫುಲ್‌ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಈಗ ಈ ಸುದ್ದಿ ನಿರಾಸೆ ಮೂಡಿಸಿದೆ. ಹಾಗಾಗಿ ಕಾತುವಕ್ಕಲು ರೆಂಡು ಕಾದಲ್‌ ಚಿತ್ರದಲ್ಲಿ ಸಮಂತಾ ನಟಿ ಗಾಳಿ ಸುದ್ದಿಗೆ ಬ್ರೇಕ್‌ ಹಾಕ್ತಾರಾ. ಬೇರೆ ನಟಿ ಬಂದು ಕಮಾಲ್‌ ಮಾಡ್ತಾರಾ ಅನ್ನೋದು ಸದ್ಯದ ಕುತೂಹಲ.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್